AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್ಚೆತ್ತ ಅಧಿಕಾರಿಗಳು, ಟೋಲ್‌ ಬಳಿ ಕಾಮಗಾರಿ ಆರಂಭ: ಜನತೆಗೆ ಇನ್ನಾದರೂ ಸಿಗುತ್ತಾ ನೆಮ್ಮದಿ

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಜಾರಿಯಾಗಿರುವ ಬಿ.ಆರ್.ಟಿ.ಎಸ್. ಯೋಜನೆಯಿಂದ ಎಷ್ಟು ಜನರಿಗೆ ಅನುಕೂಲವಾಗಿದೆಯೋ ಗೊತ್ತಿಲ್ಲ. ಆದರೆ ಅದರಿಂದ ಸಾವಿರಾರು ಜನರಿಗೆ ಅನಾನುಕೂಲ ಆಗಿದ್ದಂತೂ ನಿಜ. ಯಾಕಂದ್ರೆ ಈ ಯೋಜನೆಯ ಕಾಮಗಾರಿ ನಡೆದ ಐದು ವರ್ಷಗಳ ಕಾಲ ಜನತೆ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ. ಈ ಯೋಜನೆಯ ಕಾಮಾಗಾರಿ ನಡೆಯುವ ವೇಳೆ ಅವಳಿ ನಗರಗಳ ನಡುವೆ ಸಂಚರಿಸೋದೇ ದೊಡ್ಡ ತಲೆ ನೋವಾಗಿತ್ತು. ಐದು ವರ್ಷಗಳ ಸುದೀರ್ಘ ಸಮಯದ ಬಳಿಕ ಬಿ.ಆರ್.ಟಿ.ಎಸ್. ಯೋಜನೆ ಏನೋ ಜಾರಿಯಾಯಿತು. ಆದರೆ ಇದರ ಬೆನ್ನಲ್ಲೇ […]

ಎಚ್ಚೆತ್ತ ಅಧಿಕಾರಿಗಳು, ಟೋಲ್‌ ಬಳಿ ಕಾಮಗಾರಿ ಆರಂಭ:  ಜನತೆಗೆ ಇನ್ನಾದರೂ ಸಿಗುತ್ತಾ ನೆಮ್ಮದಿ
Guru
| Edited By: |

Updated on:Jun 18, 2020 | 3:55 PM

Share

ಧಾರವಾಡ: ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ನಡುವೆ ಜಾರಿಯಾಗಿರುವ ಬಿ.ಆರ್.ಟಿ.ಎಸ್. ಯೋಜನೆಯಿಂದ ಎಷ್ಟು ಜನರಿಗೆ ಅನುಕೂಲವಾಗಿದೆಯೋ ಗೊತ್ತಿಲ್ಲ. ಆದರೆ ಅದರಿಂದ ಸಾವಿರಾರು ಜನರಿಗೆ ಅನಾನುಕೂಲ ಆಗಿದ್ದಂತೂ ನಿಜ. ಯಾಕಂದ್ರೆ ಈ ಯೋಜನೆಯ ಕಾಮಗಾರಿ ನಡೆದ ಐದು ವರ್ಷಗಳ ಕಾಲ ಜನತೆ ಅನುಭವಿಸಿದ್ದ ತೊಂದರೆ ಅಷ್ಟಿಷ್ಟಲ್ಲ.

ಈ ಯೋಜನೆಯ ಕಾಮಾಗಾರಿ ನಡೆಯುವ ವೇಳೆ ಅವಳಿ ನಗರಗಳ ನಡುವೆ ಸಂಚರಿಸೋದೇ ದೊಡ್ಡ ತಲೆ ನೋವಾಗಿತ್ತು. ಐದು ವರ್ಷಗಳ ಸುದೀರ್ಘ ಸಮಯದ ಬಳಿಕ ಬಿ.ಆರ್.ಟಿ.ಎಸ್. ಯೋಜನೆ ಏನೋ ಜಾರಿಯಾಯಿತು. ಆದರೆ ಇದರ ಬೆನ್ನಲ್ಲೇ ಯೋಜನೆ ವೈಜಾನಿಕವಾಗಿಲ್ಲ ಅನ್ನೋ ಆರೋಪಗಳೂ ಕೇಳಿ ಬಂದಿದ್ದವು. ಅವೆಲ್ಲಾ ಈಗ ಒಂದೊಂದಾಗಿ ನಿಜವಾಗತೊಡಗಿವೆ. ಮಳೆ ಬಂದ್ರೆ ಕೆರೆಯಾಗುವ ಧಾರವಾಡ ಟೋಲ್‌ ನಾಕಾ ಅದರಲ್ಲೂ ಧಾರವಾಡ ನಗರದ ಟೋಲ್ ನಾಕಾ ಬಳಿಯ ಜನರಂತೂ ಈ ಯೋಜನೆಯಿಂದಾಗಿ ಕಂಗೆಟ್ಟು ಹೋಗಿದ್ದಾರೆ. ಚಿಕ್ಕ ಮಳೆ ಬಂದರೂ ಸಾಕು ಟೋಲ್ ನಾಕಾ ಕೆರೆಯಾಗಿ ಮಾರ್ಪಡುತ್ತೆ. ಮಾಳಮಡ್ಡಿ, ಲಕ್ಷ್ಮೀಸಿಂಗನಕೆರೆ ಬಡಾವಣೆಗಳ ನೀರು ಇದೇ ಟೋಲ್ ನಾಕಾ ಮೂಲಕ ಜನ್ನತ್ ನಗರದಲ್ಲಿ ಹಾಯ್ದು ಮುಂದೆ ಹೋಗಬೇಕು. ಆದರೆ ಬಿ.ಆರ್‌.ಟಿೆ.ಸ್‌ ಜಾರಿಯಾದ ನಂತರ ನೀರು ಇಲ್ಲೇ ನಿಲ್ಲತೊಡಗಿದೆ. ಕಾರಣ ನೀರು ಸಾಗಲು ದಾರಿಯೇ ಇಲ್ಲ.

ಜನರ ಆಕ್ರೋಶಕ್ಕೆ ಎಚ್ಚೆತ್ತ ಅಧಿಕಾರಿಗಳು ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಶಾಸಕ ಅರವಿಂದ ಬೆಲ್ಲದ್ ಕೂಡಾ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಇದೆಲ್ಲಕ್ಕೂ ಹೆಚ್ಚಾಗಿ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಬಿ.ಆರ್.ಟಿ.ಎಸ್. ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಟೋಲ್ ನಾಕಾ ಬಳಿ ನೀರು ಸರಾಗವಾಗಿ ಹರಿದು ಮುಂದಕ್ಕೆ ಸಾಗುವಂತೆ ಅನುವು ಮಾಡಿಕೊಡಲು ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ.

ಮುಂಗಾರು ಈಗಷ್ಟೇ ಆರಂಭವಾಗಿದ್ದು, ಮಳೆ ಹೆಚ್ಚಾಗೋ ಮುನ್ನವೇ ಕಾಮಗಾರಿ ಮುಗಿಸೋ ಲೆಕ್ಕಾಚಾರ ಅಧಿಕಾರಿಗಳದ್ದು. ಆರಂಭವಾಗಿರುವ ಈ ಕಾಮಗಾರಿ ಎಷ್ಟರಮಟ್ಟಿಗೆ ಸಮಸ್ಯೆಗೆ ಪರಿಹಾರ ವಾಗಲಿದೆ ಎನ್ನೋುದು ಕಾಮಗಾರಿ ಮುಗಿದ ಬಳಿಕ ಮಳೆ ಬಂದಾಗಲೇ ಗೊತ್ತಾಗೋದು -ನರಸಿಂಹಮೂರ್ತಿ ಪ್ಯಾಟಿ

Published On - 3:55 pm, Thu, 18 June 20

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!