AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತ್ತಲಲ್ಲಿ ಬರ್ತಾರೆ, ಕಾರಲ್ಲಿ ಜಾನುವಾರುಗಳನ್ನ ಕದ್ದೊಯ್ತಾರೆ!

ಕಲಬುರಗಿ: ಹೊಟ್ಟೆ ತುಂಬಾ ಮೇಯೋದು, ಜಾಗ ಸಿಕ್ಕಲ್ಲಿ ಮಲಗೋದು. ಹೀಗೆ ಜಿಲ್ಲೆಯಲ್ಲಿ ಜಾನುವಾರು ಎಲ್ಲೆಂದ್ರಲ್ಲೇ ಠಿಕಾಣಿ ಹೂಡ್ತಿದ್ವು. ಆದ್ರೆ ಕೆಲ ದಿನಗಳಿಂದ ಕತ್ತಲು ಕಳೆದು ಬೆಳಗಾಗುವಷ್ಟ್ರಲ್ಲಿ ಕೆಲವು ಮಾಯವಾಗ್ತಿದ್ವು. ಅರೆ ಏನಾಗ್ತಿದೆ ಅಂತಾ ತಲೆ ಕೆಡಿಸಿಕೊಂಡವ್ರಿಗೆ ಸಿಸಿಟಿವಿ ಹೇಳಿದ್ದು ಭಯಾನಕ ಸತ್ಯ. ಜಾನುವಾರು ಕಳ್ಳರ ಅಟ್ಟಹಾಸ ಅಚ್ಚರಿ ಅನ್ಸಿದ್ರೂ ಇದೇ ಸತ್ಯ. ಇತ್ತೀಚೆಗೆ ಚಿನ್ನಾಭರಣ ಕಳ್ಳತನ, ಮನೆಗಳ್ಳತನ ಪ್ರಕರಣ, ದರೋಡೆಗಳು ಹೆಚ್ಚಾಗ್ತಿತ್ತು. ಆದ್ರೀಗ ಅದ್ರ ಲಿಸ್ಟ್​ಗೆ ಜಾನುವಾರು ಕಳ್ಳತನ ಕೂಡ ಸೇರ್ಪಡೆಯಾಗ್ತಿದೆ. ಅದೂ ಕೂಡ ಸ್ಕಾರ್ಪಿಯೋ ಕಾರಿನಲ್ಲೇ […]

ಕತ್ತಲಲ್ಲಿ ಬರ್ತಾರೆ, ಕಾರಲ್ಲಿ ಜಾನುವಾರುಗಳನ್ನ ಕದ್ದೊಯ್ತಾರೆ!
Follow us
ಸಾಧು ಶ್ರೀನಾಥ್​
|

Updated on: Dec 08, 2019 | 7:21 AM

ಕಲಬುರಗಿ: ಹೊಟ್ಟೆ ತುಂಬಾ ಮೇಯೋದು, ಜಾಗ ಸಿಕ್ಕಲ್ಲಿ ಮಲಗೋದು. ಹೀಗೆ ಜಿಲ್ಲೆಯಲ್ಲಿ ಜಾನುವಾರು ಎಲ್ಲೆಂದ್ರಲ್ಲೇ ಠಿಕಾಣಿ ಹೂಡ್ತಿದ್ವು. ಆದ್ರೆ ಕೆಲ ದಿನಗಳಿಂದ ಕತ್ತಲು ಕಳೆದು ಬೆಳಗಾಗುವಷ್ಟ್ರಲ್ಲಿ ಕೆಲವು ಮಾಯವಾಗ್ತಿದ್ವು. ಅರೆ ಏನಾಗ್ತಿದೆ ಅಂತಾ ತಲೆ ಕೆಡಿಸಿಕೊಂಡವ್ರಿಗೆ ಸಿಸಿಟಿವಿ ಹೇಳಿದ್ದು ಭಯಾನಕ ಸತ್ಯ.

ಜಾನುವಾರು ಕಳ್ಳರ ಅಟ್ಟಹಾಸ ಅಚ್ಚರಿ ಅನ್ಸಿದ್ರೂ ಇದೇ ಸತ್ಯ. ಇತ್ತೀಚೆಗೆ ಚಿನ್ನಾಭರಣ ಕಳ್ಳತನ, ಮನೆಗಳ್ಳತನ ಪ್ರಕರಣ, ದರೋಡೆಗಳು ಹೆಚ್ಚಾಗ್ತಿತ್ತು. ಆದ್ರೀಗ ಅದ್ರ ಲಿಸ್ಟ್​ಗೆ ಜಾನುವಾರು ಕಳ್ಳತನ ಕೂಡ ಸೇರ್ಪಡೆಯಾಗ್ತಿದೆ. ಅದೂ ಕೂಡ ಸ್ಕಾರ್ಪಿಯೋ ಕಾರಿನಲ್ಲೇ ಬಂದು ಕಳ್ಳತನ ಮಾಡ್ತಿದ್ದಾರೆ ಅನ್ನೋದು ಇಂಟ್ರೆಸ್ಟಿಂಗ್. ಕಾರ್​ನಲ್ಲಿ ಬರೋ ಖದೀಮರು ರಸ್ತೆ ಪಕ್ಕದಲ್ಲಿ ಮಲಗಿದ್ದ ಜಾನುವಾರು ಕದ್ದೊಯ್ದಿದ್ದಾರೆ.

ಕಲಬುರಗಿ ನಗರದ ಶಹಬಾದ್ ಪಟ್ಟಣದಲ್ಲಿ ಬೆಳಗಿನ ಜಾವ 3 ಗಂಟೆ ವೇಳೆ ಹಸುವನ್ನ ತಮ್ಮ ಕಾರಿನಲ್ಲಿ ಹಾಕಿಕೊಂಡು ಹೋಗಿರೋ ದೃಶ್ಯ ಸೆರೆಯಾಗಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣ ರಾಜ್ಯದಿಂದ ಕಾರ್​ನಲ್ಲಿ ಬರೋ ಕಳ್ಳರು ಕೃತ್ಯ ಎಸಗುತ್ತಿದ್ದಾರೆ ಎನ್ನಲಾಗಿದೆ.

ರಸ್ತೆಯಲ್ಲಿರುವ ಬಿಡಾಡಿ ದನಗಳನ್ನೂ ಬಿಡ್ತಿಲ್ಲ: ಇನ್ನು ಕೆಲ ವೇಳೆ ರೈತರು ಕೊಟ್ಟಿಗೆಯಲ್ಲಿ ಕಟ್ಟಿರುವ ಜಾನುವಾರು ಕದ್ದುಕೊಂಡು ಹೋದ್ರೆ, ಇನ್ನು ಕೆಲವು ಸಂದರ್ಭದಲ್ಲಿ ರಸ್ತೆಯಲ್ಲಿ ಮಲಗುವ ಬಿಡಾಡಿ ದನಗಳನ್ನೂ ಬಿಡ್ತಿಲ್ಲ. 50-60ಸಾವಿರ ಬೆಲೆಬಾಳುವ ಜಾನುವಾರು ಎತ್ಕೊಂಡು ಎಸ್ಕೇಪ್ ಆಗ್ತಿದ್ದಾರೆ. ಯಾರಾದ್ರು ಕೇಳಿದ್ರೆ ನಾವು ಹೈದ್ರಾಬಾದ್​ಗೆ ಹೋಗ್ತಾಯಿದ್ದೇವೆ ಅಂತೆಲ್ಲಾ ಹೇಳ್ತಾರೆ. ಅಲ್ದೇ ದೊಡ್ಡ ದೊಡ್ಡ ಕಾರಲ್ಲಿ ಬರೋದ್ರಿಂದ ಜನ್ರಿಗೂ ಡೌಟ್ ಬರ್ತಿಲ್ಲ. ಹೀಗಾಗಿ ಇದಲ್ಲೆಲ್ಲಾ ಕಡಿವಾಣ ಹಾಕಿ ಅಂತಿದ್ದಾರೆ ಸ್ಥಳೀಯರು.

ಸದ್ಯ ಜಾನುವಾರು ಕಳ್ಳತನದ ಬಗ್ಗೆ ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಟ್ನಲ್ಲಿ ಖದೀಮರು ದೇವರನ್ನೂ ಬಿಡ್ತಿಲ್ಲ. ದೇವರ ಸಮಾನ ಅಂತಾ ನಂಬಿರೋ ಕಾಮದೇನುವನ್ನೂ ಬಿಡ್ತಿಲ್ಲ. ಆದ್ರೆ ಅವ್ರ ಕೃತ್ಯಕ್ಕೆ ಕಂಗಾಲಾಗಿರೋದು ಮಾತ್ರ ಸ್ಥಳೀಯರು.

Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
Daily Devotional: ಮನೆ ಹತ್ತಿರ ಅಶ್ವಥ್ಥ ವೃಕ್ಷ ಬೆಳೆದರೆ ಏನು ಮಾಡಬೇಕು?
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
horoscope: ಈ ರಾಶಿಯವರು ಅಪರಿಚಿತರಿಂದ ಸ್ವಲ್ಪ ಅಂತರ ಕಾಯ್ದುಕೊಳ್ಳುವರು
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
3 ವಿಕೆಟ್, 1 ಕ್ಯಾಚ್; ಇತಿಹಾಸ ಬರೆದ ಪ್ಯಾಟ್ ಕಮ್ಮಿನ್ಸ್
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಸೋನು ನಿಗಮ್ ಕನ್ನಡಿಗರನ್ನು ಭಯೋತ್ಪಾದಕರಿಗೆ ಹೋಲಿಸಿದ್ದು ತಪ್ಪು: ಶಮಿತಾ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ಅನುಮೋದನೆ ಸಿಕ್ಕರೂ176 ಕೋಚ್ ಗಳ ನೇಮಕ ಯಾಕಾಗಿಲ್ಲ ಅಂತ ಪ್ರಶ್ನಿಸಿದ ಸಿಎಂ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ದಿನೇಶ್ ಗುಂಡೂರಾವ್ ಉಸ್ತುವಾರಿ ಸಚಿವನಾಗಿ ಸಿಕ್ಕಿದ್ದು ನಮ್ಮ ದುರ್ದೈವ: ಪೂಂಜ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಯತ್ನಾಳ್ ಗೆ ಹಿಂದೂ ನಾಯಕ ಅಂತ ಯಾರೂ ಪಟ್ಟ ಕಟ್ಟಿಲ್ಲ: ರೇಣುಕಾಚಾರ್ಯ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಶತಮಾನದ ಇತಿಹಾಸ ಹೊಂದಿರುವ ಕೋಲಾರದ ಶಾಲೆ SSLC ಫಲಿತಾಂಶದಲ್ಲಿ ಶೂನ್ಯ ಸಾಧನೆ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು ಮಾನಸಿಕವಾಗಿ ಟಿಪ್ಪು ಆಗಿದ್ದಾರೆ: ಶೋಭಾ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ
KPSC ಮೈನ್ಸ್ ಪ್ರಶ್ನೆ ಪತ್ರಿಕೆ ಲೀಕ್ ಆರೋಪ.. ಅಭ್ಯರ್ಥಿಗಳಿಂದ ಭಾರೀ ಗಲಾಟೆ