ಕಿಡಿಗೇಡಿಗಳ ಕ್ರೌರ್ಯಕ್ಕೆ ಮನೆ ಧ್ವಂಸ: ಬೀದಿಗೆ ಬಿದ್ದ ಮಹಿಳೆ​, ಆರೋಪಿಗಳು ಪರಾರಿ

ಕಳೆದ 45 ವರ್ಷಗಳಿಂದ  ಮಲ್ಲೇಶ್ವರಂ 18 ನೇ ಕ್ರಾಸ್​ನಲ್ಲಿರುವ ಮನೆಯಲ್ಲಿ ಕುಟುಂಬ ಸಮೇತ ಜಯಲಕ್ಷ್ಮಿ ಎಂಬುವವರು ವಾಸವಾಗಿದ್ದರು. ಆದರೆ ಸೋಮವಾರ ನಸುಕಿನ ಜಾವ ನಾಲ್ಕು ಗಂಟೆಗೆ ಜಯಲಕ್ಷ್ಮಿ ಮನೆಗೆ ನುಗ್ಗಿದ್ದ 40 ರಿಂದ 45 ಜನರ ರೌಡಿಗಳ ಗ್ಯಾಂಗ್​ ಇಡೀ ಮನೆಯನ್ನು ಧ್ವಂಸ ಮಾಡಿರುವಂತಹ ಘಟನೆ ನಡೆದಿದೆ.

ಕಿಡಿಗೇಡಿಗಳ ಕ್ರೌರ್ಯಕ್ಕೆ ಮನೆ ಧ್ವಂಸ: ಬೀದಿಗೆ ಬಿದ್ದ ಮಹಿಳೆ​, ಆರೋಪಿಗಳು ಪರಾರಿ
ಕಿಡಿಗೇಡಿಗಳ ಕ್ರೌರ್ಯಕ್ಕೆ ಮನೆ ಧ್ವಂಸ: ಬೀದಿಗೆ ಬಿದ್ದ ಮಹಿಳೆ​, ಆರೋಪಿಗಳು ಪರಾರಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Oct 09, 2024 | 9:40 PM

ಬೆಂಗಳೂರು, ಅಕ್ಟೋಬರ್​ 09: ಆ ಮಹಿಳೆ (Woman) ಸುಖ ನಿದ್ದೆಯಲ್ಲಿದ್ದರು. ಮುಂಜಾನೆಯ ಸುಮಧುರ ಕನಸುಗಳು ಕಚಗುಳಿ ಇಡುವ ಸಮಯ ಅದು. ಇದೇ ಸಮಯದಲ್ಲಿ ದೊಡ್ಡ ಗ್ಯಾಂಗ್​ವೊಂದು ಏಕಾಏಕಿ​ ಆ ಮನೆಗೆ ನುಗ್ಗಿದೆ. ಕೆಲವೇ ಕೆಲ ಸೆಕಂಡ್​ಗಳಲ್ಲಿ ಇಡೀ ಮನೆನೇ ಧ್ವಂಸಗೊಂಡಿದೆ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕುಟುಂಬದ ಬದುಕು ಬೀದಿಗೆ ಬಿದ್ದರೆ, ಕಿಡಿಗೇಡಿಗಳ ಕರಾಳತೆಗೆ ನಡುಗಿದವರ ಕಥೆ ಕಣ್ಣೀರು ತರಿಸುವಂತ್ತಿದೆ.

ಕಿಡಿಗೇಡಿಗಳ ಕ್ರೌರ್ಯಕ್ಕೆ ಮನೆ ಧ್ವಂಸ: ಬೀದಿಗೆ ಬಿದ್ದ ಮಹಿಳೆ 

ಕಳೆದ 45 ವರ್ಷಗಳಿಂದ  ಮಲ್ಲೇಶ್ವರಂ 18 ನೇ ಕ್ರಾಸ್​ನಲ್ಲಿರುವ ಮನೆಯಲ್ಲಿ ಕುಟುಂಬ ಸಮೇತ ಜಯಲಕ್ಷ್ಮಿ ಎಂಬುವವರು ವಾಸವಾಗಿದ್ದರು. ಆದರೆ ಸೋಮವಾರ ನಸುಕಿನ ಜಾವ ನಾಲ್ಕು ಗಂಟೆಗೆ ಜಯಲಕ್ಷ್ಮಿ ಮನೆಗೆ ನುಗ್ಗಿದ್ದ 40 ರಿಂದ 45 ಜನರ ರೌಡಿಗಳ ಗ್ಯಾಂಗ್​ ಇಡೀ ಮನೆಯನ್ನು ಧ್ವಂಸ ಮಾಡಿಬಿಟ್ಟಿದೆ. ಮಹಿಳೆ, ಮಕ್ಕಳು ಅಂತಲೂ ನೋಡದೇ ಎಲ್ಲರನ್ನ ಮನೆಯಿಂದ ಎಳೆದು ಹೊರ ಹಾಕಿ ಒಂದೀಡಿ ಮನೆಯನ್ನೇ ಪೀಸ್ ಪೀಸ್ ಮಾಡಿದ್ದಾರೆಂದು ಜಯಲಕ್ಷ್ಮಿ ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಬೈಕ್ ವ್ಹೀಲಿಂಗ್ ತಡೆದಿದ್ದಕ್ಕೆ ಕಾನ್ಸ್​ಟೇಬಲ್ ಮೇಲೆ ಪುಂಡರಿಂದ ಹಲ್ಲೆ: ರೌಡಿಶೀಟರ್ ಸೇರಿ ಮೂವರು ವಶಕ್ಕೆ

ಅಸಲಿಗೆ ಈ ಜಯಲಕ್ಷ್ಮಿಯ ಗಂಡ, ಗಣೇಶ್ ಮಹಲ್ ಅವರು ಹೋಟೆಲ್​​ನಲ್ಲಿ ಕೆಲಸ ಮಾಡುತ್ತಿದ್ದರು. ಈ ಗಣೇಶ್ ಮಹಲ್ ಮಾಲೀಕ ಜಯಲಕ್ಷ್ಮಿ ಅವರಿಗೆ ಈ ಜಾಗ ಕೊಟ್ಟಿದ್ರಂತೆ. ಜಯಲಕ್ಷ್ಮಿ ಮತ್ತು ಆಕೆ ಗಂಡ ಹೇಗೋ ಕಷ್ಟ ಬಿದ್ದು ಈ ಜಾಗದಲ್ಲಿ ಒಂದು ಸೂರು ಮಾಡ್ಕೊಂಡಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಜಾಗ ಕೊಟ್ಟಿದ್ದ ಹೋಟೆಲ್ ಮಾಲೀಕ ತೀರಿಕೊಂಡಿದ್ದ. ಮತ್ತೊಂದೆಡೆ ಜಯಲಕ್ಷ್ಮಿ ಗಂಡ ಕೂಡ ಸಾವನ್ನಪ್ಪಿದ್ದರು. ಈ ವಿಚಾರವನ್ನ ಅರಿತಿದ್ದ ಜೈ ಕಿಶನ್, ಪ್ರತಾಪ್, ಚಿನ್ನಬಾಬು ಗ್ಯಾಂಗ್​ ಜಾಗದ ಮೇಲೆ ಕಣ್ಣಿಟ್ಟಿದ್ರಂತೆ. 25 ಲಕ್ಷ ರೂ. ಕೊಡ್ತೀವಿ ಜಾಗ ಬಿಟ್ಟುಕೊಡಿ ಅಂತ ರೌಡಿಗಳು ಹೇಳಿದರೂ ಜಯಲಕ್ಷ್ಮಿ ರೌಡಿಗಳ ಬಲೆಗೆ ಬಿದ್ದಿದ್ದರಲಿಲ್ಲ. ಕೊನೆಗೆ ಬೆದರಿಕೆ ಕೂಡ ಹಾಕಿದ್ದರು ಅಂತ ಮಹಿಳೆ ನೀಡಿದ ದೂರಿನಡಿ ದಾಖಲಾಗಿದ್ದ ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.

ಇದನ್ನೂ ಓದಿ: ಲವ್ವಿಡವ್ವಿ ಇಟ್ಟುಕೊಂಡಿದ್ದ ಮಹಿಳೆಯಿಂದಲೇ ಕೊಲೆಯಾದ ಯುವಕ: ಪ್ರಕರಣ ಬೇಧಿಸಿದ್ದೇ ರೋಚಕ

ಮನೆ ಧ್ವಂಸ ಮಾಡಿದ್ದು ಮಾತ್ರವಲ್ಲ, ರೌಡಿ ಗ್ಯಾಂಗ್​ ಮನೆಯಲ್ಲಿದ್ದ ಚಿನ್ನದ ಸರ, ಓಲೆ, ಉಂಗುರ ಎಲ್ಲಾ  ಚಿನ್ನವನ್ನ ಕೂಡ ದೋಚಿಕೊಂಡು ಹೋಗಿರುವ ವಿಚಾರ ಕೂಡ ಎಫ್​ಐಆರ್​ನಲ್ಲಿದೆ. ಘಟನೆ ಸಂಬಂಧ ಮಲ್ಲೇಶ್ವಂರ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:39 pm, Wed, 9 October 24

ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೊಲ್ಕತ್ತಾದಲ್ಲಿ ಜನರ ಮನಸೆಳೆಯುತ್ತಿದೆ ಮಳೆಹನಿ ಥೀಮ್​ನ ದುರ್ಗಾ ಪೆಂಡಾಲ್
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಕೆಡಿಪಿ ಸಭೆ ನಡೆಸುವ ಸಚಿವರು ತಮ್ಮ ಜಿಲ್ಲೆಗಳ ಹೋಮ್​ವರ್ಕ್ ಮಾಡಿರುತ್ತಾರೆಯೇ?
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಮಹದೇವಪ್ಪ ಮನೆಗೆ ಜಾರಕಿಹೊಳಿ ಊಟಕ್ಕೆ ಹೋಗೋದು ತಪ್ಪಲ್ಲ: ಜಮೀರ್ ಅಹ್ಮದ್
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ಏನೇನೋ ಬೊಗಳುತ್ತಾನೆ: ಆಗಾಗ ಕೆಣಕಿದ ಜಗದೀಶ್​ಗೆ ಹಂಸಾ ಕೊಟ್ಟ ಮರ್ಯಾದೆ ಇಷ್ಟೇ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ರಾಜ್ಯಪಾಲ ಮತ್ತು ಸಿಎಂ ನಡುವಿನ ಮಾತುಕತೆ ಬೇರೆ ರಾಜಕಾರಣಿಗಳಿಗೆ ಮಾದರಿ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಇಂದಿನಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದೆ ಫೆಸ್ಟಿವಲ್ ಆಫ್ ಇಂಡಿಯಾ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಹಿಂದಿನ ಸತ್ಯಾಂಶ ಮುಚ್ಚಿಟ್ಟ ಶಿವಕುಮಾರ್
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ದರ್ಶನ್-ಪವಿತ್ರಾ ಜಾಮೀನು ಅರ್ಜಿ ವಿಚಾರಣೆ LIVE
ಶಿವಕುಮಾರ್​ಗೆ ಮುನ್ನ ಸಿಎಂ ಭೇಟಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಶಿವಕುಮಾರ್​ಗೆ ಮುನ್ನ ಸಿಎಂ ಭೇಟಿಯಾಗಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು
ಜೈಲಿಗೆ ಬಂದ ಡಾಕ್ಟರ್​ಗಳಲ್ಲಿ ಒಬ್ಬರೂ ಪರಿಣಿತರಲ್ಲ, ಎಲ್ಲರೂ ಜ್ಯೂನಿಯರ್​ಗಳು