ಸತೀಶ್ ಜಾರಕಿಹೊಳಿ ಜೊತೆ ಯಾವುದೇ ವೈಮನಸ್ಸಿಲ್ಲ ಅಂತ ಸಾರ್ವಜನಿಕವಾಗಿ ತೋರುವ ಪ್ರಯತ್ನ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆಯೇ?

ಮತ್ತೊಬ್ಬ ಸಚಿವ ಕೆಎನ್ ರಾಜಣ್ಣ ಹೆಗಲ ಮೇಲೆ ಕೈ ಹಾಕ್ಕೊಂಡು ಬರುವ ಶಿವಕುಮಾರ್ ಎಡಗೈಯನ್ನು ಸತೀಶ್ ಮೇಲೆ ಹಾಕಿ ಆತ್ಮೀಯವಾಗಿ ಹರಟುತ್ತಾ ಮುಂದೆ ಸಾಗುತ್ತಾರೆ. ಸತೀಶ್ ಜೊತೆ ಡಿಕೆ ಸಹೋದರರು ಬಹಳ ಸಲುಗೆಯಿಂದ ವರ್ತಿಸುವುದರ ಹಿಂದೆ ಬೇರೆ ಕಾರಣವೇನಾದರೂ ಇದೆಯೇ? ಇರಬಹುದು ಮಾರಾಯ್ರೇ. ಇಂದು ಬೆಳಗ್ಗೆ ಡಿಕೆ ಸುರೇಶ್ ಸತೀಶ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.

ಸತೀಶ್ ಜಾರಕಿಹೊಳಿ ಜೊತೆ ಯಾವುದೇ ವೈಮನಸ್ಸಿಲ್ಲ ಅಂತ ಸಾರ್ವಜನಿಕವಾಗಿ ತೋರುವ ಪ್ರಯತ್ನ ಡಿಕೆ ಶಿವಕುಮಾರ್ ಮಾಡುತ್ತಿದ್ದಾರೆಯೇ?
|

Updated on: Nov 09, 2023 | 8:01 PM

ಬೆಂಗಳೂರು: ತನ್ನ ಮತ್ತು ಸತೀಶ್ ಜಾರಕಿಹೊಳಿ (Satish Jarkiholi) ನಡುವೆ ಯಾವುದೇ ವೈಮನಸ್ಸಿಲ್ಲ ಅಂತ ಮಾಧ್ಯಮಗಳ ಮೂಲಕ ಜನರಿಗೆ ಅದರಲ್ಲೂ ವಿಶೇಷವಾಗಿ ವಿರೋಧ ಪಕ್ಷಗಳ ನಾಯಕರಿಗೆ ತೋರಿಸುವ ಪ್ರಯತ್ನವನ್ನು ಡಿಕೆ ಶಿವಕುಮಾರ್ (DK Shivakumar) ಮಾಡುತ್ತಿದ್ದಾರೆಯೇ? ಇವತ್ತು ಸಂಪುಟ ಸಭೆಯಲ್ಲಿ ಪಾಲ್ಗೊಳ್ಳಲು ವಿಧಾನ ಸೌಧದೊಳಗೆ ಹೋಗುವ ಮೊದಲು ಅವರು ವರ್ತಿಸಿದ ರೀತಿ ಹಾಗಿತ್ತು ಮಾರಾಯ್ರೇ! ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಗೆ ಸಚಿವರು ತಂಡಗಳಲ್ಲಿ ಆಗಮಿಸಿದರು. ಮಿನಿಸ್ಟ್ರುಗಳಿದ್ದಲ್ಲಿ ಅವರ ಅಂಗರಕ್ಷಕರು, ಹಿಂಬಾಲಕರು ಚೇಲಾಗಳು ಇರಲೇಬೇಕು, ಇಲ್ನೋಡಿ ಮೊದಲಿಗೆ ಈ ಗುಂಪಿನಲ್ಲಿ ಇಬ್ಬರು ಸಚಿವರು ಮಾತ್ರ ಕಾಣುತ್ತಾರೆ, ಸತೀಶ್ ಜಾರಕಿಹೊಳಿ ಮತ್ತು ರಾಮಲಿಂಗಾರೆಡ್ಡಿ (Ramalinga Reddy). ಆದರೆ ಬೇರೆ ಜನ ಅವರನ್ನು ಸುತ್ತುವರೆದಿದ್ದಾರೆ. ಸತೀಶ್ ಎತ್ತರದ ಆಳು ಮಾರಾಯ್ರೇ, ಗುಂಪಿನಲ್ಲಿ ಎದ್ದು ಕಾಣುತ್ತಾರೆ. ನಡೆದ ಬರುತ್ತಿದ್ದ ಅವರು ಪ್ರಾಯಶಃ ಹಿಂದಿನಿಂದ ಶಿವಕುಮಾರ್ ಕೂಗಿದ್ದಕ್ಕೆ ನಿಂತು ತಿರುಗಿ ನೋಡುತ್ತಾರೆ. ಮತ್ತೊಬ್ಬ ಸಚಿವ ಕೆಎನ್ ರಾಜಣ್ಣ ಹೆಗಲ ಮೇಲೆ ಕೈ ಹಾಕ್ಕೊಂಡು ಬರುವ ಶಿವಕುಮಾರ್ ಎಡಗೈಯನ್ನು ಸತೀಶ್ ಮೇಲೆ ಹಾಕಿ ಆತ್ಮೀಯವಾಗಿ ಹರಟುತ್ತಾ ಮುಂದೆ ಸಾಗುತ್ತಾರೆ. ಸತೀಶ್ ಜೊತೆ ಡಿಕೆ ಸಹೋದರರು ಬಹಳ ಸಲುಗೆಯಿಂದ ವರ್ತಿಸುವುದರ ಹಿಂದೆ ಬೇರೆ ಕಾರಣವೇನಾದರೂ ಇದೆಯೇ? ಇರಬಹುದು ಮಾರಾಯ್ರೇ. ಇಂದು ಬೆಳಗ್ಗೆ ಡಿಕೆ ಸುರೇಶ್ ಸತೀಶ್ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಶಿವಮೊಗ್ಗ ಫ್ರೀಡಂ ಪಾರ್ಕ್​ನಲ್ಲಿ ಸ್ವದೇಶಿ ಮೇಳದ ಕಲರವ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಜಮೀರ್ ಅಹ್ಮದ್ ವಜಾ ಮಾಡುವಂತೆ  ಸದನದಲ್ಲಿ ಬಿಜೆಪಿ ಶಾಸಕರಿಂದ ಪ್ರತಿಭಟನೆ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ: ಸಿಎಂ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ; 7 ಜನರನ್ನು ಬಂಧಿಸಲಾಗಿದೆ: ಪೊಲೀಸ್ ಆಯುಕ್ತ
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸಿದ್ದರಾಮಯ್ಯ ಸರ್ಕಾರ ಈಗ ಮೇನಲ್ಲಿ ಪತನವಾಗುತ್ತೆ ಅಂತಿದ್ದಾರೆ ಕುಮಾರಸ್ವಾಮಿ
ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ