ಕರುನಾಡಿಗೆ ಕಾದಿದೆ ಮಹಾ ಗಂಡಾಂತರ, ಆರೋಗ್ಯ ಇಲಾಖೆ ಬಿಚ್ಚಿಡ್ತು ಮತ್ತೊಂದು ಸ್ಫೋಟಕ ಮಾಹಿತಿ!

ಬೆಂಗಳೂರು: ಕಿಲ್ಲರ್ ಕೊರೊನಾ ಬಗ್ಗೆ ಆರೋಗ್ಯ ಇಲಾಖೆ ಮತ್ತೊಂದು ಬೆಚ್ಚಿಬೀಳಿಸೋ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಹೊಂದಿರುವವರು ರಾಜ್ಯಕ್ಕೆ ಕಂಡಕವಾಗಲಿದ್ದಾರೆ. ಒಬ್ಬ ‘ಎ’ ಸಿಂಪ್ಟಮ್ ಕ್ಯಾರಿಯರ್​​​ನಿಂದ 20 ಮಂದಿಗೆ ಸೋಂಕು ಬರುತ್ತೆ. ಹೀಗಾಗಿ ‘ಎ’ ಸಿಂಪ್ಟಮ್ ಕ್ಯಾರಿಯರ್ ಸಮುದಾಯಕ್ಕೆ ಸೋಂಕು ಹರಡುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬೆಚ್ಚಿಬೀಳಿಸೋ ಮಾಹಿತಿಯನ್ನು ನೀಡಿದ್ದಾರೆ. ಲಾಕ್​ಡೌನ್ ಸಡಿಲಿಕೆಯಿಂದ ಜನ ರೋಡಿಗಿಳಿಯುತ್ತಿದ್ದಾರೆ. ರೋಡಿಗಿಳಿದವರಲ್ಲಿ ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಇದ್ರೆ ಅಪಾಯ ಫಿಕ್ಸ್. ಇವರಿಂದ ಕೊರೊನಾ 4ನೇ ಹಂತ ತಲುಪೋ […]

ಕರುನಾಡಿಗೆ ಕಾದಿದೆ ಮಹಾ ಗಂಡಾಂತರ, ಆರೋಗ್ಯ ಇಲಾಖೆ ಬಿಚ್ಚಿಡ್ತು ಮತ್ತೊಂದು ಸ್ಫೋಟಕ ಮಾಹಿತಿ!
ಸಾಧು ಶ್ರೀನಾಥ್​

Updated on: May 08, 2020 | 10:40 AM

ಬೆಂಗಳೂರು: ಕಿಲ್ಲರ್ ಕೊರೊನಾ ಬಗ್ಗೆ ಆರೋಗ್ಯ ಇಲಾಖೆ ಮತ್ತೊಂದು ಬೆಚ್ಚಿಬೀಳಿಸೋ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದೆ. ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಹೊಂದಿರುವವರು ರಾಜ್ಯಕ್ಕೆ ಕಂಡಕವಾಗಲಿದ್ದಾರೆ. ಒಬ್ಬ ‘ಎ’ ಸಿಂಪ್ಟಮ್ ಕ್ಯಾರಿಯರ್​​​ನಿಂದ 20 ಮಂದಿಗೆ ಸೋಂಕು ಬರುತ್ತೆ. ಹೀಗಾಗಿ ‘ಎ’ ಸಿಂಪ್ಟಮ್ ಕ್ಯಾರಿಯರ್ ಸಮುದಾಯಕ್ಕೆ ಸೋಂಕು ಹರಡುತ್ತಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಬೆಚ್ಚಿಬೀಳಿಸೋ ಮಾಹಿತಿಯನ್ನು ನೀಡಿದ್ದಾರೆ.

ಲಾಕ್​ಡೌನ್ ಸಡಿಲಿಕೆಯಿಂದ ಜನ ರೋಡಿಗಿಳಿಯುತ್ತಿದ್ದಾರೆ. ರೋಡಿಗಿಳಿದವರಲ್ಲಿ ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಇದ್ರೆ ಅಪಾಯ ಫಿಕ್ಸ್. ಇವರಿಂದ ಕೊರೊನಾ 4ನೇ ಹಂತ ತಲುಪೋ ಸಾಧ್ಯತೆ ಹೆಚ್ಚಾಗಿದೆ. ‘ಎ’ ಸಿಂಪ್ಟಮ್ ಕ್ಯಾರಿಯರ್​ಗೆ ರೋಗದ ಲಕ್ಷಣಗಳು ಇರುವುದಿಲ್ಲ. ಆದ್ರೆ ಡಯಾಬಿಟೀಸ್, ಕ್ಯಾನ್ಸರ್, ಕಿಡ್ನಿ ಫೇಲ್ಯೂರ್ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ವೈರಸ್ ಹಬ್ಬಿಸ್ತಾರೆ ಇಂಥಾ ರೋಗಿಗಳನ್ನ ‘ಬಿ’ ಕ್ಯಾಟಗರಿ ಎನ್ನಲಾಗ್ತಿದೆ.

ಮೊದಲಿಗೆ ‘ಬಿ’ ಕ್ಯಾಟಗರಿಯವರಿಗೆ ರೋಗದ ಗುಣಲಕ್ಷಣ ಕಾಣಿಸಿಕೊಳ್ಳುತ್ತೆ. ‘ಬಿ’ ಕ್ಯಾಟಗರಿಯವರನ್ನ ಟೆಸ್ಟ್ ಮಾಡಿದಾಗ ಪಾಸಿಟಿವ್ ಬರುತ್ತೆ. ‘ಬಿ’ ಕ್ಯಾಟಗರಿಯವರ ಮೂಲಕ ‘ಎ’ ಸಿಂಪ್ಟಮ್ ಕ್ಯಾರಿಯರ್​​ಗಳನ್ನ ಪತ್ತೆ ಹಚ್ಚಲಾಗುತ್ತದೆ. ಮೊದಲಿಗೆ ರೋಗ ಹರಡಿದವರೇ ‘ಎ’ ಸಿಂಪ್ಟಮ್ ಕ್ಯಾರಿಯರ್ಸ್ ಆದ್ರೆ ‘ಬಿ’ ಕ್ಯಾಟಗರಿಯವರಿಗೆ ಗೊತ್ತಾದ ಮೇಲೆ ‘ಎ’ ಕ್ಯಾಟಗರಿಯವರು ಪತ್ತೆಯಾಗ್ತಾರೆ.

ಭಾರಿ ಡೇಂಜರಸ್ ರೋಗ ಹರಡಿಸಿರೋರು ತಡವಾಗಿ ಪತ್ತೆಯಾಗ್ತಿದ್ದಾರೆ. ರೋಗ ಅಂಟಿಸಿಕೊಂಡವರು, ಹರಡಿದವರಿಗಿಂತ ಬೇಗ ಪತ್ತೆಯಾಗ್ತಿದ್ದಾರೆ. ವೈರಸ್ ಸಮುದಾಯಕ್ಕೆ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ‘ಎ’ ಮತ್ತು ‘ಬಿ’ ಸಿಂಪ್ಟಮ್ ಕ್ಯಾರಿಯರ್ಸ್ ಕುರಿತು ಎಚ್ಚರವಹಿಸಿ. ರಸ್ತೆಗಲಲ್ಲಿ ಓಡಾಡ ಬೇಡಿ. ಸಾಮಾಜಿಕ ಅಂತರ ಕಾಪಡಿಕೊಳ್ಳಿ ಎಂದು ತಜ್ಞ ವಾರ್ನಿಂಗ್ ನೀಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us