ರಿಯಲ್ ಎಸ್ಟೇಟ್ ಬಗ್ಗೆ ಡಿಕೆಶಿ ಸ್ವಾರಸ್ಯಕರ ಮಾತು, ಅದು ಇ.ಡಿಗೆ ನೀಡಿದ ಸಂದೇಶವಾ?

ಮೈಸೂರು: ಚಾಮುಂಡಿ ಕ್ರೀಡಾಂಗಣಕ್ಕೆ 2ಎಕರೆ ಜಾಗ ನಾನೇ ಫ್ರೀಯಾಗಿ ಕೊಟ್ಟಿದ್ದೇನೆ ಎಂದು ಮೈಸೂರಿನ ಅಳಿಯ, ಕಾಂಗ್ರೆಸ್​ ಶಾಸಕ ಡಿ.ಕೆ.ಶಿವಕುಮಾರ್ ಬೆಳಗ್ಗೆಯಷ್ಟೇ ಸಭೆಯೊದಂರಲ್ಲಿ ಹೇಳಿದ್ದರು. ಅದಾದ ಬಳಿಕ ಮತ್ತೊಂದು ಸುತ್ತು ಸಭೆ ಸೇರಿದ್ದ ಕಾಂಗ್ರೆಸ್​ ಮುಖಂಡರು ರಿಯಲ್ ಎಸ್ಟೇಟ್ ಬಗ್ಗೆ ಸ್ವಾರಸ್ಯಕರವಾಗಿ ವಿಚಾರ ಹಂಚಿಕೊಂಡಿದ್ದಾರೆ. ಮಾಜಿ ಸಚಿವ ಡಿಕೆಶಿ, ಸಾ.ರಾ.ಮಹೇಶ್, ಧ್ರುವನಾರಾಯಣ ನಡುವೆ ಈ ಮಾತುಕತೆ ನಡೆದಿದೆ. ಡಿಕೆಶಿ ಜೊತೆಗಿನ ಚರ್ಚೆ ವೇಳೆ ರಿಯಲ್ ಎಸ್ಟೇಟ್​ಗೆ ಈ ಹಿಂದೆ ಬೂಮ್ ಇತ್ತು ಎಂದು ಸಂಸದ ಧ್ರುವನಾರಾಯಣ ಹೇಳಿದರು. ಅದಕ್ಕೆ […]

ರಿಯಲ್ ಎಸ್ಟೇಟ್ ಬಗ್ಗೆ ಡಿಕೆಶಿ ಸ್ವಾರಸ್ಯಕರ ಮಾತು, ಅದು ಇ.ಡಿಗೆ ನೀಡಿದ ಸಂದೇಶವಾ?
ಸಾಧು ಶ್ರೀನಾಥ್​

Updated on: Nov 08, 2019 | 1:24 PM

ಮೈಸೂರು: ಚಾಮುಂಡಿ ಕ್ರೀಡಾಂಗಣಕ್ಕೆ 2ಎಕರೆ ಜಾಗ ನಾನೇ ಫ್ರೀಯಾಗಿ ಕೊಟ್ಟಿದ್ದೇನೆ ಎಂದು ಮೈಸೂರಿನ ಅಳಿಯ, ಕಾಂಗ್ರೆಸ್​ ಶಾಸಕ ಡಿ.ಕೆ.ಶಿವಕುಮಾರ್ ಬೆಳಗ್ಗೆಯಷ್ಟೇ ಸಭೆಯೊದಂರಲ್ಲಿ ಹೇಳಿದ್ದರು. ಅದಾದ ಬಳಿಕ ಮತ್ತೊಂದು ಸುತ್ತು ಸಭೆ ಸೇರಿದ್ದ ಕಾಂಗ್ರೆಸ್​ ಮುಖಂಡರು ರಿಯಲ್ ಎಸ್ಟೇಟ್ ಬಗ್ಗೆ ಸ್ವಾರಸ್ಯಕರವಾಗಿ ವಿಚಾರ ಹಂಚಿಕೊಂಡಿದ್ದಾರೆ. ಮಾಜಿ ಸಚಿವ ಡಿಕೆಶಿ, ಸಾ.ರಾ.ಮಹೇಶ್, ಧ್ರುವನಾರಾಯಣ ನಡುವೆ ಈ ಮಾತುಕತೆ ನಡೆದಿದೆ.

ಡಿಕೆಶಿ ಜೊತೆಗಿನ ಚರ್ಚೆ ವೇಳೆ ರಿಯಲ್ ಎಸ್ಟೇಟ್​ಗೆ ಈ ಹಿಂದೆ ಬೂಮ್ ಇತ್ತು ಎಂದು ಸಂಸದ ಧ್ರುವನಾರಾಯಣ ಹೇಳಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಅದರಿಂದ ಸಾ.ರಾ.ಮಹೇಶ್, ರಾಮದಾಸ್ ಆರ್ಥಿಕವಾಗಿ ಸದೃಢರಾದ್ರು ಎಂದ್ರು.

1ಲಕ್ಷದ ಸೈಟ್ 4ಕೋಟಿ ರೂ ಆಗಿದೆ, ಏನಂತ ಅಫಿಡವಿಟ್ ಕೊಡ್ಲಿ!?
ಇದೇ ವೇಳೆ ತಮ್ಮದೂ ಒಂದು ಅನುಭವವನ್ನು ಹಂಚಿಕೊಂಡ ಅವರು ಬಂಗಾರಪ್ಪ ನನಗೆ ಒಂದು ಲಕ್ಷಕ್ಕೆ ಒಂದು ಸೈಟ್ ಕೊಟ್ಟಿದ್ದರು. ಆ ಸೈಟ್ ಬೆಲೆ ಈಗ ನಾಲ್ಕು ಕೋಟಿ ರೂಪಾಯಿ ಆಗಿದೆ. ನಾನು ಅಫಿಡವಿಟ್ ಸಲ್ಲಿಸುವಾಗ 1 ಲಕ್ಷ ಅಂತ ಕೊಡಬೇಕಾ? ನಾಲ್ಕು ಕೋಟಿ ಕೊಡಬೇಕಾ ಗೊತ್ತಾಗುತ್ತಿಲ್ಲ ಎಂದು ಡಿಕೆಶಿ ಪೇಚಾಡಿದರು.

ಅಕ್ರಮ ಆಸ್ತಿ ಸಂಪಾದಿಸುವುದರಲ್ಲಿ ಡಿಕೆ ಶಿವಕುಮಾರ್ ಗಿನ್ನಿಸ್​ ದಾಖಲೆ ಮಾಡಿದ್ದಾರೆ ಎಂದು ಇ.ಡಿ. ಪರ ವಕೀಲ ನಟರಾಜ್​ ಅವರು ಇತ್ತೀಚೆಗೆ ದಿಲ್ಲಿ ಕೋರ್ಟ್​ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರ ಇಂದಿನ ಮಾತು ಇ.ಡಿ.ಗೆ ನೀಡಿದ ಬಹಿರಂಗ ಉತ್ತರದಂತೆ ಇತ್ತು ಎಂದು ಮೈಸೂರು ಜನ ಮಾತನಾಡಿದ್ದಾರೆ.

Published On - 1:21 pm, Fri, 8 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us