ರಾಜ್ಯ ಸಾರಿಗೆ ನಿಗಮಗಳು ಸಂಬಳ ಕೊಡ್ತಿಲ್ಲ; ಲಕ್ಷಾಂತರ ನೌಕರರು ಕಂಗಾಲು

ಬೆಂಗಳೂರು:  ಈಗಾಗಲೇ ಭಾರೀ ನಷ್ಟದಿಂದ ನಡೆಯುತ್ತಿರುವ ಸಾರ್ವಜನಿಕ ಸಾರಿಗೆ ಸಂಸ್ಥೆ ಇದೀಗ ಕೊರೊನಾದಿಂದಾಗಿ ಮತ್ತಷ್ಟು ನಷ್ಟ ಅನುಭವಿಸಿದೆ. KSRTC ಸುಮಾರು 900 ಕೋಟಿ ನಷ್ಟ ಅನುಭವಿಸಿದರೆ, ಬಿಎಂಟಿಸಿ ಸುಮಾರು 450 ಕೋಟಿ ನಷ್ಟದಲ್ಲಿದೆ. ಇದರಿಂದ ನೌಕರರ ವೇತನ ಪಾವತಿ ಮಾಡದೆ ಸಾರಿಗೆ ನೌಕರರು ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದೆ. ಪ್ರತಿ ತಿಂಗಳು 10 ನೇ ತಾರೀಖಿನ ಒಳಗೆ ಎಲ್ಲಾ ನೌಕರರಿಗೆ ವೇತನ ಪಾವತಿ ಮಾಡಲಾಗುತ್ತಿತ್ತು. ಆದರೆ 10 ನೇ ತಾರೀಖು ಕಳೆದರೂ ವೇತನ ಪಾವತಿ ಮಾಡಿಲ್ಲ. ಇದರಿಂದ […]

ರಾಜ್ಯ ಸಾರಿಗೆ ನಿಗಮಗಳು ಸಂಬಳ ಕೊಡ್ತಿಲ್ಲ; ಲಕ್ಷಾಂತರ ನೌಕರರು ಕಂಗಾಲು
ಕೆಎಸ್​ಆರ್​ಟಿಸಿ ಬಸ್​
ಸಾಧು ಶ್ರೀನಾಥ್​

Updated on: Jul 20, 2020 | 6:41 PM

ಬೆಂಗಳೂರು:  ಈಗಾಗಲೇ ಭಾರೀ ನಷ್ಟದಿಂದ ನಡೆಯುತ್ತಿರುವ ಸಾರ್ವಜನಿಕ ಸಾರಿಗೆ ಸಂಸ್ಥೆ ಇದೀಗ ಕೊರೊನಾದಿಂದಾಗಿ ಮತ್ತಷ್ಟು ನಷ್ಟ ಅನುಭವಿಸಿದೆ. KSRTC ಸುಮಾರು 900 ಕೋಟಿ ನಷ್ಟ ಅನುಭವಿಸಿದರೆ, ಬಿಎಂಟಿಸಿ ಸುಮಾರು 450 ಕೋಟಿ ನಷ್ಟದಲ್ಲಿದೆ. ಇದರಿಂದ ನೌಕರರ ವೇತನ ಪಾವತಿ ಮಾಡದೆ ಸಾರಿಗೆ ನೌಕರರು ಪರದಾಡುವ ಸ್ಥಿತಿಗೆ ತಂದು ನಿಲ್ಲಿಸಿದೆ.

ಪ್ರತಿ ತಿಂಗಳು 10 ನೇ ತಾರೀಖಿನ ಒಳಗೆ ಎಲ್ಲಾ ನೌಕರರಿಗೆ ವೇತನ ಪಾವತಿ ಮಾಡಲಾಗುತ್ತಿತ್ತು. ಆದರೆ 10 ನೇ ತಾರೀಖು ಕಳೆದರೂ ವೇತನ ಪಾವತಿ ಮಾಡಿಲ್ಲ. ಇದರಿಂದ ಕಂಗಾಲಾಗಿರುವ ಸಾರಿಗೆ ನೌಕರರು ಜೀವನ ನಿರ್ವಹಣೆ ಹೇಗೆ ಎಂಬ ಯೋಚನೆಯಲ್ಲಿದ್ದಾರೆ. ಏಪ್ರಿಲ್ ಹಾಗೂ ಮೇ ತಿಂಗಳ ವೇತನವನ್ನ ಸರ್ಕಾರವೇ ಪಾವತಿ ಮಾಡಿತ್ತು.

ಆದರೆ ಇದೀಗ ಬಸ್ ಓಡಾಟ ನಡೆಸಿದ್ರೂ ನಿಗಮಗಳಿಗೆ ಆದಾಯ ಬರುತ್ತಿಲ್ಲ. ಇದರಿಂದ KSRTCಯ 37 ಸಾವಿರ, BMTCಯ 36 ಸಾವಿರ, NWKSRTC ಯ 25 ಸಾವಿರ ಹಾಗೂ NEKSRTCಯ 22 ಸಾವಿರ ನೌಕರರು ಜೂನ್ ತಿಂಗಳ ವೇತನ ಸಿಗದೇ ಪರದಾಡುತ್ತಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us