ಇಲ್ಲಿ ನಡೆಯುತ್ತದೆ ಸತ್ತವರಿಗೂ ಮದುವೆ; ಇದು ತುಳುನಾಡಿನ ಪ್ರೇತ ಕಲ್ಯಾಣ

18 ವರ್ಷಕ್ಕಿಂತ ಮುನ್ನ ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರಿಗೆ ಅವರದ್ದೇ ಜಾತಿಯಲ್ಲಿ ಮೃತ ವರ ಅಥವಾ ವಧುವನ್ನು ಹುಡುಕಿ ಮದುವೆ ಮಾಡಿಸುವ ಸಂಪ್ರದಾ ದಕ್ಷಿಣ ಕನ್ನಡ ಮತ್ತು ಕೇರಳದ ಉತ್ತರ ಜಿಲ್ಲೆಯಾದ ಕಾಸರಗೋಡಿನ ತುಳುಭಾಷಿಗರಲ್ಲಿ ಇದೆ. ಇಲ್ಲಿನ ಕೆಲವು ಜಾತಿಯ ಜನರು ಈ ಸಂಪ್ರದಾಯವನ್ನು ಆಚರಿಸುತ್ತಿದ್ದು ಮೃತರ ಆತ್ಮಕ್ಕೆ ಶಾಂತಿ ಸಿಗಲು ಪ್ರೇತ ಮದುವೆಯನ್ನು ನೆರವೇರಿಸುತ್ತಾರೆ. ಈ ವಿಶಿಷ್ಟ ಆಚರಣೆ ಬಗ್ಗೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ.

ಇಲ್ಲಿ ನಡೆಯುತ್ತದೆ ಸತ್ತವರಿಗೂ ಮದುವೆ; ಇದು ತುಳುನಾಡಿನ ಪ್ರೇತ ಕಲ್ಯಾಣ
Image Credit source: X/@anny_arun

Updated on: Apr 22, 2024 | 11:28 AM

ಮದುವೆ- ಪ್ರತಿಯೊಂದು ಜಾತಿ, ಸಮುದಾಯ, ವರ್ಗದಲ್ಲಿ ವಿಭಿನ್ನ ಸಂಪ್ರದಾಯಗಳೊಂದಿಗೆ ನಡೆಯುತ್ತದೆ. ಸಾಮಾನ್ಯವಾಗಿ ಶುಭ ಕಾರ್ಯಗಳು ಆಷಾಢ ಮಾಸದಲ್ಲಿ ನಡೆಯುವುದಿಲ್ಲ. ಆದರೆ ದಕ್ಷಿಣ ಕನ್ನಡದ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ಆಟಿ ತಿಂಗಳು (ಆಷಾಢ ಮಾಸ)ದಲ್ಲಿ ಮದುವೆ ನಡೆಯುತ್ತದೆ. ಅದು ಅಂತಿಂಥ ಮದುವೆಯಲ್ಲ ಪ್ರೇತಗಳ ಮದುವೆ! . ಅಚ್ಚರಿ ಎಂದೆನಿಸಿದರೂ ಇದು ಸತ್ಯ. ಇಲ್ಲಿ ಸಾಮಾನ್ಯ ಜನರ ಮದುವೆಯಂತೆಯೇ ಇಹಲೋಕ ತ್ಯಜಿಸಿದ ಗಂಡು ಮತ್ತು ಹೆಣ್ಣಿನ ಮದುವೆ ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲಾಗುತ್ತದೆ. ಮದುವೆ ನಿಶ್ಚಿತಾರ್ಥದಿಂದ ಹಿಡಿದು ಕನ್ಯಾದಾನ, ಮಾಂಗಲ್ಯ ಧಾರಣೆ, ಹೆಣ್ಣಿನ ಗೃಹ ಪ್ರವೇಶ ಎಲ್ಲವನ್ನೂ ತುಂಬಾ ಅಚ್ಚುಕಟ್ಟಾಗಿ ಮಾಡಲಾಗುತ್ತದೆ. ಇತ್ತೀಚಿಗೆ ಇಂಥಾ ಪ್ರೇತ ಮದುವೆಗಳ ಸಂಖ್ಯೆ ಕಡಿಮೆ ಆಗಿದ್ದರೂ, ಗ್ರಾಮ ಪ್ರದೇಶದ ಜನರ ನಂಬಿಕೆಯಂತೆ ಅಲ್ಲೊಂದು ಇಲ್ಲೊಂದು ಮದುವೆಗಳು ನಡೆಯುತ್ತಿವೆ. ಈ ನಂಬಿಕೆ, ವಿಶಿಷ್ಟ ಆಚರಣೆ ಬಗ್ಗೆ ಮತ್ತಷ್ಟು ತಿಳಿಯೋಣ… ಈ ಮೊದಲೇ ಹೇಳಿದಂತೆ ಕೇರಳದ  ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ತುಳು ಭಾಷಿಗರಾಗಿರುವ  ನಲ್ಕೆದಾಯೆ, ಮೊಗೇರ, ಮಾವಿಲನ್ ಜಾತಿಯವರಲ್ಲಿ ಈ ಮದುವೆ ನಡೆಯುತ್ತದೆ. ಮದುವೆ ಆದರೆ ಮಾತ್ರ ಬದುಕು ಪರಿಪೂರ್ಣ. ಅವಿವಾಹಿತರ ಆತ್ಮ ಮೋಕ್ಷ ಸಿಗದೆ ಅಲೆದಾಡುತ್ತದೆ ಎಂಬ ನಂಬಿಕೆ ಇಲ್ಲಿಯ ಜನರದ್ದು. ಹಾಗಾಗಿ ತಮ್ಮ ಕುಟುಂಬದಲ್ಲಿ ಯಾರಾದರೂ 18 ವರ್ಷಕ್ಕಿಂತ ಮೊದಲು ಸತ್ತಿದ್ದರೆ, ಅವರ ಆತ್ಮಕ್ಕೆ ಶಾಂತಿ ಸಿಗಬೇಕು ಎಂಬ ಉದ್ದೇಶದಿಂದ...

Published On - 10:17 am, Mon, 22 April 24

Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ