ತಾಯಿ ಕಾರ್ಡ್‌ಗೆ ಲಂಚ ನೀಡುವಂತೆ ಆವಾಜ್.. ಕಿರಿಯ ಆರೋಗ್ಯ ಸಹಾಯಕಿ ಅಮಾನತು

ಸಾವಿತ್ರಿ ಲಂಚಕ್ಕೆ ಆವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡಿಹೆಚ್‌ಒ ರಾಮಕೃಷ್ಣ, ಸಾವಿತ್ರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ತಾಯಿ ಕಾರ್ಡ್‌ಗೆ ಲಂಚ ನೀಡುವಂತೆ ಆವಾಜ್.. ಕಿರಿಯ ಆರೋಗ್ಯ ಸಹಾಯಕಿ ಅಮಾನತು
ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿ
ಆಯೇಷಾ ಬಾನು

Updated on: Dec 28, 2020 | 8:27 AM

ರಾಯಚೂರು: ತಾಯಿ ಕಾರ್ಡ್‌ ಮಾಡಿಕೊಡಲು ಲಂಚ ನೀಡುವಂತೆ ಆವಾಜ್ ಹಾಕಿದ ಹಿನ್ನೆಲೆಯಲ್ಲಿ ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿಯನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಡಿಹೆಚ್‌ಒ ರಾಮಕೃಷ್ಣ ಆದೇಶ ಹೊರಡಿಸಿದ್ದಾರೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಮಲ್ಲದಗುಡ್ಡ ಆರೋಗ್ಯ ಉಪ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಸಾವಿತ್ರಿ, ತಾಯಿ ಕಾರ್ಡ್​ಗೆ ಹಣ ನೀಡುವಂತೆ ಮಹಿಳೆಯೊಬ್ಬರ ಸಂಬಂಧಿಕರಿಗೆ ಆವಾಜ್ ಹಾಕಿದ್ದಾರೆ. ಜೋರು ಧ್ವನಿಯಲ್ಲಿ 200 ರೂ ನೀಡುವಂತೆ ಡಿಮ್ಯಾಂಡ್‌‌ ಮಾಡಿದ್ದಾರೆ.

ಅಲ್ಲದೆ ಆಸ್ಪತ್ರೆಗೆ ಬರುವವರಿಗೆ ಇದೇ ರೀತಿ ಹಣಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದರಂತೆ. ಇನ್ನು ಸಾವಿತ್ರಿ ಲಂಚಕ್ಕೆ ಆವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಡಿಹೆಚ್‌ಒ ರಾಮಕೃಷ್ಣ, ಸಾವಿತ್ರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಬಾಲಿವುಡ್ ಡ್ರಗ್ಸ್ ದಂಧೆ ಪ್ರಕರಣ: ಇಬ್ಬರು ಎನ್​ಸಿಬಿ ಅಧಿಕಾರಿಗಳು ಅಮಾನತು..

Published On - 8:10 am, Mon, 28 December 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us