AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಯಲು ನಾಡಿನಲ್ಲಿದೆ 14,958 ಹೆಕ್ಟರ್ ವಿಶಾಲದ ಹಸಿರು ಲೋಕ!

ಕಲಬುರಗಿ: ಕಲಬುರಗಿ ಅಂದಾಕ್ಷಣ ತಟ್ಟಣೆ ನೆನಪಾಗುವುದು ಬಿಸಿಲನಾಡು ಅಂತ. ಬಹುತೇಕರಿಗೆ ಕಲಬುರಗಿ ಅಂದ್ರೆ ಇಂದಿಗೂ ಕೂಡಾ ಬಿಸಿಲೆ ಮೊದಲು ಕಾಣಿಸುತ್ತದೆ. ಹೀಗಾಗಿ ನೀರು ನೆರಳಲ್ಲಿದ ಊರು ಅಂತ ಹೆಚ್ಚಿನ ಜನರು ಕಲಬುರಗಿಗೆ ಬರಲು ಹಿಂದೇಟು ಹಾಕ್ತಾರೆ. ಅದು ನಿಜಾ ಕೂಡಾ ಹೌದು. ಆದ್ರೆ, ಇದೇ ಜಿಲ್ಲೆಯಲ್ಲಿ ಹಸಿರು ಸಿರಿ ಕೂಡಾ ಇದೆ. ಮಳೆಗಾಲದಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುದನ್ನು ನೋಡಲು ಎರಡೂ ಕಣ್ಣುಗಳು ಸಾಲವು ಅನ್ನೋದು ಬಹುತೇಕರಿಗೆ ಗೊತ್ತಿಲ್ಲಾ. ಬಯಲು ಬಿಸಿಲ ನಾಡಲ್ಲಿದೆ ಹಸಿರು ಅರಣ್ಯ ಹೌದು ಕಲಬುರಗಿ […]

ಬಯಲು ನಾಡಿನಲ್ಲಿದೆ 14,958 ಹೆಕ್ಟರ್ ವಿಶಾಲದ ಹಸಿರು ಲೋಕ!
ಆಯೇಷಾ ಬಾನು
ಆಯೇಷಾ ಬಾನು|

Updated on:Jun 18, 2020 | 4:12 PM

Share

ಕಲಬುರಗಿ: ಕಲಬುರಗಿ ಅಂದಾಕ್ಷಣ ತಟ್ಟಣೆ ನೆನಪಾಗುವುದು ಬಿಸಿಲನಾಡು ಅಂತ. ಬಹುತೇಕರಿಗೆ ಕಲಬುರಗಿ ಅಂದ್ರೆ ಇಂದಿಗೂ ಕೂಡಾ ಬಿಸಿಲೆ ಮೊದಲು ಕಾಣಿಸುತ್ತದೆ. ಹೀಗಾಗಿ ನೀರು ನೆರಳಲ್ಲಿದ ಊರು ಅಂತ ಹೆಚ್ಚಿನ ಜನರು ಕಲಬುರಗಿಗೆ ಬರಲು ಹಿಂದೇಟು ಹಾಕ್ತಾರೆ. ಅದು ನಿಜಾ ಕೂಡಾ ಹೌದು. ಆದ್ರೆ, ಇದೇ ಜಿಲ್ಲೆಯಲ್ಲಿ ಹಸಿರು ಸಿರಿ ಕೂಡಾ ಇದೆ. ಮಳೆಗಾಲದಲ್ಲಿ ಹಸಿರು ಸೀರೆಯನ್ನುಟ್ಟು ಕಂಗೊಳಿಸುದನ್ನು ನೋಡಲು ಎರಡೂ ಕಣ್ಣುಗಳು ಸಾಲವು ಅನ್ನೋದು ಬಹುತೇಕರಿಗೆ ಗೊತ್ತಿಲ್ಲಾ.

ಬಯಲು ಬಿಸಿಲ ನಾಡಲ್ಲಿದೆ ಹಸಿರು ಅರಣ್ಯ ಹೌದು ಕಲಬುರಗಿ ಜಿಲ್ಲೆಯಲ್ಲಿ ಕೂಡಾ ಹಸಿರು ಸಿರಿ ಇದೆ. ಪುಟ್ಟ ಪುಟ್ಟ ಜಲಪಾತಗಳಿವೆ. ಹಲವಾರು ಕಾಡು ಪ್ರಾಣಿಗಳಿವೆ. ಬಯಲು ನಾಡಿನ ಈ ಹಸಿರು ಚೆಲುವನ್ನು ನೋಡುವುದೇ ಕಣ್ಣಿಗೆ ಹಬ್ಬ, ಮನಸಿಗೆ ಆನಂದ. ಮಳೆಗಾಲದಲ್ಲಿ ಮಡಿಕೇರಿಯ ಚೆಲುವಿನಂತೆ ಕಲಬುರಗಿ ಜಿಲ್ಲೆಯ ಕೆಲವು ಭಾಗಗಳು ಕೂಡಾ ಕಾಣುತ್ತವೆ. ಹೀಗಾಗಿ ನಮಗೆ ಮಡಿಕೇರಿ, ಮಲೆನಾಡಿಗಿಂತ ನಮ್ಮೂರ ಮಲೆನಾಡೇ ಚೆಂದ ಅಂತಾರೆ ಕಲಬುರಗಿ ಜನ.

ಅಷ್ಟಕ್ಕೂ ಬಿಸಿಲುನಾಡು ಕಲಬುರಗಿ ಜಿಲ್ಲೆಯಲ್ಲಿರುವ ಮಲೆನಾಡು ಎಂದು ಖ್ಯಾತಿಯಾಗಿರೋದು ಚಿಂಚೋಳಿ ತಾಲೂಕಿನ ಕುಂಚಾವರಂ ಅರಣ್ಯ ಪ್ರದೇಶ. ಈ ಕುಂಚಾವರಂ ಅರಣ್ಯ ಪ್ರದೇಶ ಬರೋಬ್ಬರಿ 14,958 ಹೆಕ್ಟರ್ ಪ್ರದೇಶ ವ್ಯಾಪ್ತಿಯಲ್ಲಿ ಇದೆ. ಇದನ್ನು 2011 ರಲ್ಲಿ ಸಂರಕ್ಷಿತ ವನ್ಯಜೀವಿ ಧಾಮ ಅಂತಾ ಕೂಡಾ ಘೋಷಿಸಲಾಗಿದೆ.

ಮಳೆಗಾಲದಲ್ಲಿ ಹಸಿರು ಸಿರಿಯೇ ಅನಾವರಣ ಬೇಸಿಗೆಯಲ್ಲಿ ಬೋಳು ಬೋಳಾಗಿ ಕಾಣುವ ಕುಂಚಾವರಂ ಅರಣ್ಯ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆಯೇ ಸಮುದ್ರದಲ್ಲಿನ ಚಿಪ್ಪು ಅರಳಿದಂತೆ ಹಸಿರು ಸಿರಿಯನ್ನು ಹೊತ್ತು ಅರಳುತ್ತದೆ. ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಕೂಡಾ ಉತ್ತಮವಾಗಿದ್ದು, ಮೃಗಸಿರದ ಜಿಟಿಜಿಟಿ ಮಳೆಗೆ ಕುಂಚಾವರಂ ಅರಣ್ಯ ಪ್ರದೇಶ ಅಕ್ಷರಶಃ ಹಸಿರಿನಿಂದ ನಳನಳಿಸುತ್ತಿದೆ.

ಹೌದು, ಕುಂಚಾವರಂ ಅರಣ್ಯ ಇದೀಗ ಸಂಪೂರ್ಣ ಹಸಿರಾಗಿದೆ. ಬೇಸಿಗೆಯ ಬಿಸಿಲಿಗೆ ಬಸವಳದಿದ್ದ ಮರಗಳು ಇದೀಗ ಬಿಸಿಲಿನಿಂದ ದೂರವಾಗಿ ಮಳೆಯ ಹನಿಗೆ ಹಸಿರನ್ನು ಮೈದೊಡೆದು ನಿಂತಿವೆ. ಹೀಗಾಗಿ ಎಲ್ಲೆಲ್ಲೂ ಇದೀಗ ಹಸಿರೆ ಹಸಿರು ಕಂಗೋಳಿಸುತ್ತಿದೆ. ಇದೇ ಅರಣ್ಯದಲ್ಲಿರುವ ‘ಚಂದ್ರಪಳ್ಳಿ’ ಜಲಾಶಯ, ‘ಎತ್ತಪೋತ’ ಕಿರು ಜಲಪಾತಗಳು ಜನರನ್ನು ಆಕರ್ಷಿಸುತ್ತಿವೆ. ಕುಂಚಾವರಂ ಅರಣ್ಯದಲ್ಲಿ ಹಾದು ಹೋಗುವದೆೇ ಇದೀಗ ಮನಸ್ಸಿಗೆ ಮುದ ನೀಡುವ ವಿಷಯ. ಹೀಗಾಗಿ ಜಿಲ್ಲೆಯ ಬಹುತೇಕ ಜನರು ಇದೀಗ ಕುಂಚಾವರಂನ ಹಸಿರು ಸಿರಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಪ್ರವಾಸಿಗರಿಗೆ ಉತ್ತಮ ಸಂಪರ್ಕ ಸಾಧನ ಈ ಬಾರಿ ಕೊರೊನಾದ ಆತಂಕ ಕೂಡಾ ಹೆಚ್ಚಾಗಿರುವುದರಿಂದ ಜಿಲ್ಲೆಯ ಬಹುತೇಕರಿಗೆ ಇದೀಗ ಕುಂಚಾವರಂ ಅರಣ್ಯ ಪ್ರವಾಸಿ ಕೇಂದ್ರವಾಗಿದೆ. ಕಲಬುರಗಿಯಿಂದ ಕೇವಲ 100 ಕಿಲೋ ಮೀಟರ್‌ ದೂರದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಲು ಅತ್ಯುತ್ತಮ ರಸ್ತೆ ಮಾರ್ಗ ಇದೆ. ಜತೆಗೆ ಕಲಬುರಗಿ ನಗರಕ್ಕೆ ವಿಮಾನ ನಿಲ್ದಾಣ ಮತ್ತು ರೈಲ್ವೇ ಸಂಪರ್ಕ ಕೂಡಾ ಇರೋದ್ರಿಂದ ಕಲಬುರಗಿ ಹಸಿರು ಸಿರಿಯನ್ನು ಬೇರೆ ಭಾಗದವರು ಕೂಡಾ ನೋಡಿ ಆನಂದಿಸಬಹುದಾಗಿದೆ -ಸಂಜಯ್

Published On - 4:11 pm, Thu, 18 June 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ