Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಬರ: ಕೇವಲ 6 ತಿಂಗಳಲ್ಲಿ ಉದ್ಯೋಗ ಖಾತ್ರಿ ಕೆಲಸದ ವಾರ್ಷಿಕ ಕೋಟಾ ಶೇ.70ರಷ್ಟು ಖಾಲಿ

ಕರ್ನಾಟಕದಲ್ಲಿ ಬರದಿಂದಾಗಿ ಕೇವಲ ಆರು ತಿಂಗಳಲ್ಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಅಡಿಯಲ್ಲಿ ನಿಗದಿಪಡಿಸಲಾದ ಕೆಲಸದ ವಾರ್ಷಿಕ ಕೋಟಾ ಶೇ. 70 ರಷ್ಟು ಖಾಲಿಯಾಗಿದೆ. ಇದು ರಾಜ್ಯದಲ್ಲಿನ ಬರ ಪರಿಸ್ಥಿತಿಯ ತೀವ್ರತೆಯನ್ನು ಮತ್ತಷ್ಟು ಎತ್ತಿ ತೋರಿಸಿದಂತಾಗಿದೆ.

ಕರ್ನಾಟಕದಲ್ಲಿ ಬರ: ಕೇವಲ 6 ತಿಂಗಳಲ್ಲಿ ಉದ್ಯೋಗ ಖಾತ್ರಿ ಕೆಲಸದ ವಾರ್ಷಿಕ ಕೋಟಾ ಶೇ.70ರಷ್ಟು ಖಾಲಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ವಿವೇಕ ಬಿರಾದಾರ

Updated on:Oct 08, 2023 | 8:44 AM

ಬೆಂಗಳೂರು ಅ.08: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ನಿಗದಿಪಡಿಸಲಾದ ವಾರ್ಷಿಕ ಕೋಟಾವು ಕೇವಲ ಆರು ತಿಂಗಳಲ್ಲಿ ಶೇ70 ರಷ್ಟು ಖಾಲಿಯಾಗಿದೆ. ಇದು ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ. ಕೇಂದ್ರದ 13 ಕೋಟಿ ಉದ್ಯೋಗ ದಿನಗಳ ಹಂಚಿಕೆಯಲ್ಲಿ, ರಾಜ್ಯ ಸರ್ಕಾರವು (Karnataka Government) ಈಗಾಗಲೆ 9.14 ಕೋಟಿ ಉದ್ಯೋಗ ದಿನಗಳನ್ನು ಖಾಲಿ ಮಾಡಿದೆ. 25 ಲಕ್ಷ ಜನರಿಗೆ ಉದ್ಯೋಗವನ್ನು ಒದಗಿಸಿದೆ. ನರೇಗಾ ಅಡಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ವ್ಯಕ್ತಿಯ ಪ್ರಸ್ತುತ ದೈನಂದಿನ ವೇತನವು ರೂ 300 ಆಗಿದೆ.

ಪ್ರಸ್ತುತ ಬರ ಪರಿಸ್ಥಿತಿಯನ್ನು ಪರಿಗಣಿಸಿ ಮತ್ತು ಶೇ70 ರಷ್ಟು ಉದ್ಯೋಗ ದಿನಗಳು ಖಾಲಿಯಾಗಿವೆ. ರಾಜ್ಯದ ಐದು ಕೋಟಿ ಜನಸಂಖ್ಯೆಗೆ ಹೆಚ್ಚುವರಿ ಬಜೆಟ್ ಅವಶ್ಯಕತೆ ಇದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ನರೇಗಾ ಆಯುಕ್ತ ಪವನ್ ಕುಮಾರ್ ಮಾಲಪಾಟಿ ಹೇಳಿದರು.

ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ 52 ರಷ್ಟು ಮಹಿಳೆಯರು ನರೇಗಾ ಯೋಜನೆಯ ಲಾಭ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಕ್ರಮವಾಗಿ ಶೇ 17 ರಷ್ಟು ಮತ್ತು 12 ರಷ್ಟಿದ್ದಾರೆ. ಅಕ್ಟೋಬರ್ 7 ರ ವೇಳೆಗೆ 17,927 ಕುಟುಂಬಗಳು ಯೋಜನೆಯಡಿಯಲ್ಲಿ ಕೆಲಸ ಪಡೆದುಕೊಂಡಿವೆ ಮತ್ತು 100 ದಿನಗಳ ಉದ್ಯೋಗವನ್ನು ಪೂರ್ಣಗೊಳಿಸಿವೆ.

ಇದನ್ನೂ ಓದಿ: ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸುವಂತೆ ಕೇಂದ್ರಕ್ಕೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ

2022-23 ಹಣಕಾಸು ವರ್ಷದಲ್ಲಿ, ಯೋಜನೆಯಡಿಯಲ್ಲಿ 100 ದಿನಗಳ ಕೆಲಸವನ್ನು ಪೂರ್ಣಗೊಳಿಸಿದ ಒಟ್ಟು ಕುಟುಂಬಗಳ ಸಂಖ್ಯೆ 31,678 ಆಗಿದೆ. 2022-23ರಲ್ಲಿ 40 ಮತ್ತು 2021-22ರಲ್ಲಿ 17 ಪಂಚಾಯಿತಿಗಳಿಗೆ ಹೋಲಿಸಿದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ನರೇಗಾ ಅಡಿಯಲ್ಲಿ ಕೇವಲ ಎಂಟು ಗ್ರಾಮ ಪಂಚಾಯಿತಿಗಳು ಶೂನ್ಯ ವೆಚ್ಚವನ್ನು ತೋರಿಸಿವೆ.

ಸರ್ಕಾರಿ ಅಧಿಕಾರಿಗಳ ಪ್ರಕಾರ, ಬರಗಾಲದಿಂದಾಗಿ ತಮ್ಮ ಕ್ಷೇತ್ರದಲ್ಲಿ ಕಡಿಮೆ ಅಥವಾ ಯಾವುದೇ ಉದ್ಯೋಗಾವಕಾಶಗಳನ್ನು ಕಂಡುಕೊಂಡ ಕೃಷಿಕರಿಗೆ ನರೇಗಾ ಯೋಜನೆ ಅಡಿ ಉದ್ಯೋಗಗಳನ್ನು ಪ್ರಾಥಮಿಕವಾಗಿ ಒದಗಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:40 am, Sun, 8 October 23