AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯಲು ನಾಡಿನಲ್ಲಿದೆ 14,958 ಹೆಕ್ಟರ್ ವಿಶಾಲದ ಹಸಿರು ಲೋಕ!

ಕಲಬುರಗಿ: ಕಲಬುರಗಿ ಅಂದಾಕ್ಷಣ ತಟ್ಟಣೆ ನೆನಪಾಗುವುದು ಬಿಸಿಲನಾಡು ಅಂತ. ಬಹುತೇಕರಿಗೆ ಕಲಬುರಗಿ ಅಂದ್ರೆ ಇಂದಿಗೂ ಕೂಡಾ ಬಿಸಿಲೆ ಮೊದಲು ಕಾಣಿಸುತ್ತದೆ. ಹೀಗಾಗಿ ನೀರು ನೆರಳಲ್ಲಿದ ಊರು ಅಂತ ಹೆಚ್ಚಿನ ಜನರು ಕಲಬುರಗಿಗೆ ಬರಲು ಹಿಂದೇಟು ಹಾಕ್ತಾರೆ. ಅದು ನಿಜಾ ಕೂಡಾ ಹೌದು. ಆದ್ರೆ, ಇದೇ ಜಿಲ್ಲೆಯಲ್ಲಿ ಹಸಿರು ಸಿರಿ ಕೂಡಾ ಇದೆ. ಮಳೆಗಾಲದಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುದನ್ನು ನೋಡಲು ಎರಡೂ ಕಣ್ಣುಗಳು ಸಾಲವು ಅನ್ನೋದು ಬಹುತೇಕರಿಗೆ ಗೊತ್ತಿಲ್ಲಾ. ಬಯಲು ಬಿಸಿಲ ನಾಡಲ್ಲಿದೆ ಹಸಿರು ಅರಣ್ಯ ಹೌದು ಕಲಬುರಗಿ […]

ಬಯಲು ನಾಡಿನಲ್ಲಿದೆ 14,958 ಹೆಕ್ಟರ್ ವಿಶಾಲದ ಹಸಿರು ಲೋಕ!
ಆಯೇಷಾ ಬಾನು
|

Updated on:Jun 18, 2020 | 4:12 PM

Share

ಕಲಬುರಗಿ: ಕಲಬುರಗಿ ಅಂದಾಕ್ಷಣ ತಟ್ಟಣೆ ನೆನಪಾಗುವುದು ಬಿಸಿಲನಾಡು ಅಂತ. ಬಹುತೇಕರಿಗೆ ಕಲಬುರಗಿ ಅಂದ್ರೆ ಇಂದಿಗೂ ಕೂಡಾ ಬಿಸಿಲೆ ಮೊದಲು ಕಾಣಿಸುತ್ತದೆ. ಹೀಗಾಗಿ ನೀರು ನೆರಳಲ್ಲಿದ ಊರು ಅಂತ ಹೆಚ್ಚಿನ ಜನರು ಕಲಬುರಗಿಗೆ ಬರಲು ಹಿಂದೇಟು ಹಾಕ್ತಾರೆ. ಅದು ನಿಜಾ ಕೂಡಾ ಹೌದು. ಆದ್ರೆ, ಇದೇ ಜಿಲ್ಲೆಯಲ್ಲಿ ಹಸಿರು ಸಿರಿ ಕೂಡಾ ಇದೆ. ಮಳೆಗಾಲದಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುದನ್ನು ನೋಡಲು ಎರಡೂ ಕಣ್ಣುಗಳು ಸಾಲವು ಅನ್ನೋದು ಬಹುತೇಕರಿಗೆ ಗೊತ್ತಿಲ್ಲಾ.

ಬಯಲು ಬಿಸಿಲ ನಾಡಲ್ಲಿದೆ ಹಸಿರು ಅರಣ್ಯ ಹೌದು ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಹಸಿರು ಸಿರಿ ಇದೆ. ಪುಟ್ಟ ಪುಟ್ಟ ಜಲಪಾತಗಳಿವೆ. ಹಲವಾರು ಕಾಡು ಪ್ರಾಣಿಗಳಿವೆ. ಬಯಲು ನಾಡಿನ ಈ ಹಸಿರು ಚೆಲುವನ್ನು ನೋಡುವುದೇ ಕಣ್ಣಿಗೆ ಹಬ್ಬ, ಮನಸಿಗೆ ಆನಂದ. ಮಳೆಗಾಲದಲ್ಲಿ ಮಡಿಕೇರಿಯ ಚೆಲುವಿನಂತೆ ಕಲಬುರಗಿ ಜಿಲ್ಲೆಯ ಕೆಲವು ಭಾಗಗಳು ಕೂಡಾ ಕಾಣುತ್ತವೆ. ಹೀಗಾಗಿ ನಮಗೆ ಮಡಿಕೇರಿ, ಮಲೆನಾಡಿಗಿಂತ ನಮ್ಮೂರ ಮಲೆನಾಡೇ ಚೆಂದ ಅಂತಾರೆ ಕಲಬುರಗಿ ಜನ.

ಅಷ್ಟಕ್ಕೂ ಬಿಸಿಲುನಾಡು ಕಲಬುರಗಿ ಜಿಲ್ಲೆಯಲ್ಲಿರುವ ಮಲೆನಾಡು ಎಂದು ಖ್ಯಾತಿಯಾಗಿರೋದು ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶ. ಈ ಕುಂಚಾವರಂ ಅರಣ್ಯ ಪ್ರದೇಶ ಬರೋಬ್ಬರಿ 14,958 ಹೆಕ್ಟರ್ ಪ್ರದೇಶ ವ್ಯಾಪ್ತಿಯಲ್ಲಿ ಇದೆ. ಇದನ್ನು 2011 ರಲ್ಲಿ ಸಂರಕ್ಷಿತ ವನ್ಯಜೀವಿ ಧಾಮ ಅಂತಾ ಕೂಡಾ ಘೋಷಿಸಲಾಗಿದೆ.

ಮಳೆಗಾಲದಲ್ಲಿ ಹಸಿರು ಸಿರಿಯೇ ಅನಾವರಣ ಬೇಸಿಗೆಯಲ್ಲಿ ಬೋಳು ಬೋಳಾಗಿ ಕಾಣುವ ಕುಂಚಾವರಂ ಅರಣ್ಯ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಸಮುದ್ರದಲ್ಲಿನ ಚಿಪ್ಪು ಅರಳಿದಂತೆ ಹಸಿರು ಸಿರಿಯನ್ನು ಹೊತ್ತು ಅರಳುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೂಡಾ ಉತ್ತಮವಾಗಿದ್ದು, ಮೃಗಸಿರದ ಜಿಟಿಜಿಟಿ ಮಳೆಗೆ ಕುಂಚಾವರಂ ಅರಣ್ಯ ಪ್ರದೇಶ ಅಕ್ಷರಶಃ ಹಸಿರಿನಿಂದ ನಳನಳಿಸುತ್ತಿದೆ.

ಹೌದು, ಕುಂಚಾವರಂ ಅರಣ್ಯ ಇದೀಗ ಸಂಪೂರ್ಣ ಹಸಿರಾಗಿದೆ. ಬೇಸಿಗೆಯ ಬಿಸಿಲಿಗೆ ಬಸವಳದಿದ್ದ ಮರಗಳು ಇದೀಗ ಬಿಸಿಲಿನಿಂದ ದೂರವಾಗಿ ಮಳೆಯ ಹನಿಗೆ ಹಸಿರನ್ನು ಮೈದೊಡೆದು ನಿಂತಿವೆ. ಹೀಗಾಗಿ ಎಲ್ಲೆಲ್ಲೂ ಇದೀಗ ಹಸಿರೆ ಹಸಿರು ಕಂಗೋಳಿಸುತ್ತಿದೆ. ಇದೇ ಅರಣ್ಯದಲ್ಲಿರುವ ‘ಚಂದ್ರಪಳ್ಳಿ’ ಜಲಾಶಯ, ‘ಎತ್ತಪೋತ’ ಕಿರು ಜಲಪಾತಗಳು ಜನರನ್ನು ಆಕರ್ಷಿಸುತ್ತಿವೆ. ಕುಂಚಾವರಂ ಅರಣ್ಯದಲ್ಲಿ ಹಾದು ಹೋಗುವದೆೇ ಇದೀಗ ಮನಸ್ಸಿಗೆ ಮುದ ನೀಡುವ ವಿಷಯ. ಹೀಗಾಗಿ ಜಿಲ್ಲೆಯ ಬಹುತೇಕ ಜನರು ಇದೀಗ ಕುಂಚಾವರಂನ ಹಸಿರು ಸಿರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಪ್ರವಾಸಿಗರಿಗೆ ಉತ್ತಮ ಸಂಪರ್ಕ ಸಾಧನ ಈ ಬಾರಿ ಕೊರೊನಾದ ಆತಂಕ ಕೂಡಾ ಹೆಚ್ಚಾಗಿರುವುದರಿಂದ ಜಿಲ್ಲೆಯ ಬಹುತೇಕರಿಗೆ ಇದೀಗ ಕುಂಚಾವರಂ ಅರಣ್ಯ ಪ್ರವಾಸಿ ಕೇಂದ್ರವಾಗಿದೆ. ಕಲಬುರಗಿಯಿಂದ ಕೇವಲ 100 ಕಿಲೋ ಮೀಟರ್‌ ದೂರದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಲು ಅತ್ಯುತ್ತಮ ರಸ್ತೆ ಮಾರ್ಗ ಇದೆ. ಜತೆಗೆ ಕಲಬುರಗಿ ನಗರಕ್ಕೆ ವಿಮಾನ ನಿಲ್ದಾಣ ಮತ್ತು ರೈಲ್ವೇ ಸಂಪರ್ಕ ಕೂಡಾ ಇರೋದ್ರಿಂದ ಕಲಬುರಗಿ ಹಸಿರು ಸಿರಿಯನ್ನು ಬೇರೆ ಭಾಗದವರು ಕೂಡಾ ನೋಡಿ ಆನಂದಿಸಬಹುದಾಗಿದೆ -ಸಂಜಯ್

Published On - 4:11 pm, Thu, 18 June 20

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ