AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಡಿ ದಾಳಿಯಿಂದ ಮಗುವಿನ ಮುಖಕ್ಕೆ ಗಾಯ: ಪ್ಲಾಸ್ಟಿಕ್ ಸರ್ಜರಿಯಿಂದ ಜೀವ ಉಳಿಸಿದ ಕಿಮ್ಸ್ ಆಸ್ಪತ್ರೆ ತಜ್ಞರು

ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಸರಕಾರಿ ವೈದ್ಯಕೀಯ ಕಾಲೇಜುಗಳ ಪೈಕಿ ಇಲ್ಲಿ ಮಾತ್ರ ಈ ವಿಭಾಗ ಇರುವುದು ಎನ್ನುವುದು ವಿಶೇಷ. ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ ಅರ್ಧ ಮುಖವನ್ನೇ ಕಳೆದುಕೊಂಡು ಸಾವಿನ ಕದ ಕಟ್ಟಿದ್ದ ಮಗು, ಕೊನೆಗೂ ಬದುಕುಳಿದಿದೆ. ಮುಖವನ್ನೆ ದವಡೆಯ ಸಹಿತ ಪ್ಲಾಸ್ಟಿಕ್ ಸರ್ಜರಿ ಮಾಡಿ ವೈದ್ಯರು ಕಂದಮ್ಮನಿಗೆ ಮರುಜೀವ ನೀಡಿದ್ದಾರೆ.

ಕರಡಿ ದಾಳಿಯಿಂದ ಮಗುವಿನ ಮುಖಕ್ಕೆ ಗಾಯ: ಪ್ಲಾಸ್ಟಿಕ್ ಸರ್ಜರಿಯಿಂದ ಜೀವ ಉಳಿಸಿದ ಕಿಮ್ಸ್ ಆಸ್ಪತ್ರೆ ತಜ್ಞರು
ಶಸ್ತ್ರ ಚಿಕಿತ್ಸೆಗೆ ಒಳಗಾದ ಮಗು ಮತ್ತು ವೈದ್ಯರ ತಂಡ
Follow us
preethi shettigar
| Updated By: guruganesh bhat

Updated on: Mar 12, 2021 | 2:13 PM

ಹುಬ್ಬಳ್ಳಿ: ತೋಟದ ಮನೆಯಲ್ಲಿ ಮಲಗಿದ್ದ 9 ತಿಂಗಳ ಮಗುವಿನ ಮೇಲೆ ಏಕಾಏಕಿ ತೋಳವೊಂದು ದಾಳಿ ನಡೆಸಿ ಮಗುವಿನ ಅರ್ಧ ಮುಖವನ್ನೇ ತಿಂದ ಘಟನೆ ಹಾವೇರಿ ಜಿಲ್ಲೆಯ ಹೊಸರಿತ್ತಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಆದರೆ ಹುಬ್ಬಳ್ಳಿಯ ಕಿಮ್ಸ್‌ ವೈದ್ಯರ ತಂಡವೊಂದು ಮಗುವಿನ ಜೀವವನ್ನು ಉಳಿಸಿದ್ದಷ್ಟೇ ಅಲ್ಲದೆ ಮತ್ತೊಂದು ಚಮತ್ಕಾರಿ ಚಿಕಿತ್ಸೆ ಮಾಡುವ ಮೂಲಕ, ಸರಕಾರಿ ಆಸ್ಪತ್ರೆ ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಮಾರ್ಚ್ 8 ರಂದು ಹಾಡಹಗಲೇ ಈ ದುರ್ಘಟನೆ ಸಂಭವಿಸಿದ್ದು, 9ತಿಂಗಳ ಮಗು ಅನ್ನಪ್ಪನ ಮೇಲೆ ಮನೆಯಲ್ಲಿ ಯಾರು ಇಲ್ಲದ ಸಮಯವನ್ನೇ ನೊಡಿಕೊಂಡು ತೋಳ ಮಾರಣಾಂತಿಕವಾಗಿ ದಾಳಿ ಮಾಡಿತ್ತು. ಮುಖದ ಮೇಲೆ ಅಷ್ಟೇ ಅಲ್ಲ ಮೈಮೇಲೆ ಗಂಭೀರವಾಗಿ ಗಾಯ ಮಾಡಿತ್ತು. ಹೆತ್ತವರು ಜೋರಾಗಿ ಅಳುತ್ತಿದ್ದ ಶಬ್ದ ಕೇಳಿ ಓಡಿ ಬಂದಾಗ ತೋಳ ಕಾಲ್ಕಿತ್ತಿದೆ. ಅನ್ನಪ್ಪನ ಪರಿಸ್ಥಿತಿ ತೀರಾನೇ ಗಂಭೀರವಾಗಿತ್ತು. ದವಡೆಯ ಭಾಗ ಸಂಪೂರ್ಣವಾಗಿ ಸೀಳಿ ಹಾಕಿತ್ತು. ತಕ್ಷಣ ಪಾಲಕರು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದಾರೆ. ಮಗು ರಕ್ತದ ಮಡುವಿನಲ್ಲಿದ್ದ ಸ್ಥಿತಿ ಕಂಡು ಎಲ್ಲರೂ ಮಗು ಉಳಿಯುವುದು ಅನುಮಾನ ಎಂದು ಹೇಳಿದ್ದರು. ಆದರೆ ಮಗು ಅದೃಷ್ಟವಶಾತ್ ಬದುಕುಳಿದಿದೆ.

ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸೆ ವಿಭಾಗಕ್ಕೆ ಸರಕಾರಿ ವೈದ್ಯಕೀಯ ಕಾಲೇಜುಗಳ ಪೈಕಿ ಇಲ್ಲಿ ಮಾತ್ರ ಈ ವಿಭಾಗ ಇರುವುದು ಎನ್ನುವುದು ವಿಶೇಷ. ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ ಅರ್ಧ ಮುಖವನ್ನೇ ಕಳೆದುಕೊಂಡು ಸಾವಿನ ಕದ ಕಟ್ಟಿದ್ದ ಮಗು, ಕೊನೆಗೂ ಬದುಕುಳಿದಿದ್ದಾನೆ. ಮುಖವನ್ನೆ ದವಡೆಯ ಸಹಿತ ಪ್ಲಾಸ್ಟಿಕ್ ಸರ್ಜರಿ ಮಾಡಿ ವೈದ್ಯರು ಕಂದಮ್ಮನಿಗೆ ಮರುಜೀವ ನೀಡಿದ್ದಾರೆ.

baby plastic surgery

ಹುಬ್ಬಳಿಯ ಕಿಮ್ಸ್​ ಆಸ್ಪತ್ರೆ

ದವಡೆಗೆ ಪ್ಲೇಟ್‌ನ್ನು ಹಾಕಿ ಮುಖಕ್ಕೆ ಮತ್ತೆ ಅದೇ ಆಕಾರ ನೀಡಿದ್ದಾರೆ. ಚಿಕ್ಕಮಕ್ಕಳಿಗೆ ಅರವಳಿಕೆ ನೀಡಿ, ನಾಲ್ಕು ಗಂಟೆ ಶಸ್ತ್ರ ಚಿಕಿತ್ಸೆ ಮಾಡುವುದು ಎಂದರೆ ಅದೊಂದು ಸವಾಲೇ ಸರಿ. ಇಡಿ ಮುಖವನ್ನೇ ಮತ್ತೆ ಅದೇ ಆಕಾರಕ್ಕೆ ತರುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಕಿಮ್ಸ್​ ವೈದ್ಯಕೀಯ ತಂಡ ಮತ್ತು ಡಾಕ್ಟರ್ ಮಂಜುನಾಥ್ ಅವರಿಗೆ ಸದ್ಯ ವ್ಯಾಪಕ ಪ್ರಶಂಸೆ ಕೇಳಿಬಂದಿದೆ.

baby plastic surgery

ಬಾಯಿ ಮತ್ತು ಮುಖದ ಶಸ್ತ್ರ ಚಿಕಿತ್ಸೆ ವಿಭಾಗ

9 ವರ್ಷದ ಮಗುವನ್ನು ನೋಡಿದಾಗ ಆ ಮೂಗಿಗೆ ಎಮರ್ಜನ್ಸಿ ಚಿಕಿತ್ಸೆ ಬೇಕು ಎಂದು ಅನಿಸಿತ್ತು. ಈ ಮಗುವಿನ ದವಡೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿದ್ದೇವೆ. ಕ್ಲಿಷ್ಟಕರವಾದ ಚಿಕಿತ್ಸೆ ಇದಾಗಿತ್ತು. ಸದ್ಯ ಮಗು ಆರೋಗ್ಯವಾಗಿದೆ. ಇನ್ನು ಮೂರು ತಿಂಗಳ ನಂತರ ದವಡೆಗೆ ಇನ್ನೊಂದು ಚಿಕಿತ್ಸೆ ಮಾಡುವ ಅಗತ್ಯತೆ ಇದೆ ಎಂದು ಕಿಮ್ಸ್ ಆಸ್ಪತ್ರೆಯ ತಜ್ಞ ಡಾ. ಮಂಜುನಾಥ್ ಹೇಳಿದ್ದಾರೆ.

baby plastic surgery

ಪ್ಲಾಸ್ಟಿಕ್ ಸರ್ಜರಿ ಮಾಡಿ ಕಂದಮ್ಮನಿಗೆ ಮರುಜೀವ

ಈ ವೈದ್ಯಕೀಯ ಕಾಲೇಜಿನ ವಿಶೇಷ ಬಾಯಿ ಮತ್ತು ಮುಖ ಶಸ್ತ್ರ ಚಿಕಿತ್ಸೆ ವಿಭಾಗ ಬಡವರ ಪಾಲಿಗೆ ಆತ್ಮಬಂಧುವಿನಂತಾಗಿದೆ. ಲಕ್ಷಾಂತರ ರೂಪಾಯಿ ಖರ್ಚಾಗುವಂತ ಈ ಸರ್ಜರಿ ಇಲ್ಲಿ ಮಾತ್ರ ಸಂಪೂರ್ಣ ಉಚಿತವಾಗಿ ಸೇವೆ ನೀಡಲಾಗುತ್ತದೆ.

ಇದನ್ನೂ ಓದಿ: ಕಣ್ಣಿನ ಶಸ್ತ್ರ ಚಿಕಿತ್ಸೆಗೆ ಒಳಗಿದ್ದಾರೆ ಬಿಗ್ ಬಿ ಅಮಿತಾಭ್ ಬಚ್ಚನ್

ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ನಂಜನಗೂಡು ದೇವಾಲಯದಲ್ಲಿ ಒಂದೇ ತಿಂಗಳಲ್ಲಿ 2.59 ಕೋಟಿ ರೂ. ಸಂಗ್ರಹ
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್
ಸದ್ಯದ ಸ್ಥಿತಿಯಲ್ಲಿ ಪ್ರಧಾನಿ ಮೋದಿಯವರ ನಿರ್ಣಯವೇ ಅಂತಿಮ: ಹೆಚ್​ಕೆ ಪಾಟೀಲ್