ಕರುನಾಡಲ್ಲಿ ಕೊರೊನಾ ಮಹಾಸ್ಫೋಟ: ಒಂದೇ ದಿನ 3,649 ಜನರಿಗೆ ಸೋಂಕು, 61 ಸಾವು
ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಲಾಕ್ಡೌನ್ ಇರೋದಿಲ್ಲ. ಈ ಬಗ್ಗೆ ಯೋಚಿಸೋದು ಬಿಟ್ಟು ಕೊರೊನಾ ವಿರುದ್ಧ ಹೋರಾಡಲು ರಚನಾತ್ಮಕವಾಗಿ ಕೆಲಸ ಮಾಡಿ. ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ರಾಜ್ಯದ ಜನತೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಮನವಿ ಮಾಡಿಯೇ ಬಿಟ್ಟರು. ಹೀಗಾಗಿ, ಲಾಕ್ಡೌನ್ ವಿಸ್ತರಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿಬಿಟ್ಟರು. ಈ ನಡುವೆ ರಾಜ್ಯ ಸರ್ಕಾರ ಎಂದಿನಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಹಾಗಾದ್ರೆ ಬನ್ನಿ ನೋಡೋಣ ರಾಜ್ಯದ ಕೊರೊನಾ ಅಂಕಿ-ಅಂಶ ಹೇಗಿದೆ ಎಂದು. ಕರುನಾಡಲ್ಲಿ ಕೊರೊನಾ […]

ಬೆಂಗಳೂರು: ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಲಾಕ್ಡೌನ್ ಇರೋದಿಲ್ಲ. ಈ ಬಗ್ಗೆ ಯೋಚಿಸೋದು ಬಿಟ್ಟು ಕೊರೊನಾ ವಿರುದ್ಧ ಹೋರಾಡಲು ರಚನಾತ್ಮಕವಾಗಿ ಕೆಲಸ ಮಾಡಿ. ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ರಾಜ್ಯದ ಜನತೆಯಲ್ಲಿ ಇಂದು ಸಿಎಂ ಯಡಿಯೂರಪ್ಪ ಮನವಿ ಮಾಡಿಯೇ ಬಿಟ್ಟರು. ಹೀಗಾಗಿ, ಲಾಕ್ಡೌನ್ ವಿಸ್ತರಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿಬಿಟ್ಟರು.
ಈ ನಡುವೆ ರಾಜ್ಯ ಸರ್ಕಾರ ಎಂದಿನಂತೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಹಾಗಾದ್ರೆ ಬನ್ನಿ ನೋಡೋಣ ರಾಜ್ಯದ ಕೊರೊನಾ ಅಂಕಿ-ಅಂಶ ಹೇಗಿದೆ ಎಂದು.
ಕರುನಾಡಲ್ಲಿ ಕೊರೊನಾ ಸ್ಫೋಟ ಮುಂದುವರೆದಿದೆ. ರಾಜ್ಯದಲ್ಲಿಂದು ಹೊಸದಾಗಿ 3,649 ಜನರಿಗೆ ಸೋಂಕು ದೃಢವಾಗಿದೆ. ಅದರಲ್ಲಿ ಅತಿ ಹೆಚ್ಚು ಪ್ರಕರಣಗಳು ಅಂದ್ರೆ 1,714 ಕೇಸ್ಗಳು ವರದಿಯಾಗಿರೋದು ರಾಜಧಾನಿ ಬೆಂಗಳೂರಿನಲ್ಲಿ. ಜೊತೆಗೆ, ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 71,069ಕ್ಕೇರಿದೆ. ಸಿಲಿಕಾನ್ ಸಿಟಿಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 34,943ಕ್ಕೇರಿದೆ.
ಬೇರೆ ಜಿಲ್ಲೆಗಳಲ್ಲಿ ಇಂದು ಸೋಂಕಿತರ ಸಂಖ್ಯೆ ಎಷ್ಟು? ಇನ್ನು ಇತರೆ ಜಿಲ್ಲೆಗಳ ಅಂಕಿ ಅಂಶಗಳನ್ನ ನೋಡಿದರೆ ಬಳ್ಳಾರಿಯಲ್ಲಿ 193 ಕೇಸ್, ದಕ್ಷಿಣ ಕನ್ನಡದಲ್ಲಿ 149,ಮೈಸೂರಲ್ಲಿ 135, ಯಾದಗಿರಿಯಲ್ಲಿ 117 ಪ್ರಕರಣಗಳು ವರದಿಯಾಗಿದೆ. ಉತ್ತರ ಕನ್ನಡದಲ್ಲಿ 109 ಕೇಸ್ ಹಾಸನದಲ್ಲಿ 107, ಕೋಲಾರದಲ್ಲಿ 103 ಹಾಗೂ ಕಲಬುರಗಿ 99 ಪ್ರಕರಣಗಳು ಪತ್ತೆಯಾಗಿದೆ. ದಾವಣಗೆರೆ ಹಾಗೂ ಬೆಂಗಳೂರು ಗ್ರಾಮಾಂತರ ತಲಾ 95 ಕೇಸ್, ಉಡುಪಿ, ಧಾರವಾಡದಲ್ಲಿ ತಲಾ 84 ಪ್ರಕರಣಗಳು ವರದಿಯಾಗಿದೆ. ಚಿಕ್ಕಬಳ್ಳಾಪುರದಲ್ಲಿ 81 ಕೇಸ್, ಚಿಕ್ಕಮಗಳೂರಲ್ಲಿ 68, ಬೀದರ್ನಲ್ಲಿ 66 ಮತ್ತು ಬಾಗಲಕೋಟೆಯಲ್ಲಿ 65 ಪ್ರಕರಣ ಪತ್ತೆಯಾಗಿದೆ. ತುಮಕೂರಲ್ಲಿ 47, ಕೊಪ್ಪಳದಲ್ಲಿ 45 ಹಾಗೂ ಹಾವೇರಿಯಲ್ಲಿ 39 ಪ್ರಕರಣ ವರದಿಯಾಗಿದೆ. ಚಾಮರಾಜನಗರದಲ್ಲಿ 34, ಬೆಳಗಾವಿ ಮತ್ತು ಚಿತ್ರದುರ್ಗದಲ್ಲಿ ತಲಾ 23 ಕೇಸ್ಗಳು ಪತ್ತೆಯಾಗಿದೆ. ಶಿವಮೊಗ್ಗದಲ್ಲಿ 20, ಗದಗದಲ್ಲಿ 15 ಮತ್ತು ವಿಜಯಪುರದಲ್ಲಿ 13 ಪ್ರಕರಣಗಳು ಪತ್ತೆಯಾಗಿದೆ. ಮಂಡ್ಯದಲ್ಲಿ 13, ರಾಮನಗರದಲ್ಲಿ 8, ರಾಯಚೂರಿನಲ್ಲಿ 4 ಮತ್ತು ಕೊಡಗಿನಲ್ಲಿ 1 ಕೇಸ್ ಪತ್ತೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಸೋಂಕಿಗೆ 61 ಜನ ಬಲಿ
ಕೊರೊನಾ ಸೋಂಕಿನಿಂದ ಇಂದು 61 ಜನರ ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರಿನಲ್ಲಿ ಇಂದು ಕೊರೊನಾಗೆ 22ಸೋಂಕಿತರು ಬಲಿಯಾಗಿದ್ದಾರೆ. ಇದೀಗ, ರಾಜ್ಯದಲ್ಲಿ ಇದುವರೆಗೆ ಕೊರೊನಾದಿಂದ 1,464 ಜನರ ಅಸುನೀಗಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಸಾವಿನ ಸಂಖ್ಯೆ 720 ತಲುಪಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.

Published On - 7:12 pm, Tue, 21 July 20



