AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Channapatna By Election Result: ಪ್ರಚಾರ ಅರಂಭಿಸಿದ ದಿನದಿಂದ ಚನ್ನಪಟ್ಟಣ ಜನ ನಿಖಿಲ್​ನನ್ನು ಆಶೀರ್ವದಿಸುವ ನಂಬಿಕೆ ಇದೆ: ಕುಮಾರಸ್ವಾಮಿ

Channapatna By Election Result: ಪ್ರಚಾರ ಅರಂಭಿಸಿದ ದಿನದಿಂದ ಚನ್ನಪಟ್ಟಣ ಜನ ನಿಖಿಲ್​ನನ್ನು ಆಶೀರ್ವದಿಸುವ ನಂಬಿಕೆ ಇದೆ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 23, 2024 | 10:27 AM

Share

Channapatna By Election Result: ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಗೆಲುವು ಸಾಧಿಸಿ ಅಧಿಕಾರಕ್ಕೆ ಬರಲಿದೆ ಎಂದು ಕುಮಾರಸ್ವಾಮಿ ಹೇಳಿದರು. ಮೋದಿಯವರ ನಾಯಕತ್ವಕ್ಕೆ ಈಗಲೂ ಜನ ಬೆಂಬಲವಿದೆ ಅನ್ನೋದು ಎನ್​ಡಿಎ ಅಭ್ಯರ್ಥಿಗಳು ಕಾಯ್ದುಕೊಂಡಿರುವ ಮುನ್ನಡೆ ಹೇಳುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು: ಕುಟುಂಬದೊಂದಿಗೆ ಬಿಡದಿಗೆ ತೆರಳುವ ಮುನ್ನ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದರು. ಚುನಾವಣಾ ಪ್ರಚಾರ ಆರಂಭಿಸಿದ ದಿನದಿಂದ ಚನ್ನಪಟ್ಟಣದ ಜನತೆ ಜೆಡಿಎಸ್ ಅಭ್ಯರ್ಥಿಯನ್ನು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿದೆ, ರಾಜ್ಯದ ಮೂರು ಉಪಚುನಾವಣೆಗಳಲ್ಲಿ ಎನ್​ಡಿಎ 2 ಮತ್ತು ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಿಪಿಎಲ್ ಕಾರ್ಡುಗಳಿಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರ ಗೊಂದಲದಲ್ಲಿದೆ: ಕುಮಾರಸ್ವಾಮಿ