
ಬೆಂಗಳೂರು, ಜೂನ್ 15: ಪಶ್ಚಿಮ ಏಷ್ಯಾದಲ್ಲಿ ಪರಮಾಣು ಯುದ್ಧ ಆರಂಭವಾಗಿದೆ. ಇಸ್ರೇಲ್ ಮತ್ತು ಇರಾನ್ (Israel-Iran tensions) ನಡುವೆ ಸಂಘರ್ಷ ಏರ್ಪಟ್ಟಿದ್ದು, ದಾಳಿ ಪ್ರತಿದಾಳಿಗಳು ನಡುಯುತ್ತಿವೆ. ಈ ಯುದ್ಧದಿಂದಾಗಿ ಕರ್ನಾಟಕದ (Karnataka) 19 ಜನರನ್ನೊಳಗೊಂಡ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಿಯೋಗ ಇಸ್ರೇಲ್ನಲ್ಲಿ ಸಿಲುಕಿದೆ. ಇಸ್ರೇಲ್ನಲ್ಲೇ ಉಳಿದಿರುವ ಬಗ್ಗೆ ಸಿಎಂ, ಡಿಸಿಎಂಗೆ ಮಾಹಿತಿ ನೀಡಲಾಗಿದ್ದು, ನಿಯೋಗದ ಸದಸ್ಯರ ಜತೆ ಗೃಹ ಸಚಿವ ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಿಯೋಗ ಇತ್ತೀಚೆಗೆ ಬಿ ಪ್ಯಾಕ್ ಸಂಸ್ಥೆಯ ಮೂಲಕ ಅಧ್ಯಯನಕ್ಕಾಗಿ ಇಸ್ರೇಲ್ಗೆ ತೆರಳಿತ್ತು. ನಿನ್ನೆಯೇ ನಿಯೋಗ ವಾಪಸ್ ಆಗಬೇಕಿತ್ತು. ಆದರೆ ವಿಮಾನ ರದ್ದಾದ ಕಾರಣ ಇಸ್ರೇಲ್ನಲ್ಲೇ ಉಳಿದುಕೊಳ್ಳುವಂತಾಗಿದೆ.
ಇನ್ನು ಈ ಬಗ್ಗೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದಿದ್ದಾರೆ. ಇದು ಕೇಂದ್ರ ಸರ್ಕಾರಕ್ಕೆ ಬರುತ್ತೆ, ನನಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಇಸ್ರೇಲ್-ಇರಾನ್ ಉದ್ವಿಗ್ನತೆ; ಪ್ರಧಾನಿ ಮೋದಿಗೆ ಕರೆ ಮಾಡಿದ ಪಿಎಂ ಬೆಂಜಮಿನ್ ನೆತನ್ಯಾಹು
ಇರಾಕ್ನ ಪರಮಾಣು ಸ್ಥಾವರಗಳನ್ನ ಟಾರ್ಗೆಟ್ ಮಾಡಿದ್ದ ಇಸ್ರೇಲ್, ಮೊನ್ನೆ ಕ್ಷಿಪಣಿ ದಾಳಿ ಮಾಡಿತ್ತು. ಈ ದಾಳಿಯಲ್ಲಿ 78 ನಾಗರಿಕರು ಸೇರಿದಂತೆ, ಮೂವರು ಸೇನಾಧಿಕಾರಿಗಳು, ಆರು ವಿಜ್ಞಾನಿಗಳು ಮೃತಪಟ್ಟಿದ್ದರು. ಇದಾದ ನಂತರ ಪ್ರತೀಕಾರದ ತೀರಿಸಿಕೊಳ್ಳೋದಾಗಿ ಕೆಂಪು ಬಾವುಟ ಹಾಕಿಸಿದ್ದ ಇರಾನ್ ಕೂಡ ಇಸ್ರೇಲ್ ಮೇಲೆ ದಾಳಿ ಮಾಡಿತ್ತು.
ಇನ್ನು ಇಸ್ರೇಲ್ ಮೇಲಿನ ದಾಳಿಗೆ ಸಬ್ಮರೀನ್ ಬಳಸಿದ ಇರಾನ್, 100ಕ್ಕೂ ಹೆಚ್ಚು ಬ್ಯಾಲಿಸ್ಟಿಕ್ ಮಿಸೈಲ್ಗಳಿಂದ ಗುರಿ ಇಟ್ಟು ಹೊಡೆದಿದೆ. ಇದೇ ಮೊದಲ ಬಾರಿಗೆ ಇರಾನ್ ಸಬ್ಮರೀನ್ ಬಳಸಿ ಅಟ್ಯಾಕ್ ಮಾಡಿದೆ. ಇರಾನ್ ಕೊಟ್ಟ ಎದುರೇಟಿಗೆ ಇಸ್ರೇಲ್ ಬೆಚ್ಚಿಬಿದ್ದಿದೆ. ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಹಾಗೂ ಜೆರುಸಲೆಮ್ ಸಂಪೂರ್ಣ ಜರ್ಜರಿತವಾಗಿದೆ. ಐರನ್ ಡೋಮ್, ಡೇವಿಡ್ಸ್ ಸ್ಲಿಂಗ್ ವಾಯು ನೆಲೆಗಳು ಧೂಳೀಪಟ ಆಗಿದ್ದರೆ, ಬೃಹತ್ ಕಟ್ಟಡಗಳು ಛಿದ್ರ ಛಿದ್ರವಾಗಿವೆ. ಹಲವು ನಾಗರಿಕರು ಸಾವಿಗೀಡಾಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.