AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಾಮ ಪಂಚಾಯತಿ ಮತ ಎಣಿಕೆ ಕೇಂದ್ರಕ್ಕೆ ನಿಂಬೆ ಹಣ್ಣು ತಂದ ಅಭ್ಯರ್ಥಿ.. ಎಲ್ಲಿ?

ಗ್ರಾಮ ಪಂಚಾಯತಿ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಹಾಗೂ ಏಜೆಂಟರು ನಿಂಬೆಹಣ್ಣನ್ನು ತಂದಿದ್ದು, ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಪೊಲೀಸರು ನಡೆಸಿದ ತಪಾಸಣೆಯಲ್ಲಿ ತಿಳಿದು ಬಂದಿದೆ.

ಗ್ರಾಮ ಪಂಚಾಯತಿ ಮತ ಎಣಿಕೆ ಕೇಂದ್ರಕ್ಕೆ ನಿಂಬೆ ಹಣ್ಣು ತಂದ ಅಭ್ಯರ್ಥಿ.. ಎಲ್ಲಿ?
ಮತ ಎಣಿಕೆ ಕೇಂದ್ರಕ್ಕೆ ನಿಂಬೆಹಣ್ಣು ತಂದ ಅಭ್ಯರ್ಥಿ
shruti hegde
| Edited By: |

Updated on:Dec 30, 2020 | 11:47 AM

Share

ವಿಜಯಪುರ: ಗ್ರಾಮ ಪಂಚಾಯತಿ ಮತ ಎಣಿಕೆ ಪ್ರಕ್ರಿಯೆ ಇಂದು (ಡಿ.30) ನಡೆಯುತ್ತಿದೆ. ಈ ಹಿನ್ನೆಯಲ್ಲಿ ಅಭ್ಯರ್ಥಿಗಳು ಹಾಗೂ ಏಜೆಂಟರು ನಿಂಬೆ ಹಣ್ಣನ್ನು ತಂದಿದ್ದು, ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಪೊಲೀಸರು ನಡೆಸಿದ ತಪಾಸಣೆಯಲ್ಲಿ ತಿಳಿದು ಬಂದಿದೆ.

ವಿಜಯಪುರ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿಗಳನ್ನು ಬಿಡುವ ಮುನ್ನ ತಪಾಸಣೆಯನ್ನು ನಡೆಸಲಾಗುತ್ತಿತ್ತು. ಈ ವೇಳೆ, ಅಭ್ಯರ್ಥಿಗಳು ನಿಂಬೆ ಹಣ್ಣು ಮತ್ತು ಗುಟ್ಕಾ ಪ್ಯಾಕೆಟ್​ಗಳನ್ನು ತಂದಿರುವುದು ಪತ್ತೆಯಾಗಿವೆ.

ಮಂಡ್ಯ: ಮತಗಟ್ಟೆ ಬಳಿ ನಿಂತಿದ್ದ ಗ್ರಾಮ ಪಂಚಾಯತಿ ಚುನಾವಣಾ ಅಭ್ಯರ್ಥಿ ಮೇಲೆ ಕಲ್ಲು ತೂರಾಟ

Published On - 10:43 am, Wed, 30 December 20