AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರೀಗಳ ಪುಣ್ಯ ಸ್ಮರಣೋತ್ಸವದಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿ ಊಟ

ಹಾವೇರಿ: ನಗರದ ಹುಕ್ಕೇರಿ ಮಠದಲ್ಲಿ ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಮತ್ತು ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಮಠದಲ್ಲಿ ಜಾತ್ರೆ ನಡೆಯುತ್ತದೆ. ಒಂದು ವಾರ ನಡೆಯೋ ಜಾತ್ರೆಯಲ್ಲಿ ರೊಟ್ಟಿಯದ್ದೇ ಹವಾ. ವಿವಿಧ ಪ್ರದೇಶಗಳಲ್ಲಿನ ಮಠದ ಭಕ್ತರು ಜಾತ್ರೆಗೆ ಅಂತಲೇ ವಾರಗಟ್ಟಲೇ ಖಡಕ್ ರೊಟ್ಟಿಗಳನ್ನ ತಯಾರಿಸಿ ಮಠಕ್ಕೆ ತಂದುಕೊಡ್ತಾರೆ. ಕೆಲವರು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ರೊಟ್ಟಿಗಳನ್ನ ತಂದುಕೊಟ್ರೆ, ಮತ್ತೆ ಕೆಲವರು ವಾಹನಗಳಲ್ಲಿ ರೊಟ್ಟಿಗಳನ್ನ ತಂದುಕೊಡ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಜನರು ಖಡಕ್ ರೊಟ್ಟಿಗಳನ್ನ ತಂದು ಕೊಟ್ರೆ, ಮಠದ […]

ಶ್ರೀಗಳ ಪುಣ್ಯ ಸ್ಮರಣೋತ್ಸವದಲ್ಲಿ ರಾಶಿ ರಾಶಿ ಖಡಕ್ ಜೋಳದ ರೊಟ್ಟಿ ಊಟ
ಸಾಧು ಶ್ರೀನಾಥ್​
|

Updated on:Jan 03, 2020 | 1:12 PM

Share

ಹಾವೇರಿ: ನಗರದ ಹುಕ್ಕೇರಿ ಮಠದಲ್ಲಿ ಲಿಂಗೈಕ್ಯ ಶಿವಬಸವ ಮಹಾಶಿವಯೋಗಿಗಳು ಮತ್ತು ಲಿಂಗೈಕ್ಯ ಶಿವಲಿಂಗ ಮಹಾಶಿವಯೋಗಿ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ನಿಮಿತ್ಯ ಮಠದಲ್ಲಿ ಜಾತ್ರೆ ನಡೆಯುತ್ತದೆ. ಒಂದು ವಾರ ನಡೆಯೋ ಜಾತ್ರೆಯಲ್ಲಿ ರೊಟ್ಟಿಯದ್ದೇ ಹವಾ. ವಿವಿಧ ಪ್ರದೇಶಗಳಲ್ಲಿನ ಮಠದ ಭಕ್ತರು ಜಾತ್ರೆಗೆ ಅಂತಲೇ ವಾರಗಟ್ಟಲೇ ಖಡಕ್ ರೊಟ್ಟಿಗಳನ್ನ ತಯಾರಿಸಿ ಮಠಕ್ಕೆ ತಂದುಕೊಡ್ತಾರೆ. ಕೆಲವರು ಎತ್ತಿನ ಬಂಡಿಯಲ್ಲಿ ತುಂಬಿಕೊಂಡು ರೊಟ್ಟಿಗಳನ್ನ ತಂದುಕೊಟ್ರೆ, ಮತ್ತೆ ಕೆಲವರು ವಾಹನಗಳಲ್ಲಿ ರೊಟ್ಟಿಗಳನ್ನ ತಂದುಕೊಡ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿನ ಜನರು ಖಡಕ್ ರೊಟ್ಟಿಗಳನ್ನ ತಂದು ಕೊಟ್ರೆ, ಮಠದ ಭಕ್ತರು ಮಾದ್ಲಿ, ಬೂಂದಿ, ತರಕಾರಿ ಸೇರಿ ಬಗೆಬಗೆಯ ಪದಾರ್ಥಗಳನ್ನ ಶ್ರೀಮಠಕ್ಕೆ ತಂದು ಕೊಡ್ತಾರೆ. ಹೀಗೆ ಭಕ್ತರು ತಂದು ಕೊಟ್ಟ ಖಡಕ್ ರೊಟ್ಟಿ, ಚಟ್ನಿ, ತರಕಾರಿ, ಸಿಹಿ ಪದಾರ್ಥಗಳಿಂದ ಪ್ರತಿದಿನ ಜಾತ್ರೆಗೆ ಬರೋ ಭಕ್ತರಿಗೆ ಊಟ ನೀಡಲಾಗುತ್ತೆ. ಅದರಲ್ಲೂ ಎಲ್ಲಾ ಜಾತಿ, ಧರ್ಮದವರು ಯಾವುದೇ ಭೇದ ಭಾವವಿಲ್ಲದೆ ಒಂದೆಡೆ ಬೆರೆತು ರೊಟ್ಟಿ ಊಟ ಸವಿದು ಜಾತ್ರೆಯನ್ನು ಸಂಭ್ರಮದಿಂದ ಆಚರಿಸ್ತಾರೆ.

ಒಂದು ವಾರ ಹುಕ್ಕೇರಿ ಮಠದಲ್ಲಿ ಖಡಕ್ ರೊಟ್ಟಿಗಳ ಸದ್ದು ಕೇಳುತ್ತಿರುತ್ತೆ. ಭಕ್ತರು ತಂದುಕೊಟ್ಟ ರೊಟ್ಟಿ ಊಟವನ್ನ ಭಕ್ತರಿಗೆ ಉಣಬಡಿಸಿ ಜಾತ್ರೆಯ ಸಡಗರ ಹೆಚ್ಚಿಲಸಾಗುತ್ತೆ. ಎಲ್ಲಾ ಜಾತಿ ಧರ್ಮದ ಜನರು ಒಂದೆಡೆ ಬೆರೆತು ಜಾತ್ರೆಯನ್ನ ಆಚರಿಸೋದು ಇಲ್ಲಿನ ಮತ್ತೊಂದು ವಿಶೇಷ.

Published On - 1:11 pm, Fri, 3 January 20

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ