AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾವ ಸಚಿವರೂ ಜಿಲ್ಲೆಗಳಿಗೆ ಹೋಗಿ ಕೊವಿಡ್ ಸಭೆ ಮಾಡಿಲ್ಲ, ಜನರ ಸಮಸ್ಯೆಯನ್ನೂ ಆಲಿಸಿಲ್ಲ: ಡಿ.ಕೆ.ಶಿವಕುಮಾರ್ ಆರೋಪ

ರಾಜ್ಯ ಸರ್ಕಾರಕ್ಕೆ ಲಾಕ್​ಡೌನ್ ಮಾಡುವ ಚಿಂತನೆ ಇತ್ತು. ಆದರೆ ಪ್ರಧಾನಿ ಸಲಹೆಯ ಬಳಿಕ ಲಾಕ್​ಡೌನ್ ಮಾಡಿಲ್ಲ. ಪ್ರಧಾನಿ ಹೇಳಿದ ತಕ್ಷಣ ಕಾನೂನು ಬದಲಿಸಲು ಆಗುತ್ತಾ? ಎಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ರಾಜ್ಯದಲ್ಲಿ ಬೆಡ್, ಆಕ್ಸಿಜನ್ ಕೊರತೆ ಸಾಕಷ್ಟಿದೆ ಎಂದರು.

ಯಾವ ಸಚಿವರೂ ಜಿಲ್ಲೆಗಳಿಗೆ ಹೋಗಿ ಕೊವಿಡ್ ಸಭೆ ಮಾಡಿಲ್ಲ, ಜನರ ಸಮಸ್ಯೆಯನ್ನೂ ಆಲಿಸಿಲ್ಲ: ಡಿ.ಕೆ.ಶಿವಕುಮಾರ್ ಆರೋಪ
ಡಿ.ಕೆ. ಶಿವಕುಮಾರ್
sandhya thejappa
|

Updated on: Apr 21, 2021 | 12:29 PM

Share

ಬೆಂಗಳೂರು: ಜಿಲ್ಲೆಗಳಿಗೆ ಹೋಗಿ ಯಾವ ಸಚಿವರೂ ಕೊವಿಡ್ ಸಭೆ ಮಾಡಿಲ್ಲ. ಜೊತೆಗೆ ಆಸ್ಪತ್ರೆಗಳಿಗೆ ಹೋಗಿ ಜನರ ಸಮಸ್ಯೆಯನ್ನೂ ಆಲಿಸಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಕೊವಿಡ್ ಕೆಲಸಕ್ಕೆ ಅಧಿಕಾರಿಗಳನ್ನು ಸಹ ಬಳಸಿಕೊಳ್ಳುತ್ತಿಲ್ಲ. ಕೊವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಇದಕ್ಕೆ ರಾಜ್ಯದಲ್ಲಿ ಕೊವಿಡ್ ಕೇಸ್ ಹೆಚ್ಚಾಗಿರುವುದೇ ಸಾಕ್ಷ್ಯ. ಸರ್ಕಾರದ ವೈಫಲ್ಯಗಳ ಬಗ್ಗೆ ನಾನು ನಿನ್ನೆ ರಾಜ್ಯಪಾಲರ ಮುಂದೆ ಹೇಳಿದ್ದೇನೆ ಎಂದು ಶಿವಕುಮಾರ್ ಹೇಳಿದ್ದಾರೆ.

ರಾಜ್ಯ ಸರ್ಕಾರಕ್ಕೆ ಲಾಕ್​ಡೌನ್ ಮಾಡುವ ಚಿಂತನೆ ಇತ್ತು. ಆದರೆ ಪ್ರಧಾನಿ ಸಲಹೆಯ ಬಳಿಕ ಲಾಕ್​ಡೌನ್ ಮಾಡಿಲ್ಲ. ಪ್ರಧಾನಿ ಹೇಳಿದ ತಕ್ಷಣ ಕಾನೂನು ಬದಲಿಸಲು ಆಗುತ್ತಾ? ಎಂದು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ರಾಜ್ಯದಲ್ಲಿ ಬೆಡ್, ಆಕ್ಸಿಜನ್ ಕೊರತೆ ಸಾಕಷ್ಟಿದೆ. ಇದು ರಾಜ್ಯ ಸರ್ಕಾರದ ವೈಫಲ್ಯ. ತಜ್ಞರ ಸಮಿತಿಯ ವರದಿಯಂತೆ ನಿರ್ಧರಿಸಲು ಹೇಳಿದ್ದೆವು. ಆದರೆ ಮೋದಿ ಹೇಳಿದ ಬಳಿಕ ನಿರ್ಧಾರ ಬದಲಿಸಿದ್ದಾರೆ. ಆದರೆ ಸರ್ಕಾರ ಜಾರಿ ಮಾಡಿದ ನಿಯಮಗಳನ್ನು ಪಾಲಿಸಿ ಎಂದು ಅಭಿಪ್ರಾಯಪಟ್ಟರು.

ಕೊರೊನಾಗೆ ಬಲಿಯಾದವರ ಅಂತ್ಯಕ್ರಿಯೆಗಾಗಿ 10 ಎಕರೆ ಜಾಗದಲ್ಲಿ ವ್ಯವಸ್ಥೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ ಶಿವಕುಮಾರ್,10 ಎಕರೆ ಜಾಗ ಮಾಡಿಕೊಟ್ಟರೆ ಸ್ವಲ್ಪ ಸಮಸ್ಯೆ ಬಗೆಹರಿಯುತ್ತದೆ. ಸುರೇಶ್ ಅಂಗಡಿ ಮೃತಪಟ್ಟಾಗ ಸರಿಯಾಗಿ ನಡೆಸಿಕೊಡಲಿಲ್ಲ. ಚುನಾವಣೆ ಎಂದು ನಾನು ಏನೂ ಮಾತನಾಡಲು ಹೋಗಲಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ

ಮೇ 1 ರಿಂದ ಕೊವಿಡ್ ಲಸಿಕೆ 250 ರೂ.ಗೆ ಸಿಗುವುದಿಲ್ಲ; ದರ ದುಪ್ಪಟ್ಟು ಆಗಲಿದೆ!

ಬೆಂಗಳೂರಿನಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕಿತರ ಮರಣ ಪ್ರಮಾಣ; ಅಂತ್ಯಸಂಸ್ಕಾರಕ್ಕೆ 13 ಚಿತಾಗಾರಗಳಿಗೆ ಅನುಮತಿ ನೀಡಿದ ಸರ್ಕಾರ

(DK Shivakumar alleges that did not convene about covid in districts and did not listen to issue of people)