AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳ್ಳರು ಯಾವಾಗ ಈರುಳ್ಳಿ ಬುಡಕ್ಕೆ ಕೈ ಹಾಕ್ತೋರೋ ಎಂಬ ಭಯದಲ್ಲಿ ಬೆಳೆಗಾರ!

ಗದಗ: ಈರುಳ್ಳಿಗೆ ಈಗ ಬಂಗಾರದ ಬೆಲೆ ಬಂದ್ಬಿಟ್ಟಿದೆ. ಇದೀಗ ಬೆಳೆದಿರೋ ಅಷ್ಟೋ ಇಷ್ಟೋ ಈರುಳ್ಳಿಯನ್ನ ಕಾಪಾಡಿಕೊಳ್ಳೋಕೆ ರೈತರು ಹರಸಾಹಸ ಪಡುವಂತ ಪರಿಸ್ಥಿತಿ ಉಂಟಾಗಿದೆ. ರಾತ್ರಿಯಲ್ಲಾ ಈರುಳ್ಳಿಯನ್ನು ಕಾಯುವಂತಾಗಿದೆ. ಕಾಲಾಯ ತಸ್ಮೈ ನಮಃ ಅನ್ನೋದು ಇದಕ್ಕೆನೇ. ರಸ್ತೆಗೆ ಈರುಳ್ಳಿಯನ್ನ ಸುರಿದಿದ್ದು ಒಂದು ಕಾಲವಾದ್ರೆ, ಈಗ ನೋಡಿ ರಾತ್ರಿಯೆಲ್ಲ ಈರುಳ್ಳಿ ಬೆಳೆ ಕಾವಲು ನಿಲ್ಲುವಂತಾಗಿರೋದು ಮತ್ತೊಂದು ಕಾಲ. ಯಾವ ಹೊತ್ತಿನಲ್ಲಿ ಖದೀಮರು ಈರುಳ್ಳಿ ಬುಡಕ್ಕೆ ಕೈ ಹಾಕ್ತೋರೋ. ಭೂಮಿ ಒಳಗಿರೋ ಬಂಗಾರವನ್ನ ಕಿತ್ತೊಯ್ತಾರೋ ಅಂತ ಟಾರ್ಚ್​ ಹಿಡಿದು ಕಾಯ್ತಿದ್ದಾರೆ. ಈರುಳ್ಳಿಗೆ […]

ಕಳ್ಳರು ಯಾವಾಗ ಈರುಳ್ಳಿ ಬುಡಕ್ಕೆ ಕೈ ಹಾಕ್ತೋರೋ ಎಂಬ ಭಯದಲ್ಲಿ ಬೆಳೆಗಾರ!
ಸಾಧು ಶ್ರೀನಾಥ್​
|

Updated on: Dec 02, 2019 | 12:06 PM

Share

ಗದಗ: ಈರುಳ್ಳಿಗೆ ಈಗ ಬಂಗಾರದ ಬೆಲೆ ಬಂದ್ಬಿಟ್ಟಿದೆ. ಇದೀಗ ಬೆಳೆದಿರೋ ಅಷ್ಟೋ ಇಷ್ಟೋ ಈರುಳ್ಳಿಯನ್ನ ಕಾಪಾಡಿಕೊಳ್ಳೋಕೆ ರೈತರು ಹರಸಾಹಸ ಪಡುವಂತ ಪರಿಸ್ಥಿತಿ ಉಂಟಾಗಿದೆ. ರಾತ್ರಿಯಲ್ಲಾ ಈರುಳ್ಳಿಯನ್ನು ಕಾಯುವಂತಾಗಿದೆ.

ಕಾಲಾಯ ತಸ್ಮೈ ನಮಃ ಅನ್ನೋದು ಇದಕ್ಕೆನೇ. ರಸ್ತೆಗೆ ಈರುಳ್ಳಿಯನ್ನ ಸುರಿದಿದ್ದು ಒಂದು ಕಾಲವಾದ್ರೆ, ಈಗ ನೋಡಿ ರಾತ್ರಿಯೆಲ್ಲ ಈರುಳ್ಳಿ ಬೆಳೆ ಕಾವಲು ನಿಲ್ಲುವಂತಾಗಿರೋದು ಮತ್ತೊಂದು ಕಾಲ. ಯಾವ ಹೊತ್ತಿನಲ್ಲಿ ಖದೀಮರು ಈರುಳ್ಳಿ ಬುಡಕ್ಕೆ ಕೈ ಹಾಕ್ತೋರೋ. ಭೂಮಿ ಒಳಗಿರೋ ಬಂಗಾರವನ್ನ ಕಿತ್ತೊಯ್ತಾರೋ ಅಂತ ಟಾರ್ಚ್​ ಹಿಡಿದು ಕಾಯ್ತಿದ್ದಾರೆ.

ಈರುಳ್ಳಿಗೆ ಚಿನ್ನದ ರೇಟ್​​ ಬಂದಿದೆ. ಕ್ವಿಂಟಾಲ್​​​​ ಈರುಳ್ಳಿ ರೇಟ್​​​​ 6ರಿಂದ 10 ಸಾವಿರ ಆಗಿದ್ದು, ರೈತರು ಫುಲ್​ ಖುಷ್​ ಆಗಿದ್ದಾರೆ. ಆದ್ರೆ, ಬಂಗಾರದಂತಹ ಈರುಳ್ಳಿ ಮೇಲೆ ಕಳ್ಳರ ಕಣ್​​ ಬಿದ್ದಿದ್ದು, ಈರುಳ್ಳಿ ಕಾಪಾಡಿಕೊಳ್ಳಲು ಗದಗದ ಲಕ್ಕುಂಡಿ ಗ್ರಾಮದಲ್ಲಿ ರೈತರು ಹೊಲವನ್ನ ಕಾಯುತ್ತಿದ್ದಾರೆ. ಸರದಿಯಂತೆ ರಾತ್ರಿಯಿಡೀ ಈರುಳ್ಳಿ ಬೆಳೆಯನ್ನ ಕಾದು, ಫಸಲನ್ನ ಉಳಿಸಿಕೊಳ್ತಿದ್ದಾರೆ. ಟಾರ್ಚು, ದೊಣ್ಣೆ ಹಿಡಿದು ಕಾವಲಿಗೆ ನಿಂತಿದ್ದಾರೆ.

ಗದಗ ರೈತರಿಗೆ ಕಳ್ಳರ ಚಿಂತೆಯಾದರೆ, ಚಿತ್ರದುರ್ಗದಲ್ಲಿ ಈರುಳ್ಳಿ ಬೆಳೆಗಾರರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಯಾಕಂದ್ರೆ, ಅತಿವೃಷ್ಟಿಯ ನಡುವೆ ಭಿತ್ತಿರೋ ಅಲ್ಪಸ್ವಲ್ಪ ಈರುಳ್ಳಿಗೆ ನುಸಿರೋಗ ತಟ್ಟಿದೆ. ಹೀಗಾಗಿ, ಈ ಹೊತ್ತಿಗೆ ಕೈಗೆ ಬರಬೇಕಿದ್ದ ಈರುಳ್ಳಿ ನೆಲಕಚ್ಚಿದೆ.

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?