ಅಂಬಾನಿ ಬಾಯ್ಕಾಟ್, ಅದಾನಿ ಬಾಯ್ಕಾಟ್ ಅಂತಿರೋ ರೈತರು: ಜಿಯೋ ಸಿಮ್​ನಿಂದ ಬೇರೆ ನೆಟ್​ವರ್ಕ್​​ಗೆ ಬದಲು

ಕಾರ್ಪೊರೇಟ್ ಸೆಕ್ಟರ್ ವಿರುದ್ಧ ರಾಜ್ಯದಲ್ಲೂ ರೈತರು ಸಿಡಿದೆದ್ದಿದ್ದಾರೆ. ಅಂಬಾನಿ ಒಡೆತನದ ರಿಲಯನ್ಸ್ ಜಿಯೋದಿಂದ ಬೇರೆ ನೆಟ್ವರ್ಕ್​ಗೆ ಪೋರ್ಟ್ ಆಗುವ ಮೂಲಕ ಹೋರಾಟ ನಡೆಸುತ್ತಿದ್ದಾರೆ.

ಅಂಬಾನಿ ಬಾಯ್ಕಾಟ್, ಅದಾನಿ ಬಾಯ್ಕಾಟ್ ಅಂತಿರೋ ರೈತರು: ಜಿಯೋ ಸಿಮ್​ನಿಂದ ಬೇರೆ ನೆಟ್​ವರ್ಕ್​​ಗೆ ಬದಲು
ಜಿಯೋ 999 ರೂ. ಯೋಜನೆಯಲ್ಲಿ ಯಾವುದೇ ನೆಟ್‌ವರ್ಕ್​ಗೆ ಅನಿಯಮಿತ ಕರೆಗಳು, ದಿನಕ್ಕೆ 3GB ಡೇಟಾ ಮತ್ತು 100 SMS ಸೌಲಭ್ಯವನ್ನು ಪಡೆಯುತ್ತೀರಿ. ಇದರ ವಾಲಿಡಿಟಿ 84 ದಿನಗಳು. ಇನ್ನು ದೈನಂದಿನ ಡೇಟಾ ಮುಗಿದ ಬಳಿಕ, ನೀವು 64Kbps ವೇಗದಲ್ಲಿ ಉಚಿತ ಇಂಟರ್ನೆಟ್ ಅನ್ನು ಬಳಸಬಹುದು. ಈ ಯೋಜನೆಯೊಂದಿಗೆ, ನೀವು ಜಿಯೋ ಅಪ್ಲಿಕೇಶನ್‌ಗಳಾದ ಜಿಯೋಟಿವಿ, ಜಿಯೋ ಸಿನಿಮಾ, ಜಿಯೋನ್ಯೂಸ್, ಜಿಯೋ ಸೆಕ್ಯುರಿಟಿ ಮತ್ತು ಜಿಯೋಕ್ಲೌಡ್‌ಗೆ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
Updated By: ಸಾಧು ಶ್ರೀನಾಥ್​

Updated on: Dec 10, 2020 | 10:14 AM

ಬೆಂಗಳೂರು: ಕಾರ್ಪೊರೇಟ್ ಸೆಕ್ಟರ್ ವಿರುದ್ಧ ರಾಜ್ಯದಲ್ಲೂ ರೈತರು ಸಿಡಿದೆದ್ದಿದ್ದಾರೆ. ಅಂಬಾನಿ ಒಡೆತನದ ರಿಲಯನ್ಸ್ ಜಿಯೋದಿಂದ ಬೇರೆ ನೆಟ್ವರ್ಕ್​ಗೆ ಪೋರ್ಟ್ ಆಗುವ ಮೂಲಕ ಹೋರಾಟ ನಡೆಸುತ್ತಿದ್ದಾರೆ. ಅಂಬಾನಿ ಬಾಯ್ಕಾಟ್, ಅದಾನಿ ಬಾಯ್ಕಾಟ್ ಎಂದು ರೈತರು ಪ್ರತಿಭಟನೆನಡೆಸುತ್ತಿದ್ದಾರೆ. ಗಿ ಅನ್ ಸಬ್‌ಸ್ಕ್ರೈಬ್ ಮಾಡಿ

ರಾಜ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಜಿಯೋ ನೆಟ್‌ವರ್ಕ್‌ನಿಂದ ಅನ್ ಸಬ್‌ಸ್ಕ್ರೈಬ್ ಹೋರಾಟ ಶುರುವಾಗಿದೆ. ಈಗ ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲೂ ಬಾಯ್ಕಾಟ್ ಚಳವಳಿಯ ಕಾವು ಏರುತ್ತಿದ್ದು ವಿನೂತನ ಪ್ರತಿಭಟನೆಗೆ ರೈತರು ಸಜ್ಜಾಗಿದ್ದಾರೆ. ರಿಲಾಯನ್ಸ್‌ ಮಾಲ್, ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಖರೀದಿಯ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.

ಕರ್ನಾಟಕದಲ್ಲಿ ಎರಡು ಕೋಟಿ+ ಗ್ರಾಹಕರ ನೆಲೆಯನ್ನು ದಾಟಿದ Jio