AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನ್ಸ್​​​ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಪ್ರಕರಣ: ಹಾಸನ ಎಸ್ಪಿ ಶ್ರೀನಿವಾಸ ಗೌಡ ಪ್ರತಿಕ್ರಿಯೆ

ಕಾನ್ಸ್​​​ಟೇಬಲ್ ಗೆ ಮಧ್ಯಾಹ್ನ ಊಟ ಮಾಡದೆ ಇದ್ದ ಕಾರಣ ಬಿಪಿ ವ್ಯತ್ಯಾಸ ಆಗಿದೆ ಅಷ್ಟೇ ಎಂದು ಕಾನ್ಸ್​​​ಟೇಬಲ್ ಮೇಲೆ ಹಾಸನ ಉಪವಿಭಾಗದ ಡಿವೈಎಸ್ಪಿ ಉದಯಭಾಸ್ಕರ್ ಹಲ್ಲೆ ಮಾಡಿರುವುದನ್ನು ಎಸ್ಪಿ ಶ್ರೀನಿವಾಸ ಗೌಡ ಅಲ್ಲಗಳೆದಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಸ್ಪಷ್ಟನೆ ನೀಡಿರುವ ಎಸ್ಪಿ, ತಮ್ಮ ಸಮ್ಮುಖದಲ್ಲೇ ನಡೆದ ಘಟನೆ ಬಗ್ಗೆ ವಿವರಿಸಿದರು.

ಕಾನ್ಸ್​​​ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಪ್ರಕರಣ: ಹಾಸನ ಎಸ್ಪಿ ಶ್ರೀನಿವಾಸ ಗೌಡ ಪ್ರತಿಕ್ರಿಯೆ
ಕಾನ್ಸ್​​​ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಪ್ರಕರಣ: ಹಾಸನ ಎಸ್ಪಿ ಶ್ರೀನಿವಾಸ ಗೌಡ ಪ್ರತಿಕ್ರಿಯೆ
TV9 Web
| Edited By: ಸಾಧು ಶ್ರೀನಾಥ್​|

Updated on:Jun 25, 2022 | 4:03 PM

Share

ಹಾಸನ: ಹಾಸನ ನಗರ ಠಾಣೆ ಪೊಲೀಸ್ ಕಾನ್ಸ್​​​ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಆರೋಪ ಪ್ರಕರಣದ ಬಗ್ಗೆ ಹಾಸನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್​ಪಿ) ಶ್ರೀನಿವಾಸ ಗೌಡ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಶುಕ್ರವಾರ ಠಾಣೆ ಪರಿವೀಕ್ಷಣೆ ವೇಳೆ ಶಸ್ತ್ರಾಸ್ತ್ರ ಸಂಬಂಧ ವಿವರಣೆ ಕೇಳಿದರು. ಆ ವೇಳೆ ಕಾನ್ಸ್​​​ಟೇಬಲ್ ವೇಣುಗೋಪಾಲ ಸರಿಯಾಗಿ ವಿವರಣೆ ನೀಡಲಿಲ್ಲ. ಹಾಗಾಗಿ ಡಿವೈಎಸ್ಪಿ ಅವರನ್ನು ಗದರಿದರು. ನಾನೇ ಹೇಳಿಕೊಡ್ತಿನಿ ಎಂದು ಅವರಿಂದ ವೆಪನ್ ಪಡೆಯೋ ವೇಳೆ ಅವರ ಮಾಸ್ಕ್ ಗೆ ಕೈ ತಾಗಿತ್ತು. ಡಿವೈಎಸ್ಪಿ ಉದ್ದೇಶಪೂರ್ವಕವಾಗಿ ಅವರ ಮೇಲೆ ಕೈ ಮಾಡಿಲ್ಲ ಎಂದು ಎಸ್ಪಿ ಶ್ರೀನಿವಾಸ ಗೌಡ ಹೇಳಿದ್ದಾರೆ.

ಕಾನ್ಸ್​​​ಟೇಬಲ್ ಗೆ ಮಧ್ಯಾಹ್ನ ಊಟ ಮಾಡದೆ ಇದ್ದ ಕಾರಣ ಬಿಪಿ ವ್ಯತ್ಯಾಸ ಆಗಿದೆ ಅಷ್ಟೇ ಎಂದು ಕಾನ್ಸ್​​​ಟೇಬಲ್ ಮೇಲೆ ಹಾಸನ ಉಪವಿಭಾಗದ ಡಿವೈಎಸ್ಪಿ ಉದಯಭಾಸ್ಕರ್ ಹಲ್ಲೆ ಮಾಡಿರುವುದನ್ನು ಎಸ್ಪಿ ಶ್ರೀನಿವಾಸ ಗೌಡ ಅಲ್ಲಗಳೆದಿದ್ದಾರೆ. ಇದೊಂದು ಆಕಸ್ಮಿಕ ಘಟನೆ ಎಂದು ಸ್ಪಷ್ಟನೆ ನೀಡಿರುವ ಎಸ್ಪಿ, ತಮ್ಮ ಸಮ್ಮುಖದಲ್ಲೇ ನಡೆದ ಘಟನೆ ಬಗ್ಗೆ ವಿವರಿಸಿದರು. ಜೂನ್ 23 ರ ಸಂಜೆ ಹಾಸನ ನಗರ ಠಾಣೆ ಪರಿವೀಕ್ಷಣೆ ವೇಳೆ ಕಾನ್ಸ್​​​ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ ಆರೋಪ ಕೇಳಿ ಬಂದಿತ್ತು.

ನಮ್ಮದು ಶಿಸ್ತಿನ ಇಲಾಖೆ, ಕೆಲಸದ ವೇಳೆ ನಮ್ಮ ಕೆಳ ಹಂತದ ಅಧಿಕಾರಿಗಳನ್ನ ಶಿಸ್ತಿನಿಂದ ನಡೆಸಿಕೊಳ್ಳಬೇಕಾಗುತ್ತೆ. ಘಟನೆಯ ಹಿಂದೆ ವೈಯಕ್ತಿಕ ದ್ವೇಷವಾಗಲಿ, ಯಾವುದೇ ವೈಯಕ್ತಿಕ ಹಿನ್ನೆಲೆಯಲ್ಲಿ ನಡೆದಿಲ್ಲ. ಹೇಳಿಕೊಡುವ ಹುಮ್ಮಸ್ಸಿನಲ್ಲಿ ನಡೆದಿರೊ ಘಟನೆ ಇದಾಗಿದೆ. ಆದರೂ ಈ ಬಗ್ಗೆ ಡಿವೈಎಸ್ಪಿ ಅವರಿಗೆ ವಾರ್ನ್ ಮಾಡಿ, ತಾಳ್ಮೆಯಿಂದ ವರ್ತಿಸುವಂತೆ ಹೇಳಿದ್ದೇನೆ. ಇಬ್ಬರನ್ನೂ ಕೂಡ ಕರೆಸಿ ಮಾತನಾಡಿ, ಪರಿಸ್ಥಿತಿ ಅರ್ಥ ಮಾಡಿಸಿದ್ದೇನೆ ಎಂದು ಎಸ್ಪಿ ಶ್ರೀನಿವಾಸ ವಿವರಣೆ ನೀಡಿದ್ದಾರೆ.

Also Read:

ಹಾಸನ ಎಸ್​ಪಿ ಸಮ್ಮುಖದಲ್ಲೇ ಕಾನ್ಸ್​​ಟೇಬಲ್ ಮೇಲೆ ಡಿವೈಎಸ್ಪಿ ಹಲ್ಲೆ, ಆಸ್ಪತ್ರೆಗೆ ದಾಖಲು Also Read: ಭ್ರೂಣ ಪತ್ತೆ ಪ್ರಕರಣ: ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ಎಂದ ಆರೋಗ್ಯ ಸಚಿವ ಸುಧಾಕರ್, ಸ್ಕ್ಯಾನಿಂಗ್ ಸೆಂಟರ್‌ಗಳ ಮೇಲೆ ದಿಢೀರ್ ದಾಳಿ

Published On - 4:00 pm, Sat, 25 June 22

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!