ನಾಲಗೆಗೆ ಆದ ಗಾಯ ಮಾಯುತ್ತೆ ನಾಲಗೆಯಿಂದಾದ ಗಾಯ ಮಾಯಲಾರದು: ಡಾ ಸಿಎನ್ ಮಂಜುನಾಥ್
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಬಗ್ಗೆ ಡಾ ಮಂಜುನಾಥ್ ಅವರಲ್ಲಿರುವಷ್ಟು ಮಾಹಿತಿ ಪ್ರಾಯಶಃ ಕುಮಾರಸ್ವಾಮಿಯಲ್ಲೂ ಇರಲಿಕ್ಕಿಲ್ಲ. ಅವರು ಐಸಿಯುನಿಂದ ಎದ್ದು ಪ್ರಚಾರಕ್ಕೆ ಬಂದ ವಿಷಯದಿಂದ ಶುರುಮಾಡಿ ಭಾರತದ ಪ್ರಧಾನಿಯಾಗಿ ಅವರು ಮಾಡಿದ ಸಾಧನೆಗಳನ್ನು ಒಂದೇ ಉಸುರಿನಲ್ಲಿ ಮಂಜುನಾಥ್ ಹೇಳುತ್ತಾರೆ.
ರಾಮನಗರ: ಬೆಂಗಳೂರು ಗ್ರಾಮಾಂತರ ಸಂಸದ ಡಾ ಸಿಎನ್ ಮಂಜುನಾಥ್ ಈಗಲೂ ರಾಜಕಾರಣಿಯಂತೆ ಮಾತಾಡುವುದಿಲ್ಲ! ನಾಲಗೆಗೆ ಆದ ಗಾಯ ಮಾಯಬಹುದೇ ಹೊರತು ನಾಲಗೆಯಿಂದ ಆದ ಗಾಯ ಮಾಯಲಾರದು, ನಾಲಗೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಆದನ್ನು ಹರಿಬಿಡುವುದರಿಂದ ಯಾರಿಗೂ ಪ್ರಯೋಜನವಿಲ್ಲ, ರಾಜಕಾರಣ ಆರೋಗ್ಯಕರವಾಗಿರಬೇಕಾದರೆ ಮಾತು ಮೃದುವಾಗಿರಬೇಕು ಮತ್ತು ಹಿತವಾಗಿರಬೇಕು ಎಂದು ಮಂಜುನಾಥ್ ಹೇಳುತ್ತಾರೆ. ಅವರು ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಹೇಳಿದರೆನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರು: ಬಿಜೆಪಿ ಕಚೇರಿಗೆ ಇಂದು ಅನಿರೀಕ್ಷಿತ ಭೇಟಿ ನೀಡಿದಾಗಲೂ ಡಾ ಸಿಎನ್ ಮಂಜುನಾಥ್ ಟೈ ಧರಿಸಿದ್ದರು!
Loading...
Unable to load recommendations.
Follow Us