DK Shi ಈಗ ಹಲ್ಲು ಕಿತ್ತ ಹಾವಿನಂತೆ, ಏಕಾಂಗಿಯೂ ಆಗಿದ್ದಾರೆ -ರೇಣುಕಾಚಾರ್ಯ

ಹಾವೇರಿ: ಡಿಕೆಶಿ ಮೇಲೆ ಒಂದೂ ಕೇಸ್ ಇಲ್ಲವೆ? ಡಿ.ಕೆ.ಶಿವಕುಮಾರ್ ಈಗ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಅವರು ಕೂಡ ಏಕಾಂಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಅಭ್ಯರ್ಥಿ ಅರುಣ್ ಮೇಲೆ ಕೇಸ್​ಗಳಿವೆ. ಆದ್ರೂ ಬಿಜೆಪಿ ಟಿಕೆಟ್ ನೀಡಿದೆ ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ. ನಾವು ಎದೆ ತಟ್ಟಿ ಹಿಂದೂ ಅಂತಾ ಹೇಳಿಕೊಳ್ತೇವೆ. ಆದರೆ ಜಾತಿ ರಾಜಕಾರಣ ಮಾಡುತ್ತಿರೋದು ಯಾರು? ಟಿಪ್ಪು ಜಯಂತಿ ಮಾಡಿದವರು ಯಾರು? ನೀವು ಜಾತಿವಾದಿಗಳು, ನಾವಲ್ಲ ಎಂದು ಡಿಕೆಶಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ […]

DK Shi ಈಗ ಹಲ್ಲು ಕಿತ್ತ ಹಾವಿನಂತೆ, ಏಕಾಂಗಿಯೂ ಆಗಿದ್ದಾರೆ -ರೇಣುಕಾಚಾರ್ಯ
ಸಾಧು ಶ್ರೀನಾಥ್​

Updated on: Dec 02, 2019 | 12:10 PM

ಹಾವೇರಿ: ಡಿಕೆಶಿ ಮೇಲೆ ಒಂದೂ ಕೇಸ್ ಇಲ್ಲವೆ? ಡಿ.ಕೆ.ಶಿವಕುಮಾರ್ ಈಗ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ಅವರು ಕೂಡ ಏಕಾಂಗಿಯಾಗಿದ್ದಾರೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಅಭ್ಯರ್ಥಿ ಅರುಣ್ ಮೇಲೆ ಕೇಸ್​ಗಳಿವೆ. ಆದ್ರೂ ಬಿಜೆಪಿ ಟಿಕೆಟ್ ನೀಡಿದೆ ಎಂಬ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

ನಾವು ಎದೆ ತಟ್ಟಿ ಹಿಂದೂ ಅಂತಾ ಹೇಳಿಕೊಳ್ತೇವೆ. ಆದರೆ ಜಾತಿ ರಾಜಕಾರಣ ಮಾಡುತ್ತಿರೋದು ಯಾರು? ಟಿಪ್ಪು ಜಯಂತಿ ಮಾಡಿದವರು ಯಾರು? ನೀವು ಜಾತಿವಾದಿಗಳು, ನಾವಲ್ಲ ಎಂದು ಡಿಕೆಶಿಗೆ ಬಿಜೆಪಿ ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ ಓರ್ವ ಮಹತ್ವಾಕಾಂಕ್ಷಿ ರಾಜಕಾರಣಿ, ವೈಯಕ್ತಿಕವಾಗಿ ಅವರ ಬಗ್ಗೆ ಗೌರವವಿದೆ. ಇದೀಗ ಡಿಕೆಶಿ ಜೆಡಿಎಸ್ ಸಹಾಯ ಪಡೆಯಲು ನಿರ್ಧರಿಸಿದ್ದಾರೆ. ಆ ಮೂಲಕ ಸಿಎಂ ಆಗಲು ಡಿ.ಕೆ.ಶಿವಕುಮಾರ್ ಯತ್ನಿಸುತ್ತಿದ್ದಾರೆ ಎಂದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us