ಗಣೇಶ ಹಬ್ಬಕ್ಕೆ ರಾಣೇಬೆನ್ನೂರಿನಲ್ಲಿ ಆಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣ, ಹರಿದು ಬಂದ ಜನಸಾಗರ

ಹಾಡು , ಡ್ಯಾನ್ಸ್ , ದೀಪಲಂಕಾರ ಸೇರಿದಂತೆ ಡಿಜೆಗಳ ಮೂಲಕ ಗಣೇಶ ಹಬ್ಬವನ್ನು ಎಲ್ಲ ಕಡೆ ಆಚರಿಸುತ್ತಿದ್ದರೆ, ರಾಣೇಬೆನ್ನೂರಿನಲ್ಲಿ ಮಾತ್ರ ಸ್ವಲ್ಪ ಡಿಫರೆಂಟ್ ಆಗಿ ಗಣೇಶ ಹಬ್ಬ ಆಚರಣೆ ಮಾಡುತ್ತಿರುವ ಹಿನ್ನೆಲೆ ಹಾವೇರಿ ಅಷ್ಟೆ ಅಲ್ಲದೆ ಶಿವಮೊಗ್ಗ, ದಾವಣಗೆರೆ ಧಾರವಾಡ ಜಿಲ್ಲೆಗಳಿಂದ ಅನೇಕ ಜನರು ರಾಮ ಮಂದಿರ ನೋಡಲು ಬರುತ್ತಿದ್ದಾರೆ.

ಗಣೇಶ ಹಬ್ಬಕ್ಕೆ ರಾಣೇಬೆನ್ನೂರಿನಲ್ಲಿ ಆಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣ, ಹರಿದು ಬಂದ ಜನಸಾಗರ
ಗಣೇಶ ಹಬ್ಬಕ್ಕೆ ರಾಣೇಬೆನ್ನೂರಿನಲ್ಲಿ ಆಯೋಧ್ಯೆ ಶೈಲಿಯ ರಾಮ ಮಂದಿರ ನಿರ್ಮಾಣ
Edited By: ಸಾಧು ಶ್ರೀನಾಥ್​

Updated on: Sep 25, 2023 | 6:20 PM

ದೇಶದೆಲ್ಲೆಡೆ ಗಣೇಶ ಪ್ರತಿಷ್ಠಾಪಣೆ ಅಲಂಕಾರ ಜೋರಾಗಿ ನಡೆಯುತ್ತಿದೆ. ಆದರೆ ಹಾವೇರಿ ಜಿಲ್ಲೆಯಲ್ಲಿ ಗಣೇಶ ಹಬ್ಬದಂದು ರಾಮಮಂದಿರ ನೋಡೋಕೆ ಸಾವಿರಾರು ಜನರ ದಂಡೆ ಹರಿದು ಬಂದಿದೆ. ಗಣೇಶ ಹಬ್ಬದ ಪ್ರಯುಕ್ತ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ರಾಮ ಮಂದಿರ, ಶತಮಾನಗಳ ಇತಿಹಾಸ ಸಾರುವುದರ ಜೊತೆಗೆ, ರಾಮನ ಹಿನ್ನೆಲೆಯನ್ನ ತಿಳಿಯಬಹುದು, ರಾಮ ಮಂದಿರ ನೋಡಲು ಎರಡು ಕಣ್ಣು ಸಾಲದು ಎಂಬಂತಿತ್ತು.

ಎಸ್ ಥೇಟ್ ಅಯೋಧ್ಯೆಯಲ್ಲಿ ನಿರ್ಮಿಸುತ್ತಿರುವ ರಾಮ ಮಂದಿರ ಶೈಲಿಯ ಮಂದಿರ… ರಾಮನ ಇತಿಹಾಸ ಸಾರುತ್ತಿರುವ ಚಿತ್ರಗಳು… ರಾಮ ಜನ್ಮ ಭೂಮಿಗಾಗಿ ನಡೆದ ಹೋರಾಟದ ಸಂಪೂರ್ಣ ಚಿತ್ರಣ… ಇದನ್ನೆಲ್ಲಾ ನೋಡಲು ಹರಿದು ಬರುತ್ತಿರುವ ಜನಸಾಗರ.. ಎಸ್ ಈ ದೃಶ್ಯ ಕಂಡು ಬಂದಿದ್ದು ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ತಾಲೂಕು ಕ್ರಿಡಾಂಗಣದಲ್ಲಿ… ವಂದೆ ಮಾತರಂ ಸೇವಾ ಸಂಸ್ಥೆಯಿಂದ ಗಣೇಶ ಪ್ರತಿಷ್ಠಾಪನೆಯ ಜೊತೆಗೆ ಭವ್ಯವಾದ ರಾಮ ಮಂದಿರವನ್ನು ನಿರ್ಮಾಣ ಮಾಡಿದ್ದರು.

ಇದನ್ನೂ ಓದಿ: ಗಣೇಶನ ಹಬ್ಬದ ಸಂದರ್ಭದಲ್ಲಿ ಆ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಬೀಳುತ್ತದೆ!

ಹಿಂದೂಗಳ ಕನಸಿನ ರಾಮ ಮಂದಿರ ಯಾವ ರೀತಿ ನಿರ್ಮಾಣ ಮಾಡಲಾಗುತ್ತಿದೆ. ರಾಮ ಯಾರೂ ರಾಮ ಜನ್ಮ ಭೂಮಿಗಾಗಿ ಯಾವ ರೀತಿ ಹೋರಾಟ ಮಾಡಲಾಯಿತು ಎಂಬುವುದರ ಡಿಟೆಲ್ ಚಿತ್ರಣ ಹಾಗೂ ಲೇಖನಗಳ ಜೊತೆಗೆ ಜನ ಮನ ಸೆಳೆಯುವ ಸುಂದರ ದಿಪಾಲಂಕಾರದ ದೇವಸ್ಥಾನ ಇಲ್ಲಿ ನಿರ್ಮಾಣ ಮಾಡಲಾಗಿದೆ.

ಸಾರ್ವಜನಿಕರ ಮನ ಸೆಳೆಯುವುದರ ಜೊತೆಗೆ ಇತಿಹಾಸದ ತಿಳಿ ಹೇಳುವ ಈ ಕಲಾಕೃತಿಯನ್ನು, ಫೈಬರ್ ಹಾಗೂ ಕಬ್ಬಿಣದ ಮೂಲಕ ನಿರ್ಮಾಣ ಮಾಡಲಾಗಿದ್ದೂ, ಬರೊಬ್ಬರಿ ಒಂದು ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇಲ್ಲಿ ಬಂದ ಪ್ರತಿಯೊಬ್ಬರಿಗೂ ಆಯೋಧ್ಯೆ ರಾಮ ಮಂದಿರದ ಬಗ್ಗೆ ಇರುವ ಭಕ್ತಿ ಇಮ್ಮುಡಿ ಆಗಲು ನೋ ಡೌಟ್.

ಒಟ್ಟಾರೆಯಾಗಿ ಹಾಡು , ಡ್ಯಾನ್ಸ್ , ದಿಪಲಂಕಾರ ಸೇರಿದಂತೆ ಡಿಜೆಗಳ ಮೂಲಕ ಗಣೇಶ ಹಬ್ಬವನ್ನು ಎಲ್ಲ ಕಡೆ ಆಚರಿಸುತ್ತಿದ್ದರೆ, ರಾಣೇಬೆನ್ನೂರಿನಲ್ಲಿ ಮಾತ್ರ ಸ್ವಲ್ಪ ಡಿಫರೆಂಟ್ ಆಗಿ ಗಣೇಶ ಹಬ್ಬ ಆಚರಣೆ ಮಾಡುತ್ತಿರುವ ಹಿನ್ನೆಲೆ ಹಾವೇರಿ ಅಷ್ಟೆ ಅಲ್ಲದೆ ಶಿವಮೊಗ್ಗ, ದಾವಣಗೆರೆ ಧಾರವಾಡ ಜಿಲ್ಲೆಗಳಿಂದ ಅನೇಕ ಜನರು ರಾಮ ಮಂದಿರ ನೋಡಲು ಬರುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:16 pm, Mon, 25 September 23

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us