ಕೊಳ್ಳುವಾಗಲೇ ಕಣ್ಣೀರು ತರಿಸ್ತಿದೆ ಈರುಳ್ಳಿ, ಇನ್ನೂ 2 ತಿಂಗಳು ಇದೇ ಕಣ್ಣೀರು ಗೋಳು

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಈರುಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಕೊಳ್ಳುವಾಗಲೇ ಮಹಿಳೆಯರಿಗೆ ಕಣ್ಣೀರು ತರಿಸ್ತಿದೆ. ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿದ್ದು, ದೇಶದಲ್ಲೇ ಎರಡನೇ ಅತಿಹೆಚ್ಚು ಈರುಳ್ಳಿ ಬೆಳೆಯವ ಕರ್ನಾಟಕದಲ್ಲೇ ಈರುಳ್ಳಿ ದರ 80 ರೂ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪ್ರತಿ ಕೆಜಿgಎ 50 ರೂ ಗೆ ಏರಿದೆ. ಇನ್ನು, ಗಾತ್ರದಲ್ಲಿ ಸಣ್ಣವಾಗಿರುವ ಈರುಳ್ಳಿಯ ದರ ಕೆಜಿಗೆ 30 ರಿಂದ 40 ರೂಗೆ ಮಾರಾಟವಾಗುತ್ತಿದೆ. ಈರುಳ್ಳಿ ಬೆಲೆ ಕೇಳಿ ಗೃಹಿಣಿಯರು ಕಣ್ಣೀರೋ […]

ಕೊಳ್ಳುವಾಗಲೇ ಕಣ್ಣೀರು ತರಿಸ್ತಿದೆ ಈರುಳ್ಳಿ, ಇನ್ನೂ 2 ತಿಂಗಳು ಇದೇ ಕಣ್ಣೀರು ಗೋಳು
ಈರುಳ್ಳಿ ದರದಲ್ಲಿ ಏರಿಕೆ
ಸಾಧು ಶ್ರೀನಾಥ್​

Updated on: Sep 24, 2019 | 11:53 AM

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಈರುಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಕೊಳ್ಳುವಾಗಲೇ ಮಹಿಳೆಯರಿಗೆ ಕಣ್ಣೀರು ತರಿಸ್ತಿದೆ.

ಅತಿವೃಷ್ಟಿಯಿಂದಾಗಿ ಬೆಳೆಹಾನಿಯಾಗಿದ್ದು, ದೇಶದಲ್ಲೇ ಎರಡನೇ ಅತಿಹೆಚ್ಚು ಈರುಳ್ಳಿ ಬೆಳೆಯವ ಕರ್ನಾಟಕದಲ್ಲೇ ಈರುಳ್ಳಿ ದರ 80 ರೂ ತಲುಪಿದೆ. ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಪ್ರತಿ ಕೆಜಿgಎ 50 ರೂ ಗೆ ಏರಿದೆ. ಇನ್ನು, ಗಾತ್ರದಲ್ಲಿ ಸಣ್ಣವಾಗಿರುವ ಈರುಳ್ಳಿಯ ದರ ಕೆಜಿಗೆ 30 ರಿಂದ 40 ರೂಗೆ ಮಾರಾಟವಾಗುತ್ತಿದೆ.

ಈರುಳ್ಳಿ ಬೆಲೆ ಕೇಳಿ ಗೃಹಿಣಿಯರು ಕಣ್ಣೀರೋ ಕಣ್ಣೀರು ..
ಇನ್ನೂ 2 ತಿಂಗಳು ಈರುಳ್ಳಿ ಬೆಲೆ ಇದೇ ರೀತಿ ಏರಿಕೆಯಾಗೋ ಸಾಧ್ಯತೆ ಇದೆ ಎನ್ನಲಾಗಿದೆ. ಈರುಳ್ಳಿ ಮಾರುಕಟ್ಟೆಗೆ ಪೂರೈಕೆಯಲ್ಲೂ ಕೊರತೆ ಎದುರಾಗಿದೆ. ಕಳೆದ ಒಂದು ತಿಂಗಳಿನಿಂದ ಈರುಳ್ಳಿ ದರ ನಿರಂತರ ಏರಿಕೆ ಕಾಣ್ತಿದೆ. ಈರುಳ್ಳಿ, ಕಳೆದ ವಾರ ನಲವತ್ತು ರುಪಾಯಿ ಮಾರಾಟ ದರ ಕಂಡಿತ್ತು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us