ಶಿರಹಟ್ಟಿಯಲ್ಲಿ ಮಹಿಳೆಯರ ಜೊತೆಗೆ ಕುಳಿತು ಹೆದರದೆ-ಹೆದರಿಸದೆ ಪಂಕ್ತಿ ಭೋಜನ ಮಾಡಿದ ಮಂಗಣ್ಣ!

ಶಿರಹಟ್ಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮಂಗನಿಗೆ ಊಟ ನೀಡಿ ಮಾನವೀಯತೆಯನ್ನು ಮೆರೆದರು. ಮಹಿಳೆಯರು ತಟ್ಟೆಯಲ್ಲಿ ಆಹಾರವನ್ನು ಹಾಕಿದ್ರು, ಅವರ ಜೊತೆಗೆ ಕುಳಿತು, ಹೆದರದೆ/ ಹೆಸರಿಸದೆ ಪಂಕ್ತಿ ಭೋಜನ ಮಾಡಿದ್ದಾನೆ ಮಂಗಣ್ಣ.

ಶಿರಹಟ್ಟಿಯಲ್ಲಿ ಮಹಿಳೆಯರ ಜೊತೆಗೆ ಕುಳಿತು ಹೆದರದೆ-ಹೆದರಿಸದೆ ಪಂಕ್ತಿ ಭೋಜನ ಮಾಡಿದ ಮಂಗಣ್ಣ!
ಗದಗ: ಮಹಿಳೆಯರ ಜೊತೆಗೆ ಕುಳಿತು ಊಟ ಮಾಡಿದ ಮಂಗ
ಸಾಧು ಶ್ರೀನಾಥ್​

Updated on: Mar 20, 2023 | 5:43 PM

ಗದಗ: ಮಹಿಳೆಯರ ಜೊತೆಗೆ ಕುಳಿತು ಊಟ ಮಾಡಿದ ಮಂಗ – ಈ ತಲೆಬರಹ ನಾನಾ ಅರ್ಥಗಳು, ಒಳಾರ್ಥಗಳು, ಗೂಡಾರ್ಥಗಳು ನೀಡುತ್ತಿದೆ. ಆದರೆ ಅದು ಅವರವರ ಭಾವಕ್ಕೆ, ಅನುಭವಕ್ಕೆ ಬಿಟ್ಟ ಸಂಗತಿಯಾಗಿದೆ. ಹೌದು ಗದಗ ಜಿಲ್ಲೆ ಶಿರಹಟ್ಟಿ (Shirahatti) ಪಟ್ಟಣದಲ್ಲಿ ಈ ಅಪರೂಪದ ಘಟನೆ ನಡೆದಿದೆ. ಶಿರಹಟ್ಟಿ ಪಟ್ಟಣದ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಕಚೇರಿ ಆವರಣದಲ್ಲಿ ಇಂದು ಸೋಮವಾರ ಈ ದೃಶ್ಯಾವಳಿ ಕಂಡುಬಂದಿದೆ. ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು (Anganavadi Karyakarte) ಮೀಟಿಂಗ್ ಅಂಗವಾಗಿ ಆಗಮಿಸಿದ್ದರು. ಸಹಜವಾಗಿಯೆ, ಊಟದ ಸಮಯವಾಗಿದ್ದರಿಂದ (Eating) ಮೂರ್ನಾಲ್ಕು ಅಂಗನವಾಡಿ ಕಾರ್ಯಕರ್ತೆಯರು ಮರದ ಕೆಳಗೆ ಊಟಕ್ಕೆ ಕುಳಿತಿದ್ದಾರೆ. ಆ ವೇಳೆ, ಮರದ ಮೇಲಿದ್ದ ಮಂಗವೊಂದು (Monkey) ಕೆಳಗಿಳಿದು ಅನಿರೀಕ್ಷಿತವಾಗಿ ಎಂಟ್ರಿ ಕೊಟ್ಟಿದೆ.

Also Read:

Buntings: ರಾಜಕೀಯ ಪಕ್ಷದ ಬಂಟಿಂಗ್ಸ್​​​ಗೆ ಸಿಲುಕಿ ಅಮಾಯಕ ಕೋತಿಯ ದುರ್ಮರಣ

ಆ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆ ಭಾಗಿರತಿ ಸಾತಪುತೆ ಅವರು ಮಂಗನಿಗೆ ತುತ್ತು ಮಾಡಿ ಊಟ ಮಾಡಿಸಿದರು. ನಾಗಲಕ್ಷ್ಮಿ ಕುಲಕರ್ಣಿ, ಲಕ್ಷ್ಮಿ ನವಲೆ, ರೂಪಾ ಕಟ್ಟಿಮನಿ ಹಾಗೂ ಭಾಗಿರತಿ ನಾಲ್ಕೂ ಜನ ಊಟ ಮಾಡುವಾಗ ಈ ಘಟನೆ ನಡೆದಿದೆ.

ಕಾರ್ಯಕರ್ತೆಯರು ಮಂಗನಿಗೆ ಊಟ ನೀಡಿ ಮಾನವೀಯತೆಯನ್ನು ಮೆರೆದರು. ಮಹಿಳೆಯರು ತಟ್ಟೆಯಲ್ಲಿ ಆಹಾರವನ್ನು ಹಾಕಿದ್ರು, ಅವರ ಜೊತೆಗೆ ಕುಳಿತು, ಹೆದರದೆ/ ಹೆಸರಿಸದೆ ಪಂಕ್ತಿ ಭೋಜನ ಮಾಡಿದ್ದಾನೆ ಮಂಗಣ್ಣ. ಅಪರೂಪದ ಈ ದೃಶ್ಯಗಳು ಸ್ಥಳೀಯರ‌ ಮೊಬೈಲ್ ನಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us