ರಾಜ್ಯದಲ್ಲಿ ಹೆಚ್ಚಿದ ಅಂಗಾಂಗ ದಾನ: ಆದರೆ ಕಿಡ್ನಿ ಕಸಿಗಾಗಿ ಇಂದಿಗೂ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ

ಕರ್ನಾಟಕದಲ್ಲಿ ಅಂಗಾಂಗ ದಾನಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದರೂ, ಕಿಡ್ನಿ ಕಸಿಗೆ ಸಾವಿರಾರು ರೋಗಿಗಳು ಇನ್ನೂ 2-3 ವರ್ಷ ಕಾಯಬೇಕಿದೆ. ರಾಜ್ಯವು ಕಳೆದ ವರ್ಷ ಅಂಗಾಂಗ ದಾನದಲ್ಲಿ ದೇಶದಲ್ಲೇ 3ನೇ ಸ್ಥಾನದಲ್ಲಿದ್ದರೂ, ಬ್ರೈನ್ ಡೆಡ್ ಅರಿವಿನ ಕೊರತೆ, ಕುಟುಂಬದ ಒಪ್ಪಿಗೆ ಮತ್ತು ಮೂಢನಂಬಿಕೆಗಳು ದಾನಕ್ಕೆ ಅಡ್ಡಿಪಡಿಸುತ್ತಿವೆ. ಜಿಲ್ಲಾ ಮಟ್ಟದಲ್ಲಿ ಜಾಗೃತಿ ಮತ್ತು ಕೌನ್ಸಿಲರ್‌ಗಳ ನಿಯೋಜನೆಯು ಈ ಸಮಸ್ಯೆಯನ್ನು ಬಗೆಹರಿಸಲು ಸಹಕಾರಿ.

ರಾಜ್ಯದಲ್ಲಿ ಹೆಚ್ಚಿದ ಅಂಗಾಂಗ ದಾನ: ಆದರೆ ಕಿಡ್ನಿ ಕಸಿಗಾಗಿ ಇಂದಿಗೂ ವರ್ಷಗಟ್ಟಲೆ ಕಾಯಬೇಕಾದ ಸ್ಥಿತಿ
ಸಾಂದರ್ಭಿಕ ಚಿತ್ರ

Updated on: Aug 13, 2026 | 6:09 AM

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ಒಂದು ದಶಕದಲ್ಲಿ ಅಂಗಾಂಗ ದಾನಿಗಳ (Organ Donations) ಸಂಖ್ಯೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ಆದರೆ, ಅತ್ಯಂತ ಹೆಚ್ಚು ಬೇಡಿಕೆ ಇರುವ ಮೂತ್ರಪಿಂಡ (ಕಿಡ್ನಿ) ಕಸಿಗಾಗಿ ರೋಗಿಗಳು ಇಂದಿಗೂ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಮುಂದುವರಿದಿದೆ. ಈ ಬಗ್ಗೆ ಡೆಕ್ಕನ್ ಹೆರಾಲ್ಡ್ ಒಂದು ವರದಿಯನ್ನು ಮಾಡಿದೆ. ‘

ಅಂಕಿ-ಅಂಶಗಳ ಪ್ರಕಾರ, 2015 ರಲ್ಲಿ ಕೇವಲ 60 ಇದ್ದ ಅಂಗಾಂಗ ದಾನಿಗಳ ಸಂಖ್ಯೆ, 2025 ರ ವೇಳೆಗೆ 198 ಕ್ಕೆ ಏರಿಕೆಯಾಗಿದ್ದು ಸಾರ್ವಕಾಲಿಕ ದಾಖಲೆ ಬರೆದಿದೆ. ಕಳೆದ ವರ್ಷ ಕರ್ನಾಟಕವು ದೇಶದಲ್ಲೇ ಅಂಗಾಂಗ ದಾನದಲ್ಲಿ 3ನೇ ಸ್ಥಾನದಲ್ಲಿತ್ತು. 2026 ರ ಜುಲೈವರೆಗೆ ರಾಜ್ಯದಲ್ಲಿ 121 ಅಂಗಾಂಗ ದಾನಗಳು ದಾಖಲಾಗಿವೆ.

ವೇಟಿಂಗ್ ಪೀರಿಯಡ್ ಎಷ್ಟು?:

ಕಿಡ್ನಿ (ಮೂತ್ರಪಿಂಡ): 2.5 ರಿಂದ 3 ವರ್ಷಗಳು.

ಲಿವರ್ (ಯಕೃತ್ತು): 1 ರಿಂದ 1.5 ವರ್ಷಗಳು.

ಹೃದಯ (ಹಾರ್ಟ್): 3 ರಿಂದ 4 ತಿಂಗಳುಗಳು.

ರಾಜ್ಯದಲ್ಲಿ ಇದುವರೆಗೆ 2,145 ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗಳು ನಡೆದಿದ್ದರೂ, ಇಂದಿಗೂ 5,153 ಜನರು ಕಾಯುವಿಕೆ ಪಟ್ಟಿಯಲ್ಲಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ, ರಾಜ್ಯದಲ್ಲಿ ನಡೆಯುತ್ತಿರುವ ಶೇಕಡಾ 85 ರಷ್ಟು ಅಂಗಾಂಗ ದಾನಗಳು ಬೆಂಗಳೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲೇ ನಡೆಯುತ್ತಿವೆ. ರಾಜ್ಯವು ತನ್ನ ಒಟ್ಟು ಸಾಮರ್ಥ್ಯದ ಶೇ. 1 ರಿಂದ 2 ರಷ್ಟನ್ನು ಮಾತ್ರ ಬಳಸಿಕೊಳ್ಳುತ್ತಿದೆ.

ಇತರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ‘ಬ್ರೈನ್ ಡೆಡ್’ ಕುರಿತು ಜಾಗೃತಿ ಮೂಡಿಸುವುದು ಮತ್ತು ಅವುಗಳನ್ನು ‘ಅಂಗಾಂಗ ಮರುಪಡೆಯುವಿಕೆ ಕೇಂದ್ರಗಳು’ ಆಗಿ ಪರಿವರ್ತಿಸುವುದು ಅಗತ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ವಯಸ್ಸಾದರೂ ಮಸಲ್ಸ್‌ ಸ್ಟ್ರಾಂಗ್‌ ಆಗಿರಬೇಕು ಅಂದ್ರೆ ಈ ಆಹಾರ ಮತ್ತು ವ್ಯಾಯಾಮ ತಪ್ಪದೇ ಮಾಡಿ

ಅಂಗಾಂಗ ದಾನಕ್ಕೆ ಹಿಂಜರಿಕೆಗೆ ಕಾರಣಗಳೇನು?

ಕುಟುಂಬದ ಒಪ್ಪಿಗೆ ಕೊರತೆ: ವ್ಯಕ್ತಿ ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದರೂ, ಅವರ ಕುಟುಂಬದ ಜೊತೆ ಚರ್ಚಿಸದಿದ್ದರೆ ಅಂತಿಮ ಕ್ಷಣದಲ್ಲಿ ದಾನ ನಡೆಯುವುದಿಲ್ಲ.

ಬ್ರೈನ್ ಡೆಡ್ ಕುರಿತು ಅರಿವಿನ ಅಭಾವ: ಮಿದುಳು ಸತ್ತಿದ್ದರೂ ‘ಹೃದಯ ಬಡಿತ ಇದೆಯಲ್ಲ’ ಎಂಬ ಭಾವನೆಯಿಂದ ಕುಟುಂಬಸ್ಥರು ದಾನಕ್ಕೆ ಒಪ್ಪುವುದಿಲ್ಲ.

ಧಾರ್ಮಿಕ ಮತ್ತು ಸಾಂಸ್ಕೃತಿಕ ಮೂಢನಂಬಿಕೆಗಳು: ದೇಹದ ವಿಕಾರವಾಗುತ್ತದೆ ಎಂಬ ಭಯ ಹಾಗೂ ಮೂಢನಂಬಿಕೆಗಳು ಅಂಗಾಂಗ ದಾನದ ದರವನ್ನು ತಗ್ಗಿಸುತ್ತಿವೆ.

ಆರೋಗ್ಯ ಇಲಾಖೆಯು ಜಿಲ್ಲಾ ಮಟ್ಟದ ಸರ್ಕಾರಿ ಆಸ್ಪತ್ರೆಗಳಲ್ಲಿ ತರಬೇತಿ ಪಡೆದ ಕೌನ್ಸಿಲರ್‌ಗಳನ್ನು ನಿಯೋಜಿಸುವ ಮೂಲಕ ಬ್ರೈನ್ ಡೆಡ್ ರೋಗಿಗಳ ಕುಟುಂಬದವರ ಮನವೊಲಿಸಲು ಮತ್ತು ಪ್ರಕ್ರಿಯೆಯನ್ನು ಸುಲಭಗೊಳಿಸಲು ವಿಶೇಷ ಕಾರ್ಯತಂತ್ರ ರೂಪಿಸುತ್ತಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us