AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ: ಕಣ್ಣಿಲ್ಲದವರಿಗೆ ಕಂಠದಾನ ಮಾಡಿದ ಪುಟ್ಟರಾಜು ಗವಾಯಿಗಳ ಜಯಂತ್ಯೋತ್ಸವ

ಗದಗ: ಕತ್ತಲು ಕವಿದವರ ಬಾಳಿಗೆ ಬೆಳಕಾದವರು. ಕಣ್ಣಿಲ್ಲದವರಿಗೆ ಕಂಠದಲ್ಲೇ ಬದುಕಿನ ಪಾಠ ಹೇಳಿಕೊಟ್ಟವರು. ಇದ್ದಷ್ಟು ದಿನ ಬಂಗಾರದ ಮನುಷ್ಯನಂತೆ ಬಾಳಿದ್ದ ಕರುಣಾಮಯಿ ಆ ಗಾನಗಂಧರ್ವ. ಅದೇ ಅವ್ರ ಆ ನಿಸ್ವಾರ್ಥ ಸೇವೆ ಅವ್ರನ್ನ ದೇವರನ್ನಾಗಿಸಿದೆ. ಲಕ್ಷಾಂತರ ಭಕ್ತರು ಆರಾಧಿಸುವಂತಾಗಿದೆ. ರಸ್ತೆಯೇ ಕಾಣದಂತೆ ಕುಂಭಗಳ ಸಾಲು. ಕಿವಿಗಪ್ಪಳಿಸುವಂತೆ ಡೊಳ್ಳು, ತಮಟೆಯ ಸದ್ದು. ಹೆಜ್ಜೆಯಲ್ಲೇ ಮೋಡಿ ಮಾಡೋ ಕಲಾವಿದರು. ಅದೇನು ಸಂಭ್ರಮ.. ಅದೇನು ಸಡಗರ.. ದೇವರ ಜಾತ್ರೆಗಿಂತಲೂ ಇಲ್ಲಿ ತುಸು ಹೆಚ್ಚೇ ಖುಷಿ ಮನೆ ಮಾಡಿತ್ತು. ಎಲ್ಲರೂ ಒಗ್ಗೂಡಿ ದಯಾಮಯಿಯ […]

ಗದಗ: ಕಣ್ಣಿಲ್ಲದವರಿಗೆ ಕಂಠದಾನ ಮಾಡಿದ ಪುಟ್ಟರಾಜು ಗವಾಯಿಗಳ ಜಯಂತ್ಯೋತ್ಸವ
ಸಾಧು ಶ್ರೀನಾಥ್​
|

Updated on: Mar 04, 2020 | 6:21 PM

Share

ಗದಗ: ಕತ್ತಲು ಕವಿದವರ ಬಾಳಿಗೆ ಬೆಳಕಾದವರು. ಕಣ್ಣಿಲ್ಲದವರಿಗೆ ಕಂಠದಲ್ಲೇ ಬದುಕಿನ ಪಾಠ ಹೇಳಿಕೊಟ್ಟವರು. ಇದ್ದಷ್ಟು ದಿನ ಬಂಗಾರದ ಮನುಷ್ಯನಂತೆ ಬಾಳಿದ್ದ ಕರುಣಾಮಯಿ ಆ ಗಾನಗಂಧರ್ವ. ಅದೇ ಅವ್ರ ಆ ನಿಸ್ವಾರ್ಥ ಸೇವೆ ಅವ್ರನ್ನ ದೇವರನ್ನಾಗಿಸಿದೆ. ಲಕ್ಷಾಂತರ ಭಕ್ತರು ಆರಾಧಿಸುವಂತಾಗಿದೆ.

ರಸ್ತೆಯೇ ಕಾಣದಂತೆ ಕುಂಭಗಳ ಸಾಲು. ಕಿವಿಗಪ್ಪಳಿಸುವಂತೆ ಡೊಳ್ಳು, ತಮಟೆಯ ಸದ್ದು. ಹೆಜ್ಜೆಯಲ್ಲೇ ಮೋಡಿ ಮಾಡೋ ಕಲಾವಿದರು. ಅದೇನು ಸಂಭ್ರಮ.. ಅದೇನು ಸಡಗರ.. ದೇವರ ಜಾತ್ರೆಗಿಂತಲೂ ಇಲ್ಲಿ ತುಸು ಹೆಚ್ಚೇ ಖುಷಿ ಮನೆ ಮಾಡಿತ್ತು. ಎಲ್ಲರೂ ಒಗ್ಗೂಡಿ ದಯಾಮಯಿಯ ಜಯಂತ್ಯೋತ್ಸವ ಮಾಡಿದ್ರು.

ನಿಜ.. ಇಲ್ಲಿನ ಸಂತಸಕ್ಕೆ ಕಾರಣ ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ 107 ನೇ ಜಯಂತ್ಯೋತ್ಸವ. ಗದಗ ಅಂದ್ರೆ ಥಟ್ ಅಂತ ನೆನಪಾಗೋದು ಅಂಧ ಅನಾಥರ ಬಾಳಿನ ಬೆಳಕು ಪಂಡಿತ ಪುಟ್ಟರಾಜ ಗವಾಯಿಗಳು. ಹೀಗಾಗೇ ನಿನ್ನೆ ಗದಗ ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಗವಾಯಿಗಳ ಗದ್ದುಗೆ ದರ್ಶನ ಪಡೆದ ಭಕ್ತರು: ಲಿಂಗೈಕ್ಯ ಪಂಡಿತ ಪುಟ್ಟರಾಜ ಗವಾಯಿಗಳ ಗದ್ದುಗೆ ವಿವಿಧ ಬಣ್ಣಗಳ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಯಾಕಂದ್ರೆ ಪುಟ್ಟರಾಜ ಗವಾಯಿಗಳ 107 ನೇ ಹುಟ್ಟು ಹಬ್ಬವನ್ನ ಭಕ್ತ ಸಮೂಹವೇ ಸೇರಿ ಆಚರಿಸಿತ್ತು. ಕಳೆದ ಐದು ವರ್ಷಗಳಿಂದ ಜಯಂತ್ಯೋತ್ಸವ ಮಾಡಲಾಗ್ತಿದೆ. ಇನ್ನು 1008 ಸುಮಂಗಲೆಯರಿಂದ ಬೃಹತ್ ಕುಂಭ ಮೇಳ ನಡೆಯಿತು. ವೀರಗಾಸೆ, ಹಲಗೆ ಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳು ಶ್ರೀಗಳ ಜಯಂತ್ಯೋತ್ಸವದ ಮೆರಗು ಹೆಚ್ಚಿಸಿದ್ವು.

ನಗರದ ಅಲ್ಲಲ್ಲಿ ಭಕ್ತರು ಸ್ವಯಂಪ್ರೇರಿತವಾಗಿ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ರು. ಪುಣ್ಯಾಶ್ರಮದಲ್ಲಿ 107 ಕೆಜಿ ಬೃಹತ್ ಕೇಕ್​ನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಕಟ್ ಮಾಡಿದ್ರು. ಅದ್ರಲ್ಲೂ ಮಠದ ಆವರಣದಲ್ಲಂತೂ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಬಾಗಲಕೋಟೆ, ಹಾವೇರಿ, ಹುಬ್ಬಳ್ಳಿ ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಯ ಭಕ್ತರು ಮಠಕ್ಕೆ ಆಗಮಿಸಿ ಗವಾಯಿಗಳ ಗದ್ದುಗೆ ದರ್ಶನ ಪಡೆದ್ರು.

ಇಂಥಾ ಕಾಲದಲ್ಲೂ ಪರರ ಸೇವೆಯೇ ಬದುಕು ಅಂತಾ ನಂಬಿದ್ದ ಗವಾಯಿಗಳು ಕಣ್ಣಿಂದ ಮರೆಯಾಗಿದ್ರೂ ಮನಸ್ಸಲ್ಲಿ ಅಚ್ಚು ಹೊತ್ತಿದಂತೆ ಉಳಿದಿದ್ದಾರೆ. ಇದೇ ಕಾರಣಕ್ಕಾಗೇ ಅವ್ರ ಭಕ್ತರು ಹುಟ್ಟಿದ ದಿನವನ್ನೇ ಹಬ್ಬದಂತೆ ಆಚರಿಸ್ತಿದ್ದಾರೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ಚಿಕ್ಕೋಡಿ: ಭಾರಿ ಗಾಳಿ ಮಳೆಗೆ ಹಾರಿಹೋದ 5 ಮನೆಗಳ ಛಾವಣಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ
ದಿಲೀಪ್ ರಾಜ್​​ ವಿಶೇಷ ನೆನಪು; ಹೇಗಿತ್ತು ನೋಡಿ ಅವರ ಜರ್ನಿ