ಜೀವನಾಂಶ ನೀಡದ ಮಾಜಿ ಶಾಸಕ ಪುತ್ರನ ಮನೆ ಜಪ್ತಿಗೆ ಆದೇಶ

ಮೈಸೂರು: 7 ವರ್ಷದ ಹಿಂದೆ ವಿವಾಹವಾಗಿದ್ದ ತನ್ನ ಮಡದಿಗೆ ಜೀವನಾಂಶ ನೀಡದ ಹಿನ್ನೆಲೆಯಲ್ಲಿ ಗಂಡನ ಮನೆ ಜಪ್ತಿಗೆ ಮೈಸೂರಿನ ಕೋರ್ಟ್‌ ಆದೇಶ ನೀಡಿದೆ. ಮಾಜಿ ಶಾಸಕ ದಿ. ಶಂಕರಲಿಂಗೇಗೌಡ ಅವರ ಮಗ ನಾಗೇಶ್, 7 ವರ್ಷದ ಹಿಂದೆ ಜಯಶ್ರೀ ಎಂಬುವವರನ್ನ ವಿವಾಹವಾಗಿದ್ದರು. ನಾಗೇಶ್, ಒಂದೂವರೆ ವರ್ಷದ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದರು. ಬಳಿಕ ಜಯಶ್ರೀಗೆ 10,000 ರೂಪಾಯಿ ಜೀವನಾಂಶ ನೀಡ್ತಿದ್ದ ನಾಗೇಶ್, ಕಳೆದ 7 ತಿಂಗಳಿನಿಂದ ಜೀವನಾಂಶ ನೀಡಿಲ್ಲ ಎಂದು ವಿಚ್ಛೇದಿತ ಪತ್ನಿ ಜಯಶ್ರೀ ಕೋರ್ಟ್ ಮೊರೆ […]

ಜೀವನಾಂಶ ನೀಡದ ಮಾಜಿ ಶಾಸಕ ಪುತ್ರನ ಮನೆ ಜಪ್ತಿಗೆ ಆದೇಶ
ಸಾಧು ಶ್ರೀನಾಥ್​

Updated on: Oct 28, 2019 | 6:14 PM

ಮೈಸೂರು: 7 ವರ್ಷದ ಹಿಂದೆ ವಿವಾಹವಾಗಿದ್ದ ತನ್ನ ಮಡದಿಗೆ ಜೀವನಾಂಶ ನೀಡದ ಹಿನ್ನೆಲೆಯಲ್ಲಿ ಗಂಡನ ಮನೆ ಜಪ್ತಿಗೆ ಮೈಸೂರಿನ ಕೋರ್ಟ್‌ ಆದೇಶ ನೀಡಿದೆ.

ಮಾಜಿ ಶಾಸಕ ದಿ. ಶಂಕರಲಿಂಗೇಗೌಡ ಅವರ ಮಗ ನಾಗೇಶ್, 7 ವರ್ಷದ ಹಿಂದೆ ಜಯಶ್ರೀ ಎಂಬುವವರನ್ನ ವಿವಾಹವಾಗಿದ್ದರು. ನಾಗೇಶ್, ಒಂದೂವರೆ ವರ್ಷದ ಹಿಂದೆ ಪತ್ನಿಗೆ ವಿಚ್ಛೇದನ ನೀಡಿದ್ದರು. ಬಳಿಕ ಜಯಶ್ರೀಗೆ 10,000 ರೂಪಾಯಿ ಜೀವನಾಂಶ ನೀಡ್ತಿದ್ದ ನಾಗೇಶ್, ಕಳೆದ 7 ತಿಂಗಳಿನಿಂದ ಜೀವನಾಂಶ ನೀಡಿಲ್ಲ ಎಂದು ವಿಚ್ಛೇದಿತ ಪತ್ನಿ ಜಯಶ್ರೀ ಕೋರ್ಟ್ ಮೊರೆ ಹೋಗಿದ್ದರು. ಇದೀಗ ನಾಗೇಶ್ ಮನೆಯಲ್ಲಿರುವ ವಸ್ತುಗಳನ್ನ ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದೆ.

Published On - 2:00 pm, Mon, 28 October 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us