AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್ ಯಡಿಯೂರಪ್ಪ ಸಂಬಂಧಿ ಎನ್​ಆರ್ ​ಸಂತೋಷ್​ಗೆ ಅರಸೀಕೆರೆ ಜೆಡಿಎಸ್​ ಟಿಕೆಟ್ ಫೈನಲ್​ ಆಯ್ತು: ಅಸ್ತು ಅಂದ್ರು ದೇವೇಗೌಡರು

ಬಿ.ಎಸ್.ಯಡಿಯೂರಪ್ಪ(BS Yediyurappa)ಸಂಬಂಧಿ ಎನ್​ಆರ್​ಸಂತೋಷ್​(NR Santhosh)ಗೆ ಅರಸೀಕೆರೆ ಕ್ಷೇತ್ರದ ಜೆಡಿಎಸ್​ ಟಿಕೆಟ್​ ಫೈನಲ್ ಆಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಸಮ್ಮುಖದಲ್ಲಿ ನಿನ್ನೆ(ಏ.14) ಘೋಷಣೆ ಮಾಡಲಾಗಿದೆ.

ಬಿಎಸ್ ಯಡಿಯೂರಪ್ಪ ಸಂಬಂಧಿ ಎನ್​ಆರ್ ​ಸಂತೋಷ್​ಗೆ ಅರಸೀಕೆರೆ ಜೆಡಿಎಸ್​ ಟಿಕೆಟ್ ಫೈನಲ್​ ಆಯ್ತು: ಅಸ್ತು ಅಂದ್ರು  ದೇವೇಗೌಡರು
ಎನ್​ಆರ್​ಸಂತೋಷ್​ಗೆ ಜೆಡಿಎಸ್​ ಟಿಕೆಟ್​ ಪೈನಲ್​
ಕಿರಣ್ ಹನುಮಂತ್​ ಮಾದಾರ್
|

Updated on:Apr 15, 2023 | 11:50 AM

Share

ಬೆಂಗಳೂರು/ಹಾಸನ: ಬಿ.ಎಸ್.ಯಡಿಯೂರಪ್ಪ(BS Yediyurappa)ಸಂಬಂಧಿ ಎನ್​ಆರ್​ಸಂತೋಷ್​(NR Santhosh)ಗೆ ಅರಸೀಕೆರೆ ಕ್ಷೇತ್ರದ ಜೆಡಿಎಸ್​ ಟಿಕೆಟ್​ ಫೈನಲ್ ಆಗಿದೆ. ನಿನ್ನೆ(ಏ.14) ಜೆಡಿಎಸ್ ವರಿಷ್ಠ ದೇವೇಗೌಡರ ಸಮ್ಮುಖದಲ್ಲಿ, ಈ ಮೊದಲು ಅರಸೀಕೆರೆ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಶೋಕ್​ ಅವರ ಮನವೊಲಿಸಿ ಸಂತೋಷ್​ಗೆ ಟಿಕೆಟ್​ ನೀಡಿದ್ದಾರೆ. ಇನ್ನು N.R.ಸಂತೋಷ್​ ಬಿಜೆಪಿ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ JDS ಸೇರಿದ್ದರು.

ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದ್ದೇ ತಡ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಗೊಂಡಿದೆ. ಹಾಸನ ಅರಸೀಕೆರೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಬಂಧಿ ಎನ್.ಆರ್.ಸಂತೋಷ್​ಗೆ ಟಿಕೆಟ್ ಕೈತಪ್ಪಿತ್ತು. ಹೀಗಾಗಿ ಬಿಜೆಪಿ ವಿರುದ್ಧ ಬಂಡಾಯ ಘೋಷಣೆ ಮಾಡಿದ ಸಂತೋಷ, ಜೆಡಿಎಸ್ ಆಹ್ವಾನ ಮಾಡಿದರೆ ಯೋಚಿಸುವುದಾಗಿ ಹೇಳಿದ್ದರು. ಇದು ಹಾಲಿ ಚುನಾವಣೆಯಲ್ಲಿ ಅರಸೀಕೆರೆ ಕ್ಷೇತ್ರದಲ್ಲಿ ಸಂತೋಷ್ ಬಂಡಾಯ, ಬಿಜೆಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿತ್ತು.

ಇದನ್ನೂ ಓದಿ:ಹಾಸನ: ಜೆಡಿಎಸ್​ ನನ್ನ ನೈಜ ಎದುರಾಳಿ ಎಂದ ಬಿಜೆಪಿ ಶಾಸಕ ಪ್ರೀತಂಗೌಡ

ಈ ಬಗ್ಗೆ ಹೇಳಿಕೆ ನೀಡಿದ್ದ ಸಂತೋಷ್, ಪಕ್ಷ ಟಿಕೆಟ್ ಕೊಡುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ನನಗೆ ಅವಕಾಶ ಕೊಟ್ಟಿಲ್ಲ. ನಾನು ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೆ. ಆದರೆ ಅವಕಾಶವನ್ನು ನಿರಾಕರಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ, ಸ್ಪರ್ಧೆ ಮಾಡಿಯೇ ಸಿದ್ದ. ಜೆಡಿಎಸ್​ನಿಂದ ಆಹ್ವಾನ ಬಂದರೆ ಆಲೋಚನೆ ಮಾಡುತ್ತೇನೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜೆಡಿಎಸ್ ಸೇರುವ ಸುಳಿವು ನೀಡಿದ್ದರು.

ಹಾಸನ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಸ್ವರೂಪ್​ ಗೆಲುವಿಗೆ ರೇವಣ್ಣ ಶ್ರಮಿಸುತ್ತಾರೆ; ಹೆಚ್​.ಡಿ.ದೇವೇಗೌಡ

ಬೆಂಗಳೂರು: ಹಾಸನದಲ್ಲಿ ಸ್ವರೂಪ್​ಗೆ ಟಿಕೆಟ್​ ನೀಡಲಾಗಿದ್ದು, ‘ಎಲ್ಲರೂ ಒಟ್ಟಾಗಿ ಸ್ವರೂಪ್ ಅವರನ್ನ ಗೆಲ್ಲಿಸಬೇಕು ಎಂದು ಸೂಚಿಸಿದ್ದೇನೆ​. ಸ್ವರೂಪ್​ ಗೆಲುವಿಗೆ ಶಕ್ತಿಮೀರಿ ಕೆಲಸ ಮಾಡುವುದಾಗಿ ರೇವಣ್ಣ ಕೂಡ ಹೇಳಿದ್ದಾರೆ ಎಂದು ಬೆಂಗಳೂರಿನಲ್ಲಿ ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡ ಹೇಳಿದರು.

ಇದನ್ನೂ ಓದಿ:JDS Candidates List: ಜೆಡಿಎಸ್ ಎರಡನೇ ಪಟ್ಟಿ ಪ್ರಕಟ; ಭವಾನಿ ರೇವಣ್ಣಗಿಲ್ಲ ಹಾಸನ ಟಿಕೆಟ್, ಸ್ವರೂಪ್​ ಮೇಲುಗೈ

ಸ್ವರೂಪ್‌, ಭವಾನಿ ರೇವಣ್ಣ ನಡುವೆ ನಡೆದಿದ್ದ ಹಾಸನ ಜೆಡಿಎಸ್ ಟಿಕೆಟ್ ಫೈಟ್​

ಜೆಡಿಎಸ್​ ಈಗಾಗಲೇ ಒಂದು ಪಟ್ಟಿ ಬಿಡುಗಡೆ ಮಾಡಿದ್ದು, ಇನ್ನೊಂದು ಪಟ್ಟಿ ಪ್ರಕಟಿಸಲು ಹಾಸನ ಟಿಕೆಟ್​ ಕಗ್ಗಂಟಾಗಿತ್ತು. ಹೌದು ಹಾಸನ ಟಿಕೆಟ್ ವಿಚಾರಕ್ಕೆ ಸಹೋದರರು ಜಿದ್ದಿಗೆ ಬಿದ್ದಿದ್ದರು. ಪತ್ನಿ ಭವಾನಿಗೆ ಟಿಕೆಟ್ ಕೊಡಿಸಲು ಹೆಚ್‌.ಡಿ ರೇವಣ್ಣ ಪಟ್ಟು ಹಿಡಿದು, ಸಮರವನ್ನೇ ಸಾರಿದ್ದರು. ಆದರೆ, ಹೆಚ್‌ಡಿ ಕುಮಾರಸ್ವಾಮಿ ಮಾತ್ರ ಕಾರ್ಯಕರ್ತ ಸ್ವರೂಪ್‌ಗೆ ಟಿಕೆಟ್‌ ಕೊಟ್ಟೇ ತೀರುತ್ತೇನೆಂದು ಹೇಳುತ್ತಿದ್ದರು. ಇವರಿಬ್ಬರ ಕಾಳಗದಲ್ಲಿ ನಾನಾ ತಂತ್ರಗಳು, ದಾಳ ಪ್ರತಿದಾಳ ಉರುಳಿದ್ವು, ಕೊನೆಗೆ ದೇವೇಗೌಡರ ಅಂಗಳಕ್ಕೆ ಬಂದು ನಿಂತು, ರೇವಣ್ಣ ಕುಟುಂಬವನ್ನು ಸಮಾಧಾನಪಡಿಸಿ ಕೊನೆಗೆ ಸ್ವರೂಪ್‌ಗೆ ಟಿಕೆಟ್​ ನೀಡಿದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:50 am, Sat, 15 April 23