ರೈತರು ಬೆಳೆದ ಮರ ಕಡಿಯಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲು

ಯಾದಗಿರಿ: ರೈತರು ಬೆಳೆದ ಮರ ಕತ್ತರಿಸಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲಾಗಿದೆ. ನಾರಾಯಣಪುರ ವಲಯ ಅರಣ್ಯ ಉಪಾಧಿಕಾರಿ ವೆಂಕಟೇಶ್​ಗೆ ರೈತರು ಮತ್ತು ವ್ಯಾಪಾರಿಗಳು ಲಕ್ಷ ಲಕ್ಷ ಹಣ ನೀಡಬೇಕು. ಹುಣಸಗಿ ತಾಲೂಕಿನ ಎರಿಕಾಳ ಗ್ರಾಮದ ನಗರೆಪ್ಪ ಎಂಬ ರೈತ 251 ಸಾಗವಾನಿ ಮರಗಳನ್ನು ತಮ್ಮ ಜಮೀನಲ್ಲಿ ಬೆಳೆದಿದ್ರು. ಆ ಮರಗಳನ್ನು ಕಡಿದು ಮಾರಾಟ ಮಾಡಲು ಅಧಿಕಾರಿ ವೆಂಕಟೇಶ್​ ಬಳಿ ಅನುಮತಿ ಕೇಳಿದ್ದಾರೆ. ರೈತನಿಂದ ಲಂಚ ಪಡೆದು ಅನುಮತಿ ನೀಡಿದ್ದಾನೆ. ಲಂಚ ಪಡೆಯುವ ದೃಶ್ಯ […]

ರೈತರು ಬೆಳೆದ ಮರ ಕಡಿಯಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲು
ಸಾಧು ಶ್ರೀನಾಥ್​

Updated on: Dec 08, 2019 | 8:46 AM

ಯಾದಗಿರಿ: ರೈತರು ಬೆಳೆದ ಮರ ಕತ್ತರಿಸಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಅರಣ್ಯಾಧಿಕಾರಿ ಕರ್ಮಕಾಂಡ ಬಯಲಾಗಿದೆ. ನಾರಾಯಣಪುರ ವಲಯ ಅರಣ್ಯ ಉಪಾಧಿಕಾರಿ ವೆಂಕಟೇಶ್​ಗೆ ರೈತರು ಮತ್ತು ವ್ಯಾಪಾರಿಗಳು ಲಕ್ಷ ಲಕ್ಷ ಹಣ ನೀಡಬೇಕು.

ಹುಣಸಗಿ ತಾಲೂಕಿನ ಎರಿಕಾಳ ಗ್ರಾಮದ ನಗರೆಪ್ಪ ಎಂಬ ರೈತ 251 ಸಾಗವಾನಿ ಮರಗಳನ್ನು ತಮ್ಮ ಜಮೀನಲ್ಲಿ ಬೆಳೆದಿದ್ರು. ಆ ಮರಗಳನ್ನು ಕಡಿದು ಮಾರಾಟ ಮಾಡಲು ಅಧಿಕಾರಿ ವೆಂಕಟೇಶ್​ ಬಳಿ ಅನುಮತಿ ಕೇಳಿದ್ದಾರೆ. ರೈತನಿಂದ ಲಂಚ ಪಡೆದು ಅನುಮತಿ ನೀಡಿದ್ದಾನೆ. ಲಂಚ ಪಡೆಯುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ರೈತನಿಂದ ಲಂಚ ಪಡೆದು ಅನುಮತಿ ನೀಡಿದ ವೆಂಕಟೇಶ್ ಕಡಿಮೆ ದರಕ್ಕೆ ಅವುಗಳನ್ನು ತಾನೆ ಕೊಂಡುಕೊಂಡಿದ್ದಾನೆ. ತಾನು ಕೊಂಡುಕೊಂಡ ದರಕ್ಕಿಂತ 4 ಪಟ್ಟು ಜಾಸ್ತಿ ದರಕ್ಕೆ ಹುಮ್ನಾಬಾದ್ ವ್ಯಾಪಾರಿ ಬಸವರಾಜ ಎಂಬುವವರಿಗೆ ಮಾರಿದ್ದಾನೆ. ಇಷ್ಟೇ ಅಲ್ಲದೆ ಸರ್ಕಾರಿ ಮರಗಳನ್ನು ಸಹ ಬಿಡುವುದಿಲ್ಲ ಎಂದು ಜಿಲ್ಲೆಯ ರೈತರು ಗಂಭೀರ ಆರೋಪ ಮಾಡಿದ್ದಾರೆ.

Published On - 8:46 am, Sun, 8 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us