AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag News: ವಿಂಡ್​ ಫ್ಯಾನ್​ನಿಂದ ಬೆಳೆ ನಾಶ: ರೈತ ಮಹಿಳೆ ಕಂಗಾಲು, ಸಹಾಯಕ್ಕೆ ಬರುವಂತೆ ಜಿಲ್ಲಾಡಳಿತಕ್ಕೆ‌ ಮನವಿ

ವಿಂಡ್ ಕಂಪನಿಗಳು ರೈತರ ಜಮೀನುಗಳಲ್ಲಿ ವಿಂಡ್ ಫ್ಯಾನ್ ಅಳವಡಿಸಿವೆ. ಇದ್ರಿಂದ ಪಕ್ಕದ ಜಮೀನಿನ ರೈತರ ಬೆಳೆ ಸರ್ವನಾಶ ಆಗುತ್ತಿದೆ. ಪೊಲೀಸರು ರೈತರ ನೆರವಿಗೆ ಬರುತ್ತಿಲ್ಲ. ಹೀಗಾಗಿ ರೈತರು ಜಿಲ್ಲಾಡಳಿತ, ವಿಂಡ್ ಕಂಪನಿಗಳ ವಿರುದ್ಧ ಕೆಂಡಕಾರಿದ್ದಾರೆ.

Gadag News: ವಿಂಡ್​ ಫ್ಯಾನ್​ನಿಂದ ಬೆಳೆ ನಾಶ: ರೈತ ಮಹಿಳೆ ಕಂಗಾಲು, ಸಹಾಯಕ್ಕೆ ಬರುವಂತೆ ಜಿಲ್ಲಾಡಳಿತಕ್ಕೆ‌ ಮನವಿ
ವಿಂಡ್ ಫ್ಯಾನ್​ನ ಗಾಳಿಗೆ ನೆಲಕಚ್ಚುತ್ತಿರುವ ಬೆಳೆಯನ್ನು ಸರಿ ಮಾಡುತ್ತಿರುವ ಕುಟುಂಬಸ್ಥರು
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Aug 01, 2023 | 1:14 PM

Share

ಗದಗ, ಆ.01: ಜಿಲ್ಲೆಯಲ್ಲಿ ಪವನ ವಿದ್ಯುತ್ ಕಂಪನಿಗಳ ಅಟ್ಟಹಾಸ ಮಿತಿಮೀರಿದೆ. ಸರ್ಕಾರದ ನಿಯಮ ಗಾಳಿಗೆ ತೂರಿ ವಿಂಡ್ ಫ್ಯಾನ್ ಅಳವಡಿಸುತ್ತಿದ್ದಾರೆ. ಆದ್ರೂ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ. ಹೀಗಾಗಿ ವಿಂಡ್ ಕಂಪನಿಗಳ ಅಟ್ಟಹಾಸ ದಿನೇ ದಿನೇ ಹೆಚ್ಚುತ್ತಿದೆ. ವಿಂಡ್ ಕಂಪನಿಗಳು ರೈತರ(Farmers) ಜೀವ ಹಿಂಡುತ್ತಿವೆ. ವಿಂಡ್ ಕಂಪನಿಗಳು ರೈತರ ಜಮೀನುಗಳಲ್ಲಿ ವಿಂಡ್ ಫ್ಯಾನ್ ಅಳವಡಿಸಿವೆ. ಇದ್ರಿಂದ ಪಕ್ಕದ ಜಮೀನಿನ ರೈತರ ಬೆಳೆ ಸರ್ವನಾಶ ಆಗುತ್ತಿದೆ. ಪೊಲೀಸರು ರೈತರ ನೆರವಿಗೆ ಬರುತ್ತಿಲ್ಲ. ಹೀಗಾಗಿ ರೈತರು ಜಿಲ್ಲಾಡಳಿತ, ವಿಂಡ್ ಕಂಪನಿಗಳ ವಿರುದ್ಧ ಕೆಂಡಕಾರಿದ್ದಾರೆ.

ಕಾನೂನು ಸಚಿವರ ತವರು ಕ್ಷೇತ್ರ, ಗದಗ ತಾಲೂಕಿನ ಅತ್ತಿಕಟ್ಟಿ ಗ್ರಾಮದಲ್ಲಿ ವಿಂಡ್ ಕಂಪನಿಗಳ ಹಾವಳಿ ಮಿತಿಮೀರಿದೆ. ರೈತರ ಕೃಷಿ ಜಮೀನುಗಳಲ್ಲಿ ನಾಯಿಕೊಡೆಗಳಂತೆ ಎದ್ದು ನಿಂತಿವೆ. ಕೆಲವ ರೈತರು ಅನುಮತಿ ಕೊಟ್ರೆ ಇನ್ನೂ ಕೆಲ ರೈತರು ವಿರೋಧ ಮಾಡಿದ್ದಾರೆ. ಆದ್ರೆ ಈಗ ಬುರೋಕಾ ವಿಂಡ್ ಕಂಪನಿ ಅತ್ತಿಕಟ್ಟಿ ಗ್ರಾಮದ ರೈತ ಮಹಿಳೆ ದ್ರೌಪತಿ ಲಮಾಣಿ ಜೀವ ಹಿಂಡುತ್ತಿದೆ. ದ್ರೌಪತಿ ತನ್ನ ಜಮೀನಿನಲ್ಲಿ ಗೋವಿನ ಜೋಳ ಬೆಳೆದಿದ್ದಾರೆ. ಆದ್ರೆ, ಬುರೋಕಾ ವಿಂಡ್ ಕಂಪನಿ ಪಕ್ಕದ ಜಮೀನಿನಲ್ಲಿ ಯಂತ್ರ ಅಳವಡಿಸಿದೆ. ಆದ್ರೆ, ಗಿರಗಿರ ಅಂತ ತಿರುಗೋ ಗಾಳಿಗೆ ದ್ರೌಪತಿ ಜಮೀನಿನಲ್ಲಿನ ಬೆಳೆ ಸರ್ವನಾಶ ಮಾಡ್ತಾಯಿದೆ. ಅಷ್ಟೊಇಷ್ಟು ಮಳೆಯಲ್ಲಿ ಉತ್ತಮ ಗೋವಿನ ಜೋಳ ಬೆಳೆದಿದ್ದಾರೆ. ಬೆಳೆ ಕೂಡ ಭರ್ಜರಿಯಾಗಿದೆ. ಆದ್ರೆ, ಗಿರಗಿರ ತಿರುಗುವ ಫ್ಯಾನ್ ಬೆಳೆ ನೆಲಕಚ್ಚುವಂತೆ ಮಾಡಿದೆ. ಇದು ದ್ರೌಪತಿ ಲಮಾಣಿ ಕುಟುಂಬನ್ನು ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದೆ.

ಇದನ್ನೂ ಓದಿ: Tomato Price Hike: ಟೊಮೆಟೊ ಬೆಲೆ ಏರಿಕೆ; ಲಕ್ಷ, ಕೋಟಿ ರೂಪಾಯಿಗಳಲ್ಲಿ ಆದಾಯ ಗಳಿಸುತ್ತಿದ್ದಾರೆ ಕರ್ನಾಟಕದ ರೈತರು

ನ್ಯಾಯ ಕೊಡಿಸದಿದ್ರೆ ಆತ್ಮಹತ್ಯೆಯೊಂದೆ ದಾರಿ

ದ್ರೌಪತಿ ಲಮಾಣಿ ಪುತ್ರರು ಗೋವಾಗೆ ದುಡಿಯಲು ಹೋಗ್ತಾರೆ. ಹೀಗಾಗಿ ಅತ್ತಿಕಟ್ಟ ಗ್ರಾಮದಲ್ಲಿ ದ್ರೌಪತಿ ಲಮಾಣಿ ಮಾತ್ರ ಇರ್ತಾರೆ. ದ್ರೌಪತಿಗೆ 70 ವರ್ಷ ವಯಸ್ಸಾಗಿದೆ. ಹೀಗಾಗಿ ವಿಂಡ್ ಕಂಪನಿ ದಬ್ಬಾಳಿಕೆಯಿಂದ ಜಮೀನಿನಲ್ಲಿ ರಸ್ತೆ ಮಾಡಿದೆ. ದ್ರೌಪತಿ ಪುತ್ರರು ಮುಳಗುಂದ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದಾರಂತೆ. ಅದ್ರೆ, ರೈತ ಕುಟುಂಬದ ನೆರವಿಗೆ ಧಾವಿಸಬೇಕಾದ ಪೊಲೀಸ್ ಅಧಿಕಾರಿಗಳು ವಿಂಡ್ ಕಂಪನಿ ಪರ ಬ್ಯಾಟಿಂಗ್ ಮಾಡ್ತಾಯಿದ್ದಾರೆ ಅಂತ ರೈತ ಕುಟುಂಬ ಆರೋಪಿಸಿದೆ. ಪೊಲೀಸ್ ಅಧಿಕಾರಿಗಳು ನಮಗೆ ಅವಾಜ್ ಹಾಕ್ತಾರೆ. ಕೇಸ್ ಮಾಡಿ ಒಳಗೆ ಹಾಕುವ ಬೆದರಿಕೆ ಹಾಕ್ತಾರೆ ಅಂತ ಆರೋಪಿಸಿದ್ದಾರೆ. ಅನ್ಯಾಯ ಆಗಿದ್ದು ದೂರು ನೀಡಿದ್ದು ನಾವು ಆದ್ರೆ ಪೊಲೀಸ್ ಅಧಿಕಾರಿಗಳು ವಿಂಡ್ ಕಂಪನಿಗಳ ಪರ ಕೆಲಸ ಮಾಡ್ತಾಯಿದ್ದಾರೆ ಅಂತ ಕಿಡಿಕಾರಿದ್ದಾರೆ. ಜಿಲ್ಲಾಡಳಿತ ನಮಗೆ ನ್ಯಾಯ ಕೊಡಿಸದಿದ್ರೆ ಆತ್ಮಹತ್ಯೆಯೊಂದೆ ದಾರಿ ಅಂತ ರೈತ ಕುಟುಂಬ ಎಚ್ಚರಿಕೆ ನೀಡಿದೆ.

Gadag News farmer woman facing crop damage due to wind fans installed in farming land filled case

ದ್ರೌಪತಿ ಲಮಾಣಿ ಕುಟುಂಬಸ್ಥರು

ರೈತರು ಮೊದಲೇ ಕೃಷಿ ಮಾಡಿ ಜೀವನ ನಡೆಸೋದು ಕಷ್ಟವಾಗಿದೆ. ಮಳೆ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಅಷ್ಟೊ ಇಷ್ಟು ಮಳೆಗೆ ಉತ್ತಮ ಗೋವಿನ ಜೋಳ ಬೆಳೆದ ರೈತರು ಈಗ ವಿಂಡ್ ಕಂಪನಿ ಹಾಳು ಮಾಡ್ತಾಯಿದೆ. ರೈತನ ಕುಟುಂಬದ ನೆರವಿಗೆ ನಿಲ್ಲಬೇಕಾದ ಪೊಲೀಸ್ ಅಧಿಕಾರಿಗಳು ಕಂಪನಿ ಅಧಿಕಾರಿಗಳ ತಾಳಕ್ಕೆ ಕುಣಿಯುತ್ತಿದ್ದಾರೆ. ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ. ಹೀಗಾಗಿ ವಿಂಡ್ ಕಂಪನಿಗಳು ರೈತರ ಜೀವ ಹಿಂಡುತ್ತಿವೆ. ಇಷ್ಟೆಲ್ಲಾ ಅನ್ನದಾತರಿಗೆ ಅನ್ಯಾಯ ಆಗ್ತಾಯಿರೋದು ಕಾನೂನು ಸಚಿವ ಎಚ್ ಕೆ ಪಾಟೀಲ್ ತವರು ಕ್ಷೇತ್ರದಲ್ಲಿ. ಇನ್ನಾದ್ರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರೈತರಿಗೆ ನ್ಯಾಯ ಕೊಡಿಸ್ತಾರಾ ಕಾದುನೋಡಬೇಕಿದೆ.

ಗದಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!