AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಸೀಮಂತ ಕಾರ್ಯಕ್ರಮದಲ್ಲಿ ಮಥುರಾ ಮಂದಿರದ ಕನಸು ವ್ಯಕ್ತಪಡಿಸಿದ ಭಕ್ತರು

ರಾಷ್ಟ್ರ ಭಕ್ತ ಶರಣಪ್ಪ ಭೋವಿ ಹಾಗೂ ರೂಪಾ ದಂಪತಿಗಳ ಸೀಮಂತ ಕಾರ್ಯಕ್ರಮದಲ್ಲಿ ರಾಷ್ಟ್ರ ಭಕ್ತರು ವಿಭಿನ್ನವಾಗಿ ಸೀಮಂತ ಕಾರ್ಯ ಆಯೋಜನೆ ಮಾಡಿ ಮಥುರಾ ಮಂದಿರ ಕಟ್ಟುವ ಕನಸಿನ ಬಗ್ಗೆ ಆಸೆ ವ್ಯಕ್ತಪಡಿಸಿದ್ದಾರೆ. ಹಾಗೂ ಹುಟ್ಟುವ ಮಗುವಿನಲ್ಲಿ ರಾಷ್ಟ್ರ ಭಕ್ತರ ಗುಣಗಳು ಬರಲಿ ಎಂದು ವಿನೂತನವಾಗಿ ಸೀಮಂತ ಕಾರ್ಯ ಮಾಡಿದ್ದಾರೆ.

ಗದಗ: ಸೀಮಂತ ಕಾರ್ಯಕ್ರಮದಲ್ಲಿ ಮಥುರಾ ಮಂದಿರದ ಕನಸು ವ್ಯಕ್ತಪಡಿಸಿದ ಭಕ್ತರು
ಸೀಮಂತ ಕಾರ್ಯಕ್ರಮದಲ್ಲಿ ಮಥುರಾ ಮಂದಿರದ ಕನಸು
TV9 Web
| Updated By: ಆಯೇಷಾ ಬಾನು|

Updated on:Jan 11, 2024 | 3:29 PM

Share

ಗದಗ, ಜ.11: ಶ್ರೀ ರಾಮ ಮಂದಿರ ಆಯ್ತು (Ayodhya Ram Mandir), ಈಗ ಮಥುರಾ ಮಂದಿರ (Mathura Temple) ಕಟ್ಟುವ ಕನಸಿನ ಬಗ್ಗೆ ಭಕ್ತರು ಅನಾವರಣಗೊಳಿಸಿದ್ದಾರೆ. ಗದಗ (Gadag) ಜಿಲ್ಲೆ ನರಗುಂದ ಪಟ್ಟಣದಲ್ಲಿ ವಿಭಿನ್ನವಾಗಿ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಷ್ಟ್ರ ಭಕ್ತರ ಕನಸು ಅನಾವರಣಗೊಂಡಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಶ್ರೀರಾಮ ಮಂದಿರದ ಕನಸು ನನಸಾಗುತ್ತಿದಂತೆ, ಮತ್ತೊಂದು ಕನಸನ್ನು ಭಕ್ತರು ವ್ಯಕ್ತಪಡಿಸಿದ್ದಾರೆ.

ಶ್ರೀ ರಾಮ ಮಂದಿರ ಆಯ್ತು, ಮುಂದೆ ಮಥುರಾ ಮುಂದಿನ ಕನಸು. ರಾಷ್ಟ್ರ ಭಕ್ತರ ಕನಸು ಅನಾವರಣ ಮಾಡಿದ್ದಾರೆ. ಇಲ್ಲೊಬ್ಬ ರಾಷ್ಟ್ರ ಭಕ್ತನೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅಳವಡಿಸುವ ಮೂಲಕ ತನ್ನ ವಿಭಿನ್ನವಾಗಿ ಸೀಮಂತ ಕಾರ್ಯ ಕ್ರಮ ಆಚರಿಸಿಕೊಂಡಿದ್ದಾರೆ. ಸೀಮಂತ ಕಾರ್ಯಕ್ರಮದಲ್ಲಿ ಶ್ರೀರಾಮ ಮಂದಿರ ಆಯ್ತು ಮುಂದೆ ಮಥುರಾದಲ್ಲಿ ಕೃಷ್ಣನ ಮಂದಿರ ನನ್ನ ಕನಸು ಅಂತ ಬ್ಯಾನರ್ ಹಾಕಿದ್ದಾರೆ. ಅಷ್ಟೇ ಅಲ್ಲ ಈ ಸೀಮಂತ ಕಾರ್ಯಕ್ರಮದ ವೇದಿಕೆ ಎಂಟ್ರಿಯಾದ್ರೆ ಸಾಕು ಸ್ವಾತಂತ್ರ್ಯ ಹೋರಾಟಗಾರ ದರ್ಶನವೇ ಆಗುತ್ತೆ. ಈ ವಿಭಿನ್ನ ಸೀಮಂತ ಕಾರ್ಯಕ್ರಮ ಎಲ್ಲರ ಗಮನ ಸೆಳೆದಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಶ್ರೀರಾಮ ಮಂದಿರದ ಕನಸು ನನಸಾಗುತ್ತಿದಂತೆ, ಈಗ ಮತ್ತೊಂದು ಕನಸು ಮಥುರಾದಲ್ಲಿ ಶ್ರೀ ಕೃಷ್ಣನ ದೇವಸ್ಥಾನ ನಿರ್ಮಾಣದ ಕನಸು ಅಂತ ರಾಷ್ಟ್ರ ಭಕ್ತ ತನ್ನ ಸೀಮಂತ ಕಾರ್ಯವಿನೂತನವಾಗಿದೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ: ಬೀದರ್: ಜಮೀನು ವಿಚಾರಕ್ಕೆ 2 ಕುಟುಂಬಗಳ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಮಥುರಾ ರಾಷ್ಟ್ರಭಕ್ತರ ಮುಂದಿನ ಕನಸು ಅಂತಾ ಬ್ಯಾನರ್ ಅಳವಡಿಕೆ ಮಾಡಿದ್ದಾರೆ. ಭಕ್ತರಿಂದ ವಿಭಿನ್ನವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಪೋಟೋ ಮೂಲಕ ದೇಶಾಭೀಮಾನ ಮೆರೆದಿದ್ದಾರೆ. ನರಗುಂದ ಪಟ್ಟಣದ ರಾಷ್ಟ್ರ ಭಕ್ತ ಶರಣಪ್ಪ ಭೋವಿ ಹಾಗೂ ರೂಪಾ ದಂಪತಿಗಳು ವಿಭಿನ್ನ ಸೀಮಂತ ಕಾರ್ಯ ಮಾಡಿಕೊಂಡಿದ್ದಾರೆ. ರಾಷ್ಟ್ರ ಭಕ್ತರಿಂದ ವಿಭಿನ್ನವಾಗಿ ಸೀಮಂತ ಕಾರ್ಯ ಆಯೋಜನೆ ಮಾಡಿದ್ರು. ಹುಟ್ಟುವ ಮಗುವಿನಲ್ಲಿ ರಾಷ್ಟ್ರ ಭಕ್ತರು ಗುಣಗಳು ಬರಲಿ ಎಂದು ವಿನೂತನವಾಗಿ ಸೀಮಂತ ಕಾರ್ಯ ಮಾಡಿದ್ದು, ಜನ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಸುದಿರ್ಘ ಹೋರಾಟದ ಫಲವಾಗಿ ಪ್ರಭು ಶ್ರೀ ರಾಮನ ಮಂದಿರ ಲೋಕಾರ್ಪಣೆ ದಿನಗಣನೆ ಆರಂಭವಾಗಿದೆ. ಕೋಟ್ಯಾಂತರ ಹಿಂದೂಗಳ ಈ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹಿಂದೂ ಸಮಾಜದ ಇನ್ನೊಂದು ಆರಾದ್ಯೆ ದೇವಸ್ತಾನವಾದ ಮಥುರಾದಲ್ಲಿಯೂ ಕೃಷ್ಣನ ದೇವಸ್ತಾನ ನಿರ್ಮಾಣವಾಗಬೇಕು ಎಂದು ಇಚ್ಚೇಯನ್ನು ವ್ಯಕ್ತಪಡೆಸಲಾಗಿದೆ. ರಾಷ್ಟ್ರಭಕ್ತರು ಆಯೋಧ್ಯೆ ಆಯ್ತು, ಮುಂದೆ ಮಥುರಾದಲ್ಲಿ ಶ್ರೀ ಕೃಷ್ಣ ದೇವಸ್ಥಾನ ಆಗ್ಬೇಕು ಎನ್ನುವ ಸಂಕಲ್ಪ ಮಾಡಿದ್ದಾರೆ. ಹೀಗಾಗಿಯೇ ಸೀಮಂತ ಕಾರ್ಯವನ್ನು ಮಾಡುವ ವೇದಿಕೆಯಲ್ಲಿ ಮಥುರಾ ಕಸನು ಅಂತಾ ನಾಮಫಲಕವನ್ನು ಹಾಕಲಾಗಿದೆ. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:27 am, Thu, 11 January 24