ಅಕ್ರಮ ಒತ್ತುವರಿ: ಜೆಸಿಬಿ ಮೇಲೆ ನಿಂತು ತೆರವಿಗೆ ಅಡ್ಡಿಪಡಿಸಿದ ಡಾ.ಸುದರ್ಶನ್

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಡಾ.ಸುದರ್ಶನ್ ಅಡ್ಡಿ ಉಂಟುಮಾಡಿದ್ದಾರೆ. ರೈಟ್ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತ ಡಾ.ಸುದರ್ಶನ್ ಅವರು ಜೆಸಿಬಿ ಮೇಲೆ ಹತ್ತಿನಿಂತು ತೆರವು ಕಾರ್ಯಾಚರಣೆ ವಿರೋಧಿಸಿದ್ದಾರೆ. ಡಾ.ಸುದರ್ಶನ್​ಗೆ ಸೇರಿದ ವಿವೇಕಾರುಣಾ ಫೌಂಡೇಷನ್​ನ ಗೊರುಕನ ಪರಿಸರ ಶಿಕ್ಷಣ, ಆಯುರ್ವೇದಿಕ್ ಶಿಕ್ಷಣ ಕೇಂದ್ರವು ಅಕ್ರಮವಾಗಿ 4 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ರೇಷ್ಮೆ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಡಾ.ಸುದರ್ಶನ್ ಕಾರ್ಯಾಚರಣೆಗೆ […]

ಅಕ್ರಮ ಒತ್ತುವರಿ: ಜೆಸಿಬಿ ಮೇಲೆ ನಿಂತು ತೆರವಿಗೆ ಅಡ್ಡಿಪಡಿಸಿದ ಡಾ.ಸುದರ್ಶನ್
ಸಾಧು ಶ್ರೀನಾಥ್​

Updated on: Nov 24, 2019 | 4:01 PM

ಚಾಮರಾಜನಗರ: ಯಳಂದೂರು ತಾಲೂಕಿನ ಬಿಳಿಗಿರಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಡಾ.ಸುದರ್ಶನ್ ಅಡ್ಡಿ ಉಂಟುಮಾಡಿದ್ದಾರೆ. ರೈಟ್ ಲೈವ್ಲಿಹುಡ್ ಪ್ರಶಸ್ತಿ ಪುರಸ್ಕೃತ ಡಾ.ಸುದರ್ಶನ್ ಅವರು ಜೆಸಿಬಿ ಮೇಲೆ ಹತ್ತಿನಿಂತು ತೆರವು ಕಾರ್ಯಾಚರಣೆ ವಿರೋಧಿಸಿದ್ದಾರೆ.

ಡಾ.ಸುದರ್ಶನ್​ಗೆ ಸೇರಿದ ವಿವೇಕಾರುಣಾ ಫೌಂಡೇಷನ್​ನ ಗೊರುಕನ ಪರಿಸರ ಶಿಕ್ಷಣ, ಆಯುರ್ವೇದಿಕ್ ಶಿಕ್ಷಣ ಕೇಂದ್ರವು ಅಕ್ರಮವಾಗಿ 4 ಎಕರೆ ಜಮೀನು ಒತ್ತುವರಿ ಮಾಡಿಕೊಂಡಿದೆ ಎನ್ನಲಾಗಿದೆ. ಹೀಗಾಗಿ ರೇಷ್ಮೆ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಡಾ.ಸುದರ್ಶನ್ ಕಾರ್ಯಾಚರಣೆಗೆ ಅಡ್ಡಿಯುಂಟು ಮಾಡಿದ್ದಾರೆ. ಕೆಲಕಾಲ ಅಧಿಕಾರಿಗಳು ಮತ್ತು ಡಾ.ಸುದರ್ಶನ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಪೊಲೀಸ್ ಬಂದೋಬಸ್ತ್​ನೊಂದಿಗೆ ಅಧಿಕಾರಿಗಳು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us