ಲಾಕ್​ಡೌನ್​ ಸಂದರ್ಭದಲ್ಲಿ ಸರ್ಕಾರಿ ಶಾಲೆಯಾಯ್ತು ಕಲರ್​ಫುಲ್ ಸ್ಕೂಲ್

ಧಾರವಾಡ: ಕೊರೊನಾ ಹಾವಳಿ ಶುರುವಾದಾಗಿನಿಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆ ಕಡೆಗೆ ಹೋಗಿಯೇ ಇಲ್ಲ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಇನ್ನೂ ಒಂದೆರಡು ತಿಂಗಳು ಇದೇ ರೀತಿ ಸಮಸ್ಯೆ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿವೆ. ಆದರೆ ಇಂಥ ಸಂದರ್ಭವನ್ನೇ ಬಳಸಿಕೊಂಡ ಧಾರವಾಡದ ಶಿಕ್ಷಕರೊಬ್ಬರು ತಮ್ಮ ಶಾಲೆಯನ್ನು ಸುಂದರಗೊಳಿಸೋ ಕೆಲಸದಲ್ಲಿ ತೊಡಗಿಕೊಂಡು ಜನರಿಗೆ ಅಚ್ಚರಿ ಮೂಡಿಸಿದ್ದಾರೆ. ಮಾರ್ಚ್ 24ರಿಂದ ದೇಶಾದ್ಯಂತ ಕೊರೊನಾ ಸೋಂಕಿನಿಂದಾಗಿ ಪ್ರಧಾನಿ ಮೋದಿ ಲಾಕ್‍ಡೌನ್‍ ಘೋಷಿಸಿದರು. ಅಲ್ಲಿಂದ ಇಂದಿನವರೆಗೂ ಯಾರೂ ಶಾಲೆಯತ್ತ ಸುಳಿದಿಲ್ಲ. ಆದರೆ ಧಾರವಾಡ ನಗರದ ನವಲಗುಂದ […]

ಲಾಕ್​ಡೌನ್​ ಸಂದರ್ಭದಲ್ಲಿ ಸರ್ಕಾರಿ ಶಾಲೆಯಾಯ್ತು ಕಲರ್​ಫುಲ್ ಸ್ಕೂಲ್
ಸಾಧು ಶ್ರೀನಾಥ್​ Edited By:

Updated on: Jun 09, 2020 | 2:20 PM

ಧಾರವಾಡ: ಕೊರೊನಾ ಹಾವಳಿ ಶುರುವಾದಾಗಿನಿಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆ ಕಡೆಗೆ ಹೋಗಿಯೇ ಇಲ್ಲ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಇನ್ನೂ ಒಂದೆರಡು ತಿಂಗಳು ಇದೇ ರೀತಿ ಸಮಸ್ಯೆ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿವೆ. ಆದರೆ ಇಂಥ ಸಂದರ್ಭವನ್ನೇ ಬಳಸಿಕೊಂಡ ಧಾರವಾಡದ ಶಿಕ್ಷಕರೊಬ್ಬರು ತಮ್ಮ ಶಾಲೆಯನ್ನು ಸುಂದರಗೊಳಿಸೋ ಕೆಲಸದಲ್ಲಿ ತೊಡಗಿಕೊಂಡು ಜನರಿಗೆ ಅಚ್ಚರಿ ಮೂಡಿಸಿದ್ದಾರೆ.

ಮಾರ್ಚ್ 24ರಿಂದ ದೇಶಾದ್ಯಂತ ಕೊರೊನಾ ಸೋಂಕಿನಿಂದಾಗಿ ಪ್ರಧಾನಿ ಮೋದಿ ಲಾಕ್‍ಡೌನ್‍ ಘೋಷಿಸಿದರು. ಅಲ್ಲಿಂದ ಇಂದಿನವರೆಗೂ ಯಾರೂ ಶಾಲೆಯತ್ತ ಸುಳಿದಿಲ್ಲ. ಆದರೆ ಧಾರವಾಡ ನಗರದ ನವಲಗುಂದ ರಸ್ತೆಯ ಹೆಬ್ಬಳ್ಳಿ ಫಾರ್ಮ್​ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮೌನೇಶ್ವರ ಕಮ್ಮಾರ ಮಾತ್ರ ಇದೇ ವೇಳೆಯಲ್ಲಿ ಶಾಲೆಗೆ ಬಣ್ಣ ಬಳಿದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರು, ಮಕ್ಕಳು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿದ್ದಾರೆ.

ಕಾಂಪೌಂಡ್ ಮೇಲೆ ಜಾಗೃತಿ ಮೂಡಿಸುವ ಕೆಲಸ:
ಮಾಸ್ಕ್ ಧರಿಸಿ ಕೊರೊನಾ ಓಡಿಸಿ, ಕೈ ತೊಳೆಯಲು ಸ್ಯಾನಿಟೈಜರ್ ಉಪಯೋಗಿಸಿ, ಜೀವ ಜಲ ಅಮೂಲ್ಯ, ಅದು ಹಾಳಾಗದಂತೆ ಕಾಪಾಡಿ, ಸ್ವದೇಶಿ ಉತ್ಪನ್ನಗಳನ್ನು ಬಳಸಿ, ದೇಶವನ್ನು ಸದೃಢಗೊಳಿಸಿ ಅಂತಾ ಸಾರುವ ಚಿತ್ರಗಳಿಂದ ಹಿಡಿದು ವನ್ಯ ಜೀವಿ, ಜೀವ ಜಲದ ರಕ್ಷಣೆ ಬಗ್ಗೆ ಸಂದೇಶ ಸಾರುವಂತಹ ಚಿತ್ರಗಳನ್ನು ಶಾಲೆಯ ಕಾಂಪೌಂಡ್ ಮೇಲೆ ಬಿಡಿಸುವ ಮೂಲಕ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಲಾಕ್​ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಜನರು ದೂರದಿಂದ ನೋಡಿದರೂ ಅವರಿಗೆ ಸಂದೇಶ ಕಾಣುವಂತೆ ಹಾಗೂ ಅದು ಎಲ್ಲರಿಗೂ ಅರ್ಥವಾಗುವಂತಹ ಚಿತ್ರಗಳನ್ನು ಬಿಡಿಸಿದ್ದಾರೆ. ಇನ್ನು ಸಹೋದರರಾದ ನಾಗಲಿಂಗ ಲೋಹಾರ್, ಸೋಮಶೇಖರ್ ಗಣಮುಖಿ ಅವರ ಸಹಾಯದಿಂದ ಶಾಲೆಯ ಆವರಣದಲ್ಲಿರುವ ಉದ್ಯಾನವನ, ಶೌಚಾಲಯ, ಕೋಣೆಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕೂಡ ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿಯೇ ಇದನ್ನೆಲ್ಲ ಮಾಡಿರೋ ಶಿಕ್ಷಕ ಕಮ್ಮಾರ್ ಅವರು ಶಾಲಾ ಆವರಣದಲ್ಲಿ ಬಾಳೆ ಗಿಡ ಸೇರಿದಂತೆ ಇತರೆ ಹೂ ಗಿಡಗಳನ್ನು ನೆಟ್ಟು ಉದ್ಯಾನವನವನ್ನು ನಿರ್ಮಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸುವ ಮೌನೇಶ್ವರ ಕಮ್ಮಾರ್ ಅವರು ಪ್ರತಿಯೊಬ್ಬರಿಗೂ ನಮ್ಮ ಶಾಲೆ, ನಮ್ಮ ಮಕ್ಕಳು ಎನ್ನುವ ಹೆಮ್ಮೆ ಇರಬೇಕು. ಅಂದಾಗ ಮಾತ್ರ ಶಾಲೆಯಲ್ಲಿ ಏನಾದರೂ ಇತರೆ ಚಟುವಟಿಕೆಗಳ ಕಾರ್ಯಗಳು ಬರಲು ಸಾಧ್ಯವಾಗಲಿದೆ. ನಮ್ಮ ಶಾಲೆಗೆ ನಮ್ಮ ಕೈಲಿಂದ ಸಾಧ್ಯವಾದಷ್ಟು ಕೆಲಸ ಮಾಡಿದ್ದೇವೆ ಅಷ್ಟೇ. ಶಾಲೆ ಸ್ವಚ್ಛವಾಗಿದ್ದರೆ ಕಲಿಕಾ ವಾತಾವರಣ ಚೆನ್ನಾಗಿರಲಿದೆ ಎನ್ನುತ್ತಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us