AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಗಳ ಪುಣ್ಯ ಸ್ಮರಣೋತ್ಸವದಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿ ಊಟ

ಹಾವೇರಿ: ನಗರದ ಹುಕ್ಕೇರಿ ಮಠದಲ್ಲಿ ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಮತ್ತು ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಮಠದಲ್ಲಿ ಜಾತ್ರೆ ನಡೆಯುತ್ತದೆ. ಒಂದು ವಾರ ನಡೆಯೋ ಜಾತ್ರೆಯಲ್ಲಿ ರೊಟ್ಟಿಯದ್ದೇ ಹವಾ. ವಿವಿಧ ಪ್ರದೇಶಗಳಲ್ಲಿನ ಮಠದ ಭಕ್ತರು ಜಾತ್ರೆಗೆ ಅಂತಲೇ ವಾರಗಟ್ಟಲೇ ಖಡಕ್ ರೊಟ್ಟಿಗಳನ್ನ ತಯಾರಿಸಿ ಮಠಕ್ಕೆ ತಂದುಕೊಡ್ತಾರೆ. ಕೆಲವರು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ರೊಟ್ಟಿಗಳನ್ನ ತಂದುಕೊಟ್ರೆ, ಮತ್ತೆ ಕೆಲವರು ವಾಹನಗಳಲ್ಲಿ ರೊಟ್ಟಿಗಳನ್ನ ತಂದುಕೊಡ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಖಡಕ್ ರೊಟ್ಟಿಗಳನ್ನ ತಂದು ಕೊಟ್ರೆ, ಮಠದ […]

ಶ್ರೀಗಳ ಪುಣ್ಯ ಸ್ಮರಣೋತ್ಸವದಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿ ಊಟ
ಸಾಧು ಶ್ರೀನಾಥ್​
|

Updated on:Jan 03, 2020 | 1:12 PM

Share

ಹಾವೇರಿ: ನಗರದ ಹುಕ್ಕೇರಿ ಮಠದಲ್ಲಿ ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಮತ್ತು ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಮಠದಲ್ಲಿ ಜಾತ್ರೆ ನಡೆಯುತ್ತದೆ. ಒಂದು ವಾರ ನಡೆಯೋ ಜಾತ್ರೆಯಲ್ಲಿ ರೊಟ್ಟಿಯದ್ದೇ ಹವಾ. ವಿವಿಧ ಪ್ರದೇಶಗಳಲ್ಲಿನ ಮಠದ ಭಕ್ತರು ಜಾತ್ರೆಗೆ ಅಂತಲೇ ವಾರಗಟ್ಟಲೇ ಖಡಕ್ ರೊಟ್ಟಿಗಳನ್ನ ತಯಾರಿಸಿ ಮಠಕ್ಕೆ ತಂದುಕೊಡ್ತಾರೆ. ಕೆಲವರು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ರೊಟ್ಟಿಗಳನ್ನ ತಂದುಕೊಟ್ರೆ, ಮತ್ತೆ ಕೆಲವರು ವಾಹನಗಳಲ್ಲಿ ರೊಟ್ಟಿಗಳನ್ನ ತಂದುಕೊಡ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ಜನರು ಖಡಕ್ ರೊಟ್ಟಿಗಳನ್ನ ತಂದು ಕೊಟ್ರೆ, ಮಠದ ಭಕ್ತರು ಮಾದ್ಲಿ, ಬೂಂದಿ, ತರಕಾರಿ ಸೇರಿ ಬಗೆಬಗೆಯ ಪದಾರ್ಥಗಳನ್ನ ಶ್ರೀಮಠಕ್ಕೆ ತಂದು ಕೊಡ್ತಾರೆ. ಹೀಗೆ ಭಕ್ತರು ತಂದು ಕೊಟ್ಟ ಖಡಕ್ ರೊಟ್ಟಿ, ಚಟ್ನಿ, ತರಕಾರಿ, ಸಿಹಿ ಪದಾರ್ಥಗಳಿಂದ ಪ್ರತಿದಿನ ಜಾತ್ರೆಗೆ ಬರೋ ಭಕ್ತರಿಗೆ ಊಟ ನೀಡಲಾಗುತ್ತೆ. ಅದರಲ್ಲೂ ಎಲ್ಲಾ ಜಾತಿ, ಧರ್ಮದವರು ಯಾವುದೇ ಭೇದ ಭಾವವಿಲ್ಲದೆ ಒಂದೆಡೆ ಬೆರೆತು ರೊಟ್ಟಿ ಊಟ ಸವಿದು ಜಾತ್ರೆಯನ್ನು ಸಂಭ್ರಮದಿಂದ ಆಚರಿಸ್ತಾರೆ.

ಒಂದು ವಾರ ಹುಕ್ಕೇರಿ ಮಠದಲ್ಲಿ ಖಡಕ್ ರೊಟ್ಟಿಗಳ ಸದ್ದು ಕೇಳುತ್ತಿರುತ್ತೆ. ಭಕ್ತರು ತಂದುಕೊಟ್ಟ ರೊಟ್ಟಿ ಊಟವನ್ನ ಭಕ್ತರಿಗೆ ಉಣಬಡಿಸಿ ಜಾತ್ರೆಯ ಸಡಗರ ಹೆಚ್ಚಿಲಸಾಗುತ್ತೆ. ಎಲ್ಲಾ ಜಾತಿ ಧರ್ಮದ ಜನರು ಒಂದೆಡೆ ಬೆರೆತು ಜಾತ್ರೆಯನ್ನ ಆಚರಿಸೋದು ಇಲ್ಲಿನ ಮತ್ತೊಂದು ವಿಶೇಷ.

Published On - 1:11 pm, Fri, 3 January 20

ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್