AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Tiger: ರಾಣೇಬೆನ್ನೂರು ನಗರದ ಮೈಸೂರು ಹುಲಿ ಖ್ಯಾತಿಯ ಹೋರಿ ಸಾವು, ಅಭಿಮಾನಿಗಳು ಕಣ್ಣೀರು

Ranebennur: ಹೋರಿ ಹಬ್ಬದ ಅಖಾಡದಲ್ಲಿ ತನ್ನದೇ ಆದ ಹೆಸರು ಮಾಡಿದ್ದ ಮೈಸೂರು ಹುಲಿ ಹೆಸರಿನ ಹೋರಿ, ಬೈಕ್ ಗಳು, ಹತ್ತು ಗಾಡ್ರೇಜ್ ಗಳು, ಐದು ತೊಲೆ ಬಂಗಾರ ಸೇರಿದಂತೆ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು.

Mysore Tiger: ರಾಣೇಬೆನ್ನೂರು ನಗರದ ಮೈಸೂರು ಹುಲಿ ಖ್ಯಾತಿಯ ಹೋರಿ ಸಾವು, ಅಭಿಮಾನಿಗಳು ಕಣ್ಣೀರು
ರಾಣೆಬೆನ್ನೂರು ನಗರದ ಮೈಸೂರು ಹುಲಿ ಖ್ಯಾತಿಯ ಹೋರಿ ಸಾವು
TV9 Web
| Edited By: |

Updated on: Jan 30, 2023 | 12:00 PM

Share

ಉತ್ತರ ಕರ್ನಾಟಕದಲ್ಲಿ ಹೋರಿ ಬೆದರಿಸುವ ಹಬ್ಬ ತುಂಬಾ ಪ್ರಸಿದ್ಧ. ಮೈಸೂರು ಹುಲಿ ಹೋರಿ (Mysuru Huli Ox) ಅಂದರೆ ಅಖಾಡದಲ್ಲಿನ ಅಭಿಮಾನಿಗಳಿಗೆ ಖುಷಿಯೋ ಖುಷಿ. ಆದರೆ ಮೈಸೂರು ಹುಲಿ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಹೋರಿಯ ಸಾವಿಗೆ (bullock Hori) ಅಭಿಮಾನಿಗಳು ಕಣ್ಣೀರಾಗಿದ್ದಾರೆ. ಅಂತ್ಯಕ್ರಿಯೆಯಲ್ಲಿ ಸಾವಿರಾರು ಅಭಿಮಾನಿಗಳು ಸೇರಿದ್ದರು. ಹೌದು ಇದು ಹಾವೇರಿ ಜಿಲ್ಲೆ ರಾಣೇಬೆನ್ನೂರು (Ranebennur) ನಗರದ ಕುರುಬಗೇರಿ ಓಣಿಯಲ್ಲಿ ಕಂಡುಬಂದ ದೃಶ್ಯಗಳಿವು. ಈ ಕುರಿತು ಒಂದು ವರದಿ. ಪ್ರಸಿದ್ಧ ಕುಸ್ತಿ ಪೈಲ್ವಾನ್ ಕುಟುಂಬದ ನಂಜಪ್ಪ ಗೂಳಣ್ಣನವರ ಹೆಸರಾಂತ ಕುಸ್ತಿ ಪಟುವಾಗಿದ್ದರು. ನಾಡಹಬ್ಬ ದಸಾರದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದು ಅವರು ಮೈಸೂರು ಹುಲಿ ಎಂದು ಹೆಸರು ಪಡೆದಿದ್ದರು. ನಂತರ ಪೈಲ್ವಾನ್ ನಂಜಪ್ಪರ ಹೆಸರಿನ ಮೂಲಕ ಹೋರಿಗೆ “ಮೈಸೂರು ಹುಲಿ” (Mysore Tiger) ಎಂದು ನಾಮಕರಣ ಮಾಡಲಾಗಿತ್ತು. ಮೈಸೂರು ಹುಲಿ ಹೆಸರಿನ ಹೋರಿ 13 ವರ್ಷಗಳ ಕಾಲ ಹೋರಿ ಹಬ್ಬದ ಅಖಾಡದಲ್ಲಿ ತನ್ನದೇ ಆದ ಹೆಸರು ಮಾಡಿ ಇಂದು ಉಸಿರು ನಿಲ್ಲಿಸಿದೆ. ಹೋರಿ ಹಬ್ಬದಲ್ಲಿ ಆಕಾಶದಗಲಕ್ಕೆ ಬಲೂನ್ ಗಳ ಪೀಪಿಯನ್ನು ಕಟ್ಟಿಕೊಂಡು ಓಡುತ್ತಿದ್ದರೆ ಅಭಿಮಾನಿಗಳ ಕೇಕೆ, ಸಿಳ್ಳೆ ಮೇರೆ ಮೀರುತ್ತಿತ್ತು. ಹೋರಿಯ ನಿಧನಕ್ಕೆ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ.

ಹಾವೇರಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯ ಹಾಗೂ ಬೇರೆ ಬೇರೆ ಕಡೆಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆಗಳಲ್ಲಿ ಮೈಸೂರು ಹುಲಿ ಹೋರಿಗೆ ಸಾವಿರಾರು ಜನ ಅಭಿಮಾನಿಗಳು ನೆರೆದಿರುತ್ತಿದ್ದರು. ಮೈಸೂರು ಹುಲಿಯು ಧೂಳೆಬ್ಬಿಸಿಕೊಂಡು ಓಡುತ್ತಿದ್ದ ಮಿಂಚಿನ ಓಟ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.

ಹೀಗೆ ಹೋರಿ ಹಬ್ಬದ ಅಖಾಡದಲ್ಲಿ ತನ್ನದೇ ಆದ ಹೆಸರು ಮಾಡಿದ್ದ ಮೈಸೂರು ಹುಲಿ ಹೆಸರಿನ ಹೋರಿ, ಬೈಕ್ ಗಳು, ಹತ್ತು ಗಾಡ್ರೇಜ್ ಗಳು, ಐದು ತೊಲೆ ಬಂಗಾರ ಸೇರಿದಂತೆ ಹಲವು ಬಹುಮಾನಗಳನ್ನು ತನ್ನದಾಗಿಸಿಕೊಂಡಿತ್ತು. ಈಗ ಹೋರಿ ಹಬ್ಬದ ಹುಲಿ ಮೈಸೂರು ಹುಲಿ ಉಸಿರು ನಿಲ್ಲಿಸಿರುವುದು ಹೋರಿ ಮಾಲೀಕರ ಕುಟುಂಬ ಸೇರಿದಂತೆ ಸಾವಿರಾರು ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಒಟ್ಟಿನಲ್ಲಿ ಕೊಬ್ಬರಿ ಹೋರಿ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಮೈಸೂರಿನ ಹುಲಿ ಅನಾರೋಗ್ಯದಿಂದ ಮೃತಪಟ್ಟಿದೆ. ನೂರಾರು ಅಭಿಮಾನಿಗಳು ಹೋರಿ ಅಂತಿಮ ದರ್ಶನ ಪಡೆದು, ಹಿಂದೂ ಸಂಪ್ರದಾಯದಂತೆ ಮೈಸೂರಿನ ಹುಲಿಯ ಅಂತ್ಯಕ್ರಿಯೆಯನ್ನ ನೆರವೇರಿಸಲಾಯಿತು.

ವರದಿ: ಸೂರಜ್ ಉತ್ತೂರೆ, ಟಿವಿ9, ಹಾವೇರಿ

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ