AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾರದಿರೋ’ ಸಾಧನಕೇರಿಗೆ.. ಅನ್ನುತ್ತಿದೆ ಬೇಂದ್ರೆ ಅಜ್ಜನ ಪ್ರೀತಿಯ ಕೆರೆ!

ಧಾರವಾಡ: ಬಾ ಬಾರೊ, ಬಾರೋ ಬಾರೋ ಸಾಧನೆಕೇರಿಗೆ, ಮರಳಿ ನಿನ್ನೀ ಊರಿಗೆ ಎಂಬ ಕವಿತೆಯ ಸಾಲುಗಳನ್ನು ಕೇಳಿದಾಗ ನೆನಪಾಗೋದು ನಮ್ಮ ಪ್ರೀತಿಯ ಬೇಂದ್ರೆ ಅಜ್ಜ ಅರ್ಥಾತ್​ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಕವಿ ದಿ. ದ.ರಾ.ಬೇಂದ್ರೆ. ಅದರ ಜೊತೆ ನೆನಪಿಗೆ ಬರೋದು ಬೇಂದ್ರೆ ಅಜ್ಜನ ನೆಚ್ಚಿನ ಸಾಧನಕೇರಿ ಕೆರೆ. ತಮ್ಮ ಕಲ್ಪನಾಲೋಕದಲ್ಲಿ ರಚನೆಯಾಗುತ್ತಿದ್ದ ಅನೇಕ ಕವಿತೆಗಳಿಗೆ ಇದೇ ಕೆರೆ ಸ್ಫೂರ್ತಿ. ಹಾಗಾಗಿ, ಈ ಮಹಾನ್​ ಕವಿಯ ಸ್ಮರಣಾರ್ಥ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತವು ಸೇರಿ ಈ ಕೆರೆಯನ್ನು […]

‘ಬಾರದಿರೋ’ ಸಾಧನಕೇರಿಗೆ.. ಅನ್ನುತ್ತಿದೆ ಬೇಂದ್ರೆ ಅಜ್ಜನ ಪ್ರೀತಿಯ ಕೆರೆ!
ಸಾಧು ಶ್ರೀನಾಥ್​
| Edited By: |

Updated on: Jun 20, 2020 | 2:44 PM

Share

ಧಾರವಾಡ: ಬಾ ಬಾರೊ, ಬಾರೋ ಬಾರೋ ಸಾಧನೆಕೇರಿಗೆ, ಮರಳಿ ನಿನ್ನೀ ಊರಿಗೆ ಎಂಬ ಕವಿತೆಯ ಸಾಲುಗಳನ್ನು ಕೇಳಿದಾಗ ನೆನಪಾಗೋದು ನಮ್ಮ ಪ್ರೀತಿಯ ಬೇಂದ್ರೆ ಅಜ್ಜ ಅರ್ಥಾತ್​ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಖ್ಯಾತ ಕವಿ ದಿ. ದ.ರಾ.ಬೇಂದ್ರೆ. ಅದರ ಜೊತೆ ನೆನಪಿಗೆ ಬರೋದು ಬೇಂದ್ರೆ ಅಜ್ಜನ ನೆಚ್ಚಿನ ಸಾಧನಕೇರಿ ಕೆರೆ. ತಮ್ಮ ಕಲ್ಪನಾಲೋಕದಲ್ಲಿ ರಚನೆಯಾಗುತ್ತಿದ್ದ ಅನೇಕ ಕವಿತೆಗಳಿಗೆ ಇದೇ ಕೆರೆ ಸ್ಫೂರ್ತಿ.

ಹಾಗಾಗಿ, ಈ ಮಹಾನ್​ ಕವಿಯ ಸ್ಮರಣಾರ್ಥ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತವು ಸೇರಿ ಈ ಕೆರೆಯನ್ನು ಹತ್ತು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಕೆರೆಯ ಸುತ್ತ ಉದ್ಯಾನವೊಂದನ್ನು ರಚಿಸಿ, ಅದರಲ್ಲಿ ಸಂಗೀತ ಕಾರಂಜಿಯನ್ನೂ ಸಹ ಅಳವಡಿಸಿತ್ತು. ಇಷ್ಟೆಲ್ಲಾ ಅಭಿವೃದ್ಧಿಪಡಿಸಿದ ಆಡಳಿತವು ಒಂದು ಸಣ್ಣ ಅಲಕ್ಷ್ಯ ಕೂಡ ಮಾಡಿಬಿಡ್ತು. ಅದೇ ಇವತ್ತು ಕೆರೆಯ ದುಃಸ್ಥಿತಿ ಕಾರಣವಾಗಿ ಬಿಟ್ಟಿದೆ ಎಂಬುದು ಸ್ಥಳೀಯರ ಅಳಲು.

ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಕಲುಷಿತವಾಯ್ತು ಕೆರೆ: ಈ ಕೆರೆಗೆ ಮೊದಲಿನಿಂದಲೂ ಚರಂಡಿಯ ಕೊಳಚೆ ನೀರು ಹರಿದು ಬರುತ್ತಿತ್ತು. ಅಭಿವೃದ್ಧಿ ಕಾಮಗಾರಿಯ ವೇಳೆ ಈ ಚರಂಡಿ ನೀರು ಕೆರೆಗೆ ಸೇರದಂತೆ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಆದರೆ, ಅದರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಇದೀಗ ಕೆರೆಯ ನೀರು ಕಲುಷಿತಗೊಂಡಿದೆ. ಈ ಹಿಂದೆ ನೀರು ಅದೆಷ್ಟು ಸ್ವಚ್ಛವಾಗಿತ್ತು ಅಂದ್ರೆ, ಸ್ಥಳೀಯರು ಇದೇ ನೀರನ್ನು ಕುಡಿಯೋಕೆ ಹಾಗೂ ಅಡುಗೆಗೆ ಬಳಸುತ್ತಿದ್ದರು. ಆದರೆ ಈಗ ಕೆರೆಯಿಂದ ಹೊರಸೂಸುವ ದುರ್ವಾಸನೆಯಿಂದ ಅದರ ಹತ್ತಿರ ಸುಳಿದಾಡಲು ಕೂಡ ಹಿಂಜರಿಯುತ್ತಾರೆ.

ಕೆರೆಯನ್ನು ರಕ್ಷಿಸಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ: ಕೆರೆಯ ದುಃಸ್ಥಿತಿಯನ್ನು ಕಂಡ ಸ್ಥಳೀಯರು ಈ ಬಗ್ಗೆ ಹಲವಾರು ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಸಾಹಿತಿಗಳು, ಕವಿಗಳು ಕೂಡ ಸರ್ಕಾರಕ್ಕೆ ಬಹಳಷ್ಟು ಸಲ ಮನವಿ ಮಾಡಿಕೊಂಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ. ಜೊತೆಗೆ ಲಾಕ್​ಡೌನ್ ಸಮಯದಲ್ಲಿ ಉದ್ಯಾನವನದ ನಿರ್ವಹಣೆ ಬಗ್ಗೆ ಕೂಡ ಯಾರೂ ಕಾಳಜಿ ತೋರಿಸಲಿಲ್ಲವಂತೆ. ಹಾಗಾಗಿ ಆದಷ್ಟು ಶೀಘ್ರವಾಗಿ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂಬುದು ಇಲ್ಲಿನ ಸಾರ್ವಜನಿಕರ ಮನವಿ. ಆದರೆ ಜಿಲ್ಲಾಡಳಿತ ಮಾತ್ರ ಅದೇಕೋ ಈ ವಿಷಯದಲ್ಲಿ ಆಸಕ್ತಿ ತೋರುತ್ತಿಲ್ಲ ಎಂಬುದು ಸ್ಥಳೀಯರ ಆಳಲು.

ಒಟ್ನಲ್ಲಿ, ಬೇಂದ್ರೆಯವರ ಜನಪ್ರಿಯ ‘ಬಾ ಬಾರೋ, ಬಾರೋ ಬಾರೋ ಸಾಧನಕೇರಿಗೆ..’ ಕವನದ ಸಾಲುಗಳನ್ನು ಕೇಳಿ ಯಾರಾದ್ರೂ ಸಾಧನಕೇರಿಯತ್ತ ಒಮ್ಮೆ ಬಂದು ಅವರ ನೆಚ್ಚಿನ ಕೆರೆಯನ್ನ ಒಮ್ಮೆ ನೋಡಿಬಿಟ್ರೆ, ಕೂಡಲೇ ಬೇಂದ್ರೆ ಅಜ್ಜನ ಕ್ಷಮೆಯಾಚಿಸಿ, ಅವರ ಕವಿತೆಯ ಶೀರ್ಷಿಕೆಯನ್ನ ‘ಬಾರದಿರೋ ಸಾಧನಕೇರಿಗೆ’ ಎಂದು ಇಡಬೇಕಿತ್ತೇನೋ ಎಂದು ಅಂದುಕೊಳ್ಳೋದಂತೂ ಖಂಡಿತ. -ನರಸಿಂಹಮೂರ್ತಿ ಪ್ಯಾಟಿ

Follow Us
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ರವಿ ಬೆಳೆಗೆರೆ ಕಥೆಗೂ ಇದಕ್ಕೂ ಸಂಬಂಧವಿಲ್ಲ ಎಂದ ಓಂ ಪ್ರಕಾಶ್ ರಾವ್
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಈ ರಾಶಿಯವರು ಅನುಮಾನಗಳಿಗೆ ಆಸ್ಪದ ನೀಡಬೇಡಿ
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
ಇಂದು ಕೇತುಗ್ರಸ್ತ ಚಂದ್ರಗ್ರಹಣ ಏನೇನು ಮಾಡಬೇಕು ಗೊತ್ತಾ?
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
‘ಜೂನ್, ಜುಲೈ ಒಳಗೆ ದರ್ಶನ್ ರಿಲೀಸ್’: ಭವಿಷ್ಯ ನುಡಿದ ಓಂ ಪ್ರಕಾಶ್ ರಾವ್
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್