AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಪರಿಹಾರ ನಿಧಿಗೆ ತನ್ನ ಮಾಸಾಶನ ನೀಡಿ ಮಾದರಿಯಾದ ವಿಕಲಚೇತನ

ಹಾಸನ: ಒಂದ್ಕಡೆ ಕೊರೊನಾ ಅನ್ನೋ ಸಂಕಷ್ಟ. ಲಾಕ್​ಡೌನ್​​ನಿಂದಾಗಿ ತುತ್ತೂಟಕ್ಕೂ ಪರದಾಟ. ಅದೆಷ್ಟೋ ಜನರು ಕಣ್ಣೀರ ಕೂಪಕ್ಕೆ ಬಿದ್ದಿದ್ದಾರೆ. ದುಡಿದು ತಿನ್ನಬೇಕಾದ ಕೈಗಳು ಕಟ್ಟಿ ಹಾಕಿದೆ. ಇಡೀ ದೇಶವೇ ಆರ್ಥಿಕ ಮುಗ್ಗಟ್ಟಿನ ಆಪತ್ತಿಗೆ ಸಿಲುಕಿದೆ. ಇಂತಹ ಸಂಕಷ್ಟದ ಸಮಯದಲ್ಲೂ ವಿಕಲಚೇತನ ಔದಾರ್ಯ ಮೆರೆದಿದ್ದಾನೆ. ಪ್ರಧಾನಿ ಪರಿಹಾರ ನಿಧಿಗೆ ನೆರವು ನೀಡಿ ಒಡೆಯನಾಗಿದ್ದಾನೆ. ಪ್ರಧಾನಿ ಪರಿಹಾರ ನಿಧಿಗೆ ವಿಕಲಚೇತನ ಧನ ಸಹಾಯ! ಯೆಸ್.. ಸಹಾಯ ಮಾಡೋಕೆ ಕೋಟಿ ಕೋಟಿ ಹಣವೇ ಬೇಕಿಲ್ಲ. ಲಕ್ಷಾಧಿಪತಿಯೆಂಬ ಹಣೆಪಟ್ಟಿಯೂ ಗಿಟ್ಟಿಸಿಕೊಂಡಿರ್ಬೇಕಿಲ್ಲ. ನೆರವಾಗೋ ನಾಯಕತ್ವ ಇದ್ದರೆ […]

ಪ್ರಧಾನಿ ಪರಿಹಾರ ನಿಧಿಗೆ ತನ್ನ ಮಾಸಾಶನ ನೀಡಿ ಮಾದರಿಯಾದ ವಿಕಲಚೇತನ
ಸಾಧು ಶ್ರೀನಾಥ್​
|

Updated on: Apr 30, 2020 | 2:15 PM

Share

ಹಾಸನ: ಒಂದ್ಕಡೆ ಕೊರೊನಾ ಅನ್ನೋ ಸಂಕಷ್ಟ. ಲಾಕ್​ಡೌನ್​​ನಿಂದಾಗಿ ತುತ್ತೂಟಕ್ಕೂ ಪರದಾಟ. ಅದೆಷ್ಟೋ ಜನರು ಕಣ್ಣೀರ ಕೂಪಕ್ಕೆ ಬಿದ್ದಿದ್ದಾರೆ. ದುಡಿದು ತಿನ್ನಬೇಕಾದ ಕೈಗಳು ಕಟ್ಟಿ ಹಾಕಿದೆ. ಇಡೀ ದೇಶವೇ ಆರ್ಥಿಕ ಮುಗ್ಗಟ್ಟಿನ ಆಪತ್ತಿಗೆ ಸಿಲುಕಿದೆ. ಇಂತಹ ಸಂಕಷ್ಟದ ಸಮಯದಲ್ಲೂ ವಿಕಲಚೇತನ ಔದಾರ್ಯ ಮೆರೆದಿದ್ದಾನೆ. ಪ್ರಧಾನಿ ಪರಿಹಾರ ನಿಧಿಗೆ ನೆರವು ನೀಡಿ ಒಡೆಯನಾಗಿದ್ದಾನೆ.

ಪ್ರಧಾನಿ ಪರಿಹಾರ ನಿಧಿಗೆ ವಿಕಲಚೇತನ ಧನ ಸಹಾಯ! ಯೆಸ್.. ಸಹಾಯ ಮಾಡೋಕೆ ಕೋಟಿ ಕೋಟಿ ಹಣವೇ ಬೇಕಿಲ್ಲ. ಲಕ್ಷಾಧಿಪತಿಯೆಂಬ ಹಣೆಪಟ್ಟಿಯೂ ಗಿಟ್ಟಿಸಿಕೊಂಡಿರ್ಬೇಕಿಲ್ಲ. ನೆರವಾಗೋ ನಾಯಕತ್ವ ಇದ್ದರೆ ಸಾಕು. ಕೊಡುವ ಮಸ್ಸಿದ್ದರೆ ಸಾಕು ಅದೆ ದಾರಿದೀಪ. ಎಲ್ಲದಕ್ಕಿಂತ ಮಾದರಿ ಹಾಸನ ಜಿಲ್ಲೆ ದುದ್ದ ಸಮೀಪದ ಕಾರೆಬರೆ ಕಾವಲ್ ಗ್ರಾಮದ ವಿಕಲಚೇತನ ಮಧುವನ್.

ಬಡ ಯುವಕ ಮಧುವನ್ ಹುಟ್ಟುತ್ತಲೇ ವಿಕಲಚೇತನನಾಗಿದ್ದಾನೆ. ಇರೋ ತುಂಡು ಜಮೀನಿನಲ್ಲೇ ಕುಟುಂಬದ ಬಂಡಿ ಸಾಗ್ಬೇಕು. ಆದ್ರೆ ಪ್ರತಿನಿತ್ಯ ಕೊರೊನಾ ಸಂಕಷ್ಟದಿಂದ ಜನರ ನರಳಾಟ, ಕಣ್ಣೀರು, ವಾರಿಯರ್ಸ್​ಗಳ ಹೋರಾಟವನ್ನ ಟಿವಿಗಳಲ್ಲಿ ನೋಡಿ, ಪೇಪರ್​​ನಲ್ಲಿ ಓದುತ್ತಿದ್ದ. ಸಂಕಷ್ಟದಲ್ಲಿರುವವರ ನೆರವಿಗೆ ತಾನೂ ಸಹಾಯ ಮಾಡ್ಬೇಕು ಅಂತ ಮಧುವನ್ ನಿರ್ಧರಿಸಿದ್ದಾನೆ.

ಬಳಿಕ ತನಗೆ ಬರೋ ಅತ್ಯಲ್ಪ ಗೌರವಧನ ಅಂದ್ರೆ, 1 ತಿಂಗಳ ವೇತನವನ್ನ ಪ್ರಧಾನಿ ಮೋದಿ ಪರಿಹಾರ ನೀಧಿಗೆ ನೀಡಿದ್ದಾನೆ. ಮಾಡಿರೋದು ಸಣ್ಣ ಸಹಾಯವಾದ್ರೂ ಎಲ್ಲರಿಗಿಂತ ದೊಡ್ಡವನಾಗಿದ್ದಾನೆ. ಸರ್ಕಾರ ಕೈಗೊಂಡ ತೀರ್ಮಾನ ಕಟ್ಟುನಿಟ್ಟಾಗಿ ಪಾಲಿಸಿ ಎಂದು ಕರೆ ನೀಡಿ, ಕೊರೊನಾ ವಾರಿಯರ್ಸ್ ಕಣ್ಣಲ್ಲಿ ನೀರು ತರಿಸಬೇಡಿ ಅಂತ ಕೈ ಮುಗಿದು ಮನವಿ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾನೆ.

ಇನ್ನು, ಕಳೆದ ಒಂದೂವರೆ ತಿಂಗಳಿನಿಂದ ಕೊರೊನಾ ತಂದೊಡ್ಡಿಡೋ ಸಂಕಷ್ಟ. ಬಡವರು ಅವರ ಮಕ್ಕಳ ಪರದಾಟವನ್ನ ಕಂಡು ಮಧುವನ್​ ಹೃದಯ ಮಮ್ಮಲ ಮರುಗಿದೆ. ಸ್ಥಳೀಯ ಪೋಸ್ಟ್​​​ಮನ್ 3 ತಿಂಗಳ ಮಸಾಶನದ ಜೊತೆಗೆ ಈತನ ನಿವಾಸಕ್ಕೆ ಆಗಮಿಸಿದ್ರಂತೆ. ಬಳಿಕ 2 ತಿಂಗಳ ಮಾಸಾಶನ ಪಡೆದು ಉಳಿದ 1 ತಿಂಗಳ ಮಾಶಾಸನವನ್ನ ಪ್ರಧಾನಿ ಮೋದಿ ಪರಿಹಾರ ನಿಧಿಗೆ ನೀಡಿದ್ದಾರೆ. ಪೋಸ್ಟ್​​ಮನ್ ಮೂಲಕ ಹಣ ಸಂದಾಯ ಮಾಡಿಸಿ ಸಂಕಷ್ಟದಲ್ಲಿರೋರಿಗೆ ನೆರವಾಗಿದ್ದಾರೆ.

ಒಟ್ನಲ್ಲಿ, ಕೈ ಕಾಲು ಗಟ್ಟಿ ಇದ್ರೂ ಕೋಟಿ ಕೋಟಿ ಹಣ ಇದ್ರೂ ಸಂಕಷ್ಟದಲ್ಲಿ ನೆರವಾಗೋಕೆ ಕೆಲವ್ರು ಹಿಂದೆ ಮುಂದೆ ನೋಡ್ತಾರೆ. ಕ್ಯಾಮರಾಗೆ ಫೋಸ್​​ ಕೊಟ್ಟು ಪಬ್ಲಿಸಿಟಿ ಗಿಟ್ಟಿಸಿಕೊಳ್ಳೋರು, ಇದ್ದೂ ಇಲ್ಲದಂತೆ ನಟಿಸೋರೆ ಹೆಚ್ಚು. ಅಂತದ್ರಲ್ಲಿ ಕೊಡೋ ಕೈಗಳೇ ಶ್ರೇಷ್ಟ ಅನ್ನೋದನ್ನ ವಿಕಚೇತನ ಸಾಬೀತು ಮಾಡಿದ್ದಾನೆ. ಕೊರೊನ ವಿರುದ್ಧ ದೇಶವೇ ಒಗ್ಗಟ್ಟಾಗಿ ಹೋರಾಡೋವಾಗ ವಿಕಲಚೇತನನ ನೆರವು ಮಾದರಿಯಾಗಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?