ರಾಷ್ಟ್ರೀಯ ಹೆದ್ದಾರಿಗೆ ಲಗ್ಗೆ ಇಟ್ಟ ಗಜಪಡೆ, ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರು!
ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮೇಲೆ ಏಕಾಏಕಿ ಕಾಡಾನೆಗಳು ಆಗಮಿಸಿದ್ದು, ವಾಹನ ಸವಾರರು ಕೂದಳೆಲೆ ಅಂತರಲ್ಲಿ ಪಾರಾಗಿದ್ದಾರೆ.
ಹಾಸನ: ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 (Bengaluru-Mangalore NH 75) ಗೆ ಬೆಳಗ್ಗೆ ಎಂಟ್ರಿ ಕೊಟ್ಟ ಗಜಪಡೆ ಕೆಲ ಕಾಲ ವಾಹನ ಸವಾರರಲ್ಲಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಹಾಸನ ಜಿಲ್ಲೆಯಸಕಲೇಶಪುರ ತಾಲ್ಲೂಕಿನ ಗುಲಗಳಲೆ ಕ್ರಾಸ್ನಲ್ಲಿ ವಾಹನಗಳ ಸಂಚಾರದ ನಡುವೆ ಇಂದು ಬೆಳಗ್ಗೆ ಏಕಾಏಕಿ ಮೂರು ಕಾಡಾನೆ(Elephant)ಗಳು ಹೆದ್ದಾರಿ ಮೇಲೆ ಬಂದುಬಿಟ್ಟಿವೆ. ಅಲ್ಲದೆ ಅವುಗಳ ಹತ್ತಿರವೇ ನಿಂತಿದ್ದ ಇನ್ನೋವಾ, ಓಮ್ನಿ ಸೇರಿದಂತೆ ಒಟ್ಟು ಐದು ಕಾರುಗಳು ಹಾಗೂ 1 ಬೈಕ್ ಕಡೆ ಆನೆಗಳು ಆಗಮಿಸಿವೆ. ಈ ವೇಳೆ ಆತಂಕಕ್ಕೊಳಗಾದ ವಾಹನ ಸವಾರರು, ತಮ್ಮ ವಾಹನಗಳನ್ನು ರಿವರ್ಸ್ ತೆಗೆದುಕೊಂಡರೆ, ಇನ್ನೊಂದಷ್ಟು ಮಂದಿ ವಾಹನವನ್ನು ತಿರುಗಿಸಿ ಹೋಗುವ ಮೂಲಕ ಅಪಾಯದಿಂದ ಪರಾಗಿದ್ದಾರೆ. ಕಾಡಾನೆಗಳು ಹೆದ್ದಾರಿಯಿಂದ ತೋಟದ ಕಡೆಗೆ ದಾಟಿದ ಮೇಲೆ ವಾಹನಗಳ ಸುಗಮ ಸಂಚಾರ ಆರಂಭವಾಯಿತು.
ಇದನ್ನೂ ಓದಿ: ಅಪ್ಪು ಅಗಲಿ 7 ತಿಂಗಳು; ವಿಶೇಷ ವಿಡಿಯೋ ಹಂಚಿಕೊಂಡ ರಾಘವೇಂದ್ರ ರಾಜ್ಕುಮಾರ್
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್

