ನ್ಯಾಯ ಕೇಳಲು ಬಂದಿದ್ದ ಹಟ್ಟಿ ಚಿನ್ನದ ಗಣಿ ಕಾರ್ಮಿಕನಿಗೆ ಅಮಾನತು ಶಿಕ್ಷೆ

ಮೆಡಿಕಲ್ ಅನ್​ಫಿಟ್ ಸೌಲಭ್ಯ ರದ್ದುಗೊಳಿಸಿದ ಹಿನ್ನಲೆ ಸಚಿವ ನಿರಾಣಿಗೆ ಘೇರಾವ್ ಹಾಕಲು ಕಾರ್ಮಿಕರು ಯತ್ನಿಸಿದ್ದರು. ಜೊತೆಗೆ ಮುರುಗೇಶ್ ನಿರಾಣಿ ಮುಂದೆ ಕಾರ್ಮಿಕರು ತಮ್ಮ ಗೋಳನ್ನು ತೋಡಿಕೊಂಡಿದ್ದರು. ಕಾರ್ಮಿಕರ ಆಕ್ರೋಶ ಕಂಡು ಸಚಿವರು ಸ್ಥಳದಿಂದ ನಿರ್ಗಮಿಸಿದ್ದರು.

ನ್ಯಾಯ ಕೇಳಲು ಬಂದಿದ್ದ ಹಟ್ಟಿ ಚಿನ್ನದ ಗಣಿ ಕಾರ್ಮಿಕನಿಗೆ ಅಮಾನತು ಶಿಕ್ಷೆ
ಹಟ್ಟಿ ಚಿನ್ನದ ಗಣಿ ಕಾರ್ಮಿಕರ ಆಕ್ರೊಶ
sandhya thejappa Edited By: ಆಯೇಷಾ ಬಾನು

Updated on: Feb 28, 2021 | 10:36 AM

ರಾಯಚೂರು: ಮೆಡಿಕಲ್ ಅನ್​ಫಿಟ್​ ಸೌಲಭ್ಯ ರದ್ದು ಮಾಡಿದ್ದಕ್ಕಾಗಿ ಕಳೆದ ಶುಕ್ರವಾರ (ಫೆಬ್ರವರಿ 26) ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರ ವಿರುದ್ಧ ಮುಗಿಬಿದ್ದಿದ್ದರು. ಸಚಿವರನ್ನು ಭೇಟಿಯಾದ ವೇಳೆ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ನ್ಯಾಯ ನೀಡಿ ಎಂದು ಆಗ್ರಹಿಸಿದರು. ಆದರೆ ಇದೀಗ ನ್ಯಾಯ ಕೇಳಲು ಹೋಗಿದ್ದ ಚಿನ್ನದ ಗಣಿ ತಾಂತ್ರಿಕ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಲ್ಲಪ್ಪ ಎಂಬುವವರನ್ನು ಹಟ್ಟಿ ಚಿನ್ನದ ಗಣಿ ಕಂಪನಿ ಆಡಳಿತ ಮಂಡಳಿ ಅಮಾನತು ಗೊಳಿಸಿ ಮೂರು ದಿನದೊಳಗೆ ನೋಟಿಸ್​ಗೆ ಉತ್ತರಿಸುವಂತೆ ಸೂಚನೆ ನೀಡಿದೆ.

ಮೆಡಿಕಲ್ ಅನ್​ಫಿಟ್ ಸೌಲಭ್ಯ ರದ್ದುಗೊಳಿಸಿದ ಹಿನ್ನಲೆ ಸಚಿವ ನಿರಾಣಿಗೆ ಘೇರಾವ್ ಹಾಕಲು ಕಾರ್ಮಿಕರು ಯತ್ನಿಸಿದ್ದರು. ಜೊತೆಗೆ ಮುರುಗೇಶ್ ನಿರಾಣಿ ಮುಂದೆ ಕಾರ್ಮಿಕರು ತಮ್ಮ ಗೋಳನ್ನು ತೋಡಿಕೊಂಡಿದ್ದರು. ಕಾರ್ಮಿಕರ ಆಕ್ರೋಶ ಕಂಡು ಸಚಿವರು ಸ್ಥಳದಿಂದ ನಿರ್ಗಮಿಸಿದ್ದರು. ಈ ಘಟನೆ ನಡೆದ ಬಳಿಕ ಗಣಿ ತಾಂತ್ರಿಕ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಲ್ಲಪ್ಪ ಎಂಬಾತ ಅಮಾನತುಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ದೋಷಾರೋಹಣ ಪತ್ರ

ಇದನ್ನೂ ಓದಿ

ಯಲಹಂಕ ಭೂಸ್ವಾಧೀನಾಧಿಕಾರಿಯಾಗಿದ್ದ ಡಾ. ಸುಧಾ ಮನೆ ACB ರೇಡ್; ಮನೆಯಲ್ಲಿ ‘ಚಿನ್ನದ ಗಣಿ’

ಮರಳು, ಕ್ರಷರ್ ಇಲ್ಲದೆ ನಮ್ಮ ಅಭಿವೃದ್ಧಿಯಾಗಲ್ಲ – ಗಣಿ ಸಚಿವ ಮರುಗೇಶ್ ನಿರಾಣಿ

Published On - 10:32 am, Sun, 28 February 21

sandhya thejappa
Follow Us