
HD Kumaraswamy
ಹೆಚ್ಡಿ ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಅವರ ಪುತ್ರ. ಹೆಚ್ಡಿ ಕುಮಾರಸ್ವಾಮಿ ಅವರು ಮೂಲತಃ ಚಲನಚಿತ್ರ ನಿರ್ಮಾಪಕರಾಗಿದ್ದವರು. ಹಲವು ವರ್ಷಗಳ ಕಾಲ ಕನ್ನಡ ಸಿನಿಮಾ ರಂಗದಲ್ಲಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದರು. ಇವರು ನಿರ್ಮಾಣದ ಹಲವು ಚಿತ್ರಗಳು ಸೂಪರ್ ಹಿಟ್ ಆಗಿವೆ. ನಂತರ ಹೆಚ್ಡಿ ಕುಮಾರಸ್ವಾಮಿ ಅವರು ತಂದೆಯ ನೆರಳಿನಲ್ಲಿ ರಾಜಕಾರಣಕ್ಕೆ ಧುಮುಕಿದರು. ಹೆಚ್ಡಿ ಕುಮಾರಸ್ವಾಮಿ 1996ರಲ್ಲಿ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದರು. ಅದೇ ವರ್ಷ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕನಕಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 11ನೇ ಲೋಕಸಭೆಯ ಸದಸ್ಯರಾಗಿ ಚುನಾಯಿತರಾದರು.
ಬಳಿಕ ರಾಜ್ಯ ರಾಜಕಾರಣದತ್ತ ಮುಖ ಮಾಡಿದ ಕುಮಾರಸ್ವಾಮಿ ಅವರು 2006ರಲ್ಲಿ ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಹಲವು ರಾಜಕೀಯ ಕಾರಣದಿಂದಾಗಿ ಹೆಚ್ಡಿ ಕುಮಾರಸ್ವಾಮಿ 2007ರ ಅಕ್ಟೋಬರ್ 8 ರಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳೆಗೆ ಇಳಿಯಬೇಕಾಯಿತು. ನಂತರ 2018ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಮತ್ತೆ ರಾಜಕೀಯ ಕಾರಣದಿಂದ 2019ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಇದೀಗ ಕೇಂದ್ರ ಎನ್ಡಿಎ ಸರ್ಕಾರದಲ್ಲಿ ಉಕ್ಕು ಹಾಗೂ ಬೃಹತ್ ಕೈಗಾರಿಕಾ ಸಚಿವರಾಗಿ ಕಾರ್ಯರ್ನಿವಹಿಸುತ್ತಿದ್ದಾರೆ
ಇದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ಕುಮಾರಸ್ವಾಮಿ ನೇತೃತ್ವದ ಸರ್ಕಾರವಲ್ಲ: ಮಧು ಬಂಗಾರಪ್ಪ
ಜಾತಿ ಗಣತಿ ವರದಿಯ ಬಗ್ಗೆ ಯಾರೇನು ಹೇಳುತ್ತಾರೆ ಅನ್ನೋದು ಮುಖ್ಯವಲ್ಲ, ಮಾಧ್ಯಮದವರು ದಯವಿಟ್ಟು ಇದೇ ಪ್ರಶ್ನೆಯನ್ನು ಎಲ್ಲ ಸಚಿವರಿಗೆ, ಶಾಸಕರಿಗೆ ಕೇಳಬೇಡಿ, ವರದಿಯ ಬಗ್ಗೆ ಸಮಗ್ರವಾದ ಮಾಹಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಿಗಿ ಅವರಲ್ಲಿ ಸಿಗುತ್ತದೆ, ಜನರಿಗೆ ಮಾಹಿತಿ ಮಾಧ್ಯಮಗಳ ಮೂಲಕವೇ ಸಿಗುತ್ತದೆ ಎಂದು ಮಧು ಬಂಗಾರಪ್ಪ ಹೇಳಿದರು.
- Arun Belly
- Updated on: Apr 18, 2025
- 12:31 pm
ಸದನದಲ್ಲಿ ತಪ್ಪು ಒಪ್ಪಿಕೊಂಡ್ರೆ ಮಾಡಿದ ತಪ್ಪಿಗೆ ಮಾಫಿನಾ? ಕುಮಾರಸ್ವಾಮಿಯೇ ಹೇಳಬೇಕು: ಚಲುವರಾಯಸ್ವಾಮಿ
ವೈಯಕ್ತಿಕ ಕ್ಯಾರೆಕ್ಟರ್ ಬಗ್ಗೆ ತಾನು ಯಾವತ್ತೂ ಮಾತಾಡಲ್ಲ, ಉತ್ತಮ ಸಂಸ್ಕಾರದಲ್ಲಿ ಬೆಳೆದು ಗೌರವಾನ್ವಿತ ಅನಿಸಿಕೊಂಡಿದ್ದೇನೆ, ಕುಮಾರಸ್ವಾಮಿ ತಮ್ಮ ಮನೆಗೆ ಲೇಟಾಗಿ ಹೋಗುತ್ತಿದ್ದರಂತೆ, ಅದಕ್ಕೆ ಕಾರಣ ತಾನಾ? ಮನೆಗೆ ಲೇಟಾಗಿ ಹೋಗಿದ್ದರೆ ಅದಕ್ಕೆ ಅವರ ಕಾರಣ, ಯಾಕೆ ಲೇಟಾಗುತಿತ್ತು ಅಂತ ಅವರೇ ಹೇಳಬೇಕು ಎಂದು ಚಲುವರಾಯಸ್ವಾಮಿ ಹೇಳಿದರು.
- Arun Belly
- Updated on: Apr 14, 2025
- 3:21 pm
ಕಾಂಗ್ರೆಸ್ ಪುಢಾರಿಗಳು ನನ್ನನ್ನು ಹೆದರಿಸಿ, ಬೆದರಿಸುವ ಕೆಲಸ ಮಾಡುತ್ತಿದ್ದಾರೆ: ಕುಮಾರಸ್ವಾಮಿ
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ. ಕಾಂಗ್ರೆಸ್ನ ಪುಡಾರಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ. ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಗಣಿಗಾರಿಕೆ ಅಕ್ರಮ ಆರೋಪ ಮಾಡಿದ್ದಾರೆ. ಹಾಗೇ, ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಖಂಡಿಸಿದ್ದಾರೆ.
- Vivek Biradar
- Updated on: Apr 12, 2025
- 6:28 pm
ಆರೋಗ್ಯ ಸರಿಯಿಲ್ಲದಿದ್ದರೂ ಜೆಡಿಎಸ್ ಪ್ರತಿಭಟನೆಯಲ್ಲಿ ಭಾಗಿಯಾದ ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ
ಕುಮಾರಸ್ವಾಮಿಯವರಿಗೆ ಆರೋಗ್ಯ ಸರಿ ಇದ್ದಂತಿಲ್ಲ, ಫ್ರೀಡಂ ಪಾರ್ಕ್ಗೆ ಅವರು ಸ್ವೆಟರ್ ಧರಿಸಿ ಬಂದರು ಮತ್ತು ವೇದಿಕೆ ಹತ್ತಿದಾಗ ಕೆಮ್ಮುತ್ತಿದ್ದರು. ಮಾತಾಡುತ್ತೀರಾ ಎಂದು ನಿಖಿಲ್ ಸನ್ನೆ ಭಾಷೆಯಲ್ಲಿ ಕೇಳಿದಾಗ ಇಲ್ಲ, ನೀನೇ ಮುಂದುವರಿಸು ಎಂದು ಅವಅರು ಸಹ ಸನ್ನೆ ಮಾಡುತ್ತಾ ಹೇಳಿದರು. ವೇದಿಕೆ ಮೇಲಿದ್ದ ಮುಖಂಡರ ಕೈಯಲ್ಲಿ ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಮತ್ತು ವಿಧಾನ ಸೌಧ ಚಲೋ ಪ್ಲಕಾರ್ಡ್ಗಳಿದ್ದವು.
- Arun Belly
- Updated on: Apr 12, 2025
- 5:23 pm
ಸರ್ಕಾರಿ ಜಮೀನು ಒತ್ತುವರಿ ಆರೋಪ: ಕುಮಾರಸ್ವಾಮಿಗೆ ಬಿಗ್ ಶಾಕ್ ಕೊಟ್ಟ ಸರ್ಕಾರ!
ರಾಮನಗರ ಜಿಲ್ಲೆಯ ಬಿಡದಿಯ ಕೇತಗಾನಹಳ್ಳಿ ಬಳಿ ಸರ್ಕಾರಿ ಜಮೀನು ಒತ್ತುವರಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ನಡುವಿನ ಸಂಘರ್ಷ ಮುಂದುವರೆದಿದೆ. ಈ ಕೇತಗಾನಹಳ್ಳಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಂತದ ಕ್ರಮಕೈಗೊಳ್ಳುವುದಿಲ್ಲವೆಂಬ ಮುಚ್ಚಳಿಕೆಯನ್ನು ಇದೀಗ ಸರ್ಕಾರ ಹಿಂಪಡೆದುಕೊಂಡಿದೆ. ಈ ಮೂಲಕ ಕುಮಾರಸ್ವಾಮಿಗೆ ಶಾಕ್ ಕೊಟ್ಟಿದೆ.
- Ramesha M
- Updated on: Apr 8, 2025
- 10:35 pm
ಜೋಕರ್ ಅನ್ನೋ ಪದ ನನಗಿಂತ ಜಾಸ್ತಿ ಕುಮಾರಸ್ವಾಮಿಗೆ ಸೂಟ್ ಆಗುತ್ತದೆ: ಚಲುವರಾಯಸ್ವಾಮಿ, ಸಚಿವ
ಅಸಲಿಗೆ ಜೋಕರ್ ಅನ್ನುವ ಪದ ತನಗಿಂತ ಜಾಸ್ತಿ ಕುಮಾರಸ್ವಾಮಿಗೆ ಸೂಟ್ ಅಗುತ್ತದೆ, ತಾನು ಮಂಡ್ಯದ ಮಣ್ಣಿನ ಮಗ, ಅಪ್ಪಟ ರೈತನ ಮಗ, ಭಾಷೆಯ ಇತಿಮಿತಿಗಳು ಗೊತ್ತು, ಸುಸಂಸ್ಕೃತ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ, ಸಿದ್ಧಗಂಗಾ ಮಠದ ಸ್ವಾಮೀಜಿಗಳ ಸಂಪರ್ಕದಲ್ಲಿದ್ದ ತನಗೆ ಯಾರನ್ನು ಹೇಗೆ ಟೀಕಿಸಬೇಕು ಅಂತ ಚೆನ್ನಾಗಿ ಗೊತ್ತಿದೆ, ವಿನಾಕಾರಣ ಯಾರನ್ನೂ ಟೀಕಿಸಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
- Arun Belly
- Updated on: Apr 8, 2025
- 6:04 pm
ಗನ್-ಬಂದೂಕು ಹಿಡಿಯುವ ಸಂಸ್ಕೃತಿ ನನ್ನದಲ್ಲ, ದಾಖಲೆಗಳು ಗನ್ಗಿಂತ ಹೆಚ್ಚು ಶಕ್ತಿಶಾಲಿ: ಹೆಚ್ ಡಿ ಕುಮಾರಸ್ವಾಮಿ
ಕರ್ನಾಟಕ ಸಿಡಿ ಮತ್ತು ಪೆನ್ ಡ್ರೈವ್ಗಳನ್ನು ತಯಾರಿಸುವ ಫ್ಯಾಕ್ಟರಿಯಾಗಿ ಮಾರ್ಪಟ್ಟಿದೆ ಎಂದು ತಾನಲ್ಲ ಒಬ್ಬ ಹಿರಿಯ ಮತ್ತು ಜಾವಾಬ್ದಾರಿಯುತ ಮಂತ್ರಿಯೇ ಹೇಳಿದ್ದಾರೆ, ಅಧಿವೇಶನ ನಡೆಯುತ್ತಿದ್ದಾಗ ಎಂಥ ಪದಗಳ ಬಳಕೆಯಾಯಿತು ಅಂತ ಗೊತ್ತಿದೆ, ಹನಿ ಟ್ರ್ಯಾಪ್ ಮತ್ತು ಕೊಲೆಗೆ ಸುಪಾರಿ ಆರೋಪಗಳ ವಿಷಯದಲ್ಲಿ ಗೃಹ ಸಚಿವರಾಗಿ ಪರಮೇಶ್ವರ್ ಏನಾದರೂ ಮಾಡಿದರೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
- Arun Belly
- Updated on: Apr 7, 2025
- 6:04 pm
ಸಿಎಂ ಮತ್ತು ಡಿಸಿಎಂ ವಿರುದ್ಧ ಯುದ್ಧ ಘೋಷಿಸಿದ ಬಳಿಕ ಪಕ್ಷದ ಕೋರ್ ಕಮಿಟಿ ಸಭೆ ಕರೆದ ಕುಮಾರಸ್ವಾಮಿ
ಕುಮಾರಸ್ವಾಮಿಯವರು ಪಕ್ಷದ ಜವಾಬ್ದಾರಿಯನ್ನು ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ವಹಿಸಿಕೊಡುವ ಯೋಚನೆ ಮಾಡುತ್ತಿದ್ದಾರೆ, ಪ್ರಾಯಶಃ ಮೇನಲ್ಲಿ ನಿಖಿಲ್ ಪಟ್ಟಾಭಿಷೇಕ ಮತ್ತು ಅಧಿಕಾರ ಹಸ್ತಾಂತರ ನಡೆಯಬಹುದು. ಅವರ ನಿರ್ಧಾರದಲ್ಲಿ ಎಲ್ಲ ಜೆಡಿಎಸ್ ನಾಯಕರು ಒಮ್ಮತ ಹೊಂದಿದ್ದಾರೋ ಇಲ್ಲವೋ ಅಂತ ಕುಮಾರಸ್ವಾಮಿಯವರೇ ಹೇಳಬೇಕು. ಯಾಕೆಂದರೆ ನಿಖಿಲ್ ರನ್ನು ಲಾಂಚ್ ಮಾಡುವ ಪ್ರಯತ್ನಗಳು ಹಿಂದೆ ವಿಫಲವಾಗಿವೆ.
- Arun Belly
- Updated on: Apr 5, 2025
- 9:41 pm
ಮುಡಾ ಹಗರಣ: 15 ಸೈಟು ಡಿನೋಟಿಫೈ ಮಾಡಿ ಎಂದು ಅರ್ಜಿ ಕೊಟ್ಟಿದ್ದೇ ಸಿಎಂ ಭಾವಮೈದ, ಕುಮಾರಸ್ವಾಮಿ
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನ ನೇರವಾಗಿ ಶಾಮೀಲಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ. ಲೋಕಾಯುಕ್ತ ವರದಿಯನ್ನು ಉಲ್ಲೇಖಿಸಿ, ಸಿಎಂ ಅವರ ಭಾವಮೈದ ಹದಿನೈದು ನಿವೇಶನಗಳ ಡಿನೋಟಿಫಿಕೇಶನ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಸಹಿ ಪೋರ್ಜರಿ ಆಗಿತ್ತು ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
- Vivek Biradar
- Updated on: Apr 5, 2025
- 8:37 pm
ಕುಮಾರಸ್ವಾಮಿ ಮಾತುಗಳಿಗೆ ಹೆದರುವ ಮಗ ನಾನಲ್ಲ, ಆಸ್ತಿ ವಿವರ ಬಹಿರಂಗಪಡಿಸಲಿ: ಶಿವಕುಮಾರ್
ಕುಮಾರಸ್ವಾಮಿ ಮತ್ತು ಶಿವಕುಮಾರ್ ನಡುವೆ ಬಹಳ ದಿನಗಳಿಂದ ರಾಜಕೀಯ ವೈಷಮ್ಯ ಜಾರಿಯಲ್ಲಿದೆ, ಅವರಿಬ್ಬರ ಹೇಳಿಕೆಗಳ ಮೂಲಕ ಅದು ಜಗಜ್ಜಾಹೀರಾಗಿದೆ, 2019 ರಲ್ಲಿ ಮಂಡ್ಯ ಲೋಕಸಭಾ ಸ್ಥಾನಕ್ಕೆ ಮಧ್ಯಂತರ ಚುನಾವಣೆ ನಡೆದಾಗ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುವಾಗ ಶಿವಕುಮಾರ್ ಮತ್ತು ಕುಮಾರಸ್ವಾಮಿ ತಾವಿಬ್ಬರು ಜೋಡೆತ್ತಗಳು ಅಂತ ಹೇಳಿಕೊಳ್ಳುತ್ತಿದ್ದರು.
- Arun Belly
- Updated on: Apr 5, 2025
- 2:58 pm