AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಆನ್ಲೈನ್ ಸಾಲ ಪಡೆದಿದ್ದವನಿಗೆ ಕಂಪನಿ ಕಿರುಕುಳ ಆರೋಪ; ವಾರದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವು

ಹಾಸನದ ಉದಯನಗರ ಬಡಾವಣೆ ನಿವಾಸಿ ಮೃತ ಅಂಬರೀಶ್ ಹೆಸರಿನಲ್ಲಿ ಆತನ ಸ್ನೇಹಿತರಿಗೆ ಸಂದೇಶ ಕಳಿಸಿ ಕಿರುಕುಳ ನೀಡಲಾಗಿತ್ತು. ಅಂಬರೀಶ್ ಕಾಂಟ್ಯಾಕ್ಟ್ ಲಿಸ್ಟ್ನಲ್ಲಿದ್ದವರಿಗೆ ಸಂದೇಶ ರವಾನೆ ಮಾಡಿದ್ದರು. ಅಂಬರೀಶ್ ಓರ್ವ ಫ್ರಾಡ್ ಎಂದು ಪೋಸ್ಟ್ ಹಾಕಿ ಕಿರುಕುಳ ನೀಡಿದ್ದರು.

ಹಾಸನದಲ್ಲಿ ಆನ್ಲೈನ್ ಸಾಲ ಪಡೆದಿದ್ದವನಿಗೆ ಕಂಪನಿ ಕಿರುಕುಳ ಆರೋಪ; ವಾರದ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವು
ಹಾಸನ ಬಡಾವಣೆ ಠಾಣೆ
TV9 Web
| Updated By: ಆಯೇಷಾ ಬಾನು|

Updated on: Mar 13, 2022 | 5:29 PM

Share

ಹಾಸನ: ಆನ್ ಲೈನ್ ಮೂಲಕ ಸಾಲ ಪಡೆದಿದ್ದವನಿಗೆ ಕಂಪನಿ ಟಾರ್ಚರ್ ನೀಡಿದ ಆರೋಪ ಕೇಳಿ ಬಂದಿದ್ದು ಮರ್ಯಾದೆಗಂಜಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಇಂದು ಹಾಸನ ವೈದ್ಯಕೀಯ ಕಾಲೇಜಿನಲ್ಲಿ ಮೃತಪಟ್ಟಿದ್ದಾರೆ. ಹಾಸನ ನಗರದ ಅಂಬರೀಶ್(40), ಮೃತ ವ್ಯಕ್ತಿ.

ಆತ ಸೆಕ್ಯುರಿಟಿ ಏಜೆನ್ಸಿಯೊಂದನ್ನ ನಡೆಸೋ ಉದ್ದೇಶದಿಂದ ಆನ್ಲೈನ್ ಸಂಸ್ಥೆಯೊಂದರಿಂದ ಸಾಲ ಪಡೆದಿದ್ದನಂತೆ, ಸಾಲ ಪಡೆದು ಬೆಂಗಳೂರಿನಲ್ಲಿ ಜೀನಿಯಸ್ ಎನ್ನೋ ಹೆಸರಿನ ಕಂಪನಿ ಶುರುಮಾಡಿದ್ದ ಆದ್ರೆ ತಕ್ಷಣಕ್ಕೆ ವಕ್ಕರಿಸಿಕೊಂಡಿದ್ದ ಕೊರೊನಾ ಕಚೇರಿ ಬಾಗಿಲು ಮುಚ್ಚುವಂತೆ ಮಾಡಿತ್ತು. ಮತ್ತೆ ಕೊರೊನಾ ದೂರವಾಗಿ ಎಲ್ಲವೂ ಸರಿ ಹೋಗೋ ಸಮಯ ಬರೋವೇಳೆಗೆ, ಪಡೆದಿದ್ದ ಮೂರ್ನಾಲ್ಕು ಲಕ್ಷ ರೂಪಾಯಿ ಬಡ್ಡಿ ಸೇರಿ ಹತ್ತು ಲಕ್ಷಕ್ಕೆ ಮುಟ್ಟಿತ್ತು. ನೂರಾರು ಕನಸು ಹೊತ್ತು ಸಾಲಮಾಡಿ ಕಂಪನಿ ಶುರುಮಾಡಿದ ವ್ಯಕ್ತಿ ಈಗ ಸಾಲಕೊಟ್ಟವರು ಕಿರುಕುಳ ನೀಡಿದ್ರು ಎಂದು ಆತ್ಮಹತ್ಯೆ ಗೆ ಶರಣಾಗಿದ್ದಾರೆ.

ಮೂಲತಃ ಹಾಸನ ನಗರದ ಅಂಬರೀಶ್ ಬೆಂಗಳೂರಿನ ಕೆಂಗೇರಿಯಲ್ಲಿ ನೆಲೆಸಿದ್ರು. ಸ್ವಂತ ಕಂಪನಿ ಮಾಡಿ ಬದುಕು ಕಟ್ಟಿಕೊಳ್ಳೋಕೆ ಅಂತಾ ಆನ್ಕೈನ್ ನಲ್ಲಿ ಸಾಲ ಪಡೆದು ಕಂಪನಿಯೊಂದು ನೀಡಿದ್ದ ಆಫರ್ ಗೆ ಮರುಳಾಗಿ ಸಾಲ ಪಡೆದುಕೊಂಡಿದ್ದಾರೆ, ಆದ್ರೆ ಕೊರೊನಾದಿಂದ ನಷ್ಟವಾಗಿ ಸಾಲ ತೀರಿಸಲು ಆಗದಿದ್ದಾಗ ಸಾಲಕೊಟ್ಟವರು ಲೀಗಲ್ ನೊಟೀಸ್ ಕೊಟ್ಟಿದ್ರು, ದೆಹಲಿ ಕೋರ್ಟ್ ನಲ್ಲಿ ಕೇಸ್ ಹಾಕಿ ಮನೆಗೆ ಬೌನ್ಸರ್ಸ್ ಬರ್ತಾರೆ, ನಿನ್ನನ್ನ ಎಳೆದೊಯ್ತಾರೆ ಎಂದು ಬೆದರಿಸೋಕೆ ಶುರುಮಾಡಿದ್ರು, ಇದಕ್ಕೂ ಮುಂದೆ ಹೋಗಿ ಅಂಬರೀಶ್ ನಂಬರ್ ಹ್ಯಾಕ್ ಮಾಡಿ ಅವರ ಎಲ್ಲಾ ವಾಟ್ಸಾಪ್ ಕಾಂಟ್ಯಾಕ್ಟ್ ಗಳಿಗೆ ಅಂಬರೀಶ್ ಹೆಸರಿನಲ್ಲಿ ವಿಡಿಯೋ ಮಾಡಿ ಈತ ಮೋಸಗಾರ, ಅಂತೆಲ್ಲಾ ಅಶ್ಲೀಲ ಪದಗಳ ಮೂಲಕ ನಿಂದಿಸಿ ಪೋಸ್ಟ್ ಮಾಡಿದ್ರು, ಇದ್ರಿಂದ ಮನನೊಂದಿದ್ದ ಅಂಬರೀಶ್ ವಾರದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು, ಏಳು ದಿನಗಳ ಬಳಿಕ ಚಿಕಿತ್ಸೆ ಫಲಿಸದೆ ಇಂದು ಅಂಬರೀಶ್ ಕೊನೆಯುಸಿರೆಳೆದಿದ್ದಾರೆ.

ಕೊಟ್ಟ ಸಾಲ ವಾಪಸ್ ಕೊಡೋಕೆ ಆಗದೆ ಆಘಾತದಲ್ಲಿದ್ದ ವ್ಯಕ್ತಿಗೆ ಮಾನಸಿಕ ಕಿರುಕುಳ ನೀಡಿ ಸಾವಿಗೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸಂಬಂಧಿಕರು ಆಗ್ರಹಿಸಿದ್ದಾರೆ ,ಹಾಸನದ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ದೂರು ದಾಖಲಾಗಿದೆ. ಸ್ವಾವಲಂಬಿ ಬದುಕು ನಡೆಸೋಕೆ ಅಂತಾ ಆನ್ಲೈನ್ ಸಾಲ ಪಡೆದಿದ್ದ ವ್ಯಕ್ತಿ ಈಗ ಇದೇ ಕಾರಣಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಮದುವೆಯಾಗಿ ಪುಟ್ಟ ಮಕ್ಕಳಿರೋ ಸಂಸಾರದಲ್ಲಿ ನಡೆದಿರೋ ಆಘಾತದಿಂದ ಕುಟುಂಬ ಸದಸ್ಯರು ಕಣ್ಣೀರಿಡುತ್ತಿದ್ದಾರೆ.

ಸ್ವಂತ ಕಂಪನಿ ಮಾಡಿಕೊಂಡು ಚನ್ನಾಗಿದ್ದವರಿಗೆ ಸಾಲದ ಹೆಸರಿನಲ್ಲಿ ಹಣ ನೀಡಿದ್ರು, ಬಡ್ಡಿಗೆ ಬಡ್ಡಿ ಸೇರಿಸಿ ಲಕ್ಷ ಲಕ್ಷ ಹಣ ಕಟ್ಟುವಂತೆ ಪೀಡಿಸಿ ಮಾನಸಿಕವಾಗಿ ಹಿಂಸೆ ನೀಡಿದ್ರು. ಇದರಿಂದ ಅಂಬರೀಶ್ ಸಾವಿಗೀಡಾಗಿದ್ದಾರೆ, ಆನ್ಲೈನ್ ಸಾಲ ಬ್ಯಾನ್ ಆಗಬೇಕು, ಅಮಾಯಕರ ಪ್ರಾಣ ಉಳಿಯಬೇಕು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ: ಮಂಜುನಾಥ್. ಕೆಬಿ, ಟಿವಿ9 ಹಾಸನ

ಇದನ್ನೂ ಓದಿ: ಯಡಿಯೂರಪ್ಪಗೆ ವಯಸ್ಸಾಗಿದೆ ಇನ್ಮೇಲೆ ಆರಾಮಾಗಿರಬೇಕು, ಸುಖಾಸುಮ್ಮನೇ ಯಾಕೆ ಹೈರಾಣಾಗುತ್ತಾರೆ -ಶಾಸಕ ಯತ್ನಾಳ್‌

Faf du Plessis: ಕೊಹ್ಲಿ ನಾಯಕತ್ವದ ಶೈಲಿ ಆಗಲ್ಲ, ಧೋನಿ ಬೆಸ್ಟ್ ಕ್ಯಾಪ್ಟನ್​: RCB ನಾಯಕನ ಮನದಾಳದ ಮಾತು

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ಓವರ್ ಮಧ್ಯದಲ್ಲಿಯೇ ಅಫ್ರಿದಿ ಬೌಲಿಂಗ್ ನಿಲ್ಲಿಸಿದ ಅಂಪೈರ್
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ
ವಿಮಾನ ನಿಲ್ದಾಣದಲ್ಲಿ ಮೋದಿಗೆ ಜೋರ್ಡಾನ್‌ ಪ್ರಧಾನಿಯಿಂದ ಆತ್ಮೀಯ ಸ್ವಾಗತ