AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಡಗಲ್ಲಿ ಕಾಫಿ ಹೂಗಳ ಕಂಪು: ಅರಳಿ ನಿಂತ ಶ್ವೇತವರ್ಣದ ಕುಸುಮ ನಯನ ಮನೋಹರ

ಮಡಿಕೇರಿ: ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಅರಳಿನಿಂತಿರೋ ಹೂವುಗಳು. ಜೇನಿನ ಝೇಂಕಾರದೊಂದಿಗೆ ಘಮ್ಮೆನ್ನುತ್ತಿರುವ ಹೂವಿನ ಘಮಲು. ಎಲ್ಲೆಡೆ ಕಂಪು ಹರಿಸಿದ ಶ್ವೇತವರ್ಣದ ಕಾಫಿ ಹೂವುಗಳ ರಂಗು. ಪ್ರವಾಸಿಗರ ಹಾಟ್‌ಸ್ಪಾಟ್.. ಕಾಫಿಯ ತವರು.. ದಕ್ಷಿಣದ ಕಾಶ್ಮೀರ ಅಂತೆಲ್ಲಾ ಕರೆಸಿಕೊಳ್ಳುವ ಕಾಫಿ ನಾಡು ಕೂಡಗಿನಲ್ಲಿ ಈಗ ಕಾಫಿ ಹೂವಿನ ಘಮಲು ಹರಡಿದೆ. ನವೆಂಬರ್‌ನಿಂದ ಈವರೆಗೆ ಕಾಫಿ ಹಣ್ಣುಗಳನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದ್ದ ಕಾಫಿ ತೋಟಗಳು, ಈಗ ಶ್ವೇತ ವರ್ಣದ ಸುಂದರಿಯರನ್ನು ಬಿಗಿದಪ್ಪಿಕೊಂಡು ಕಂಪು ಬೀರುತ್ತಿವೆ. ಈಗ ಕಾಫಿ ಗಿಡಗಳು ಹೂ […]

ಕೊಡಗಲ್ಲಿ ಕಾಫಿ ಹೂಗಳ ಕಂಪು: ಅರಳಿ ನಿಂತ ಶ್ವೇತವರ್ಣದ ಕುಸುಮ ನಯನ ಮನೋಹರ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Mar 06, 2020 | 6:34 PM

Share

ಮಡಿಕೇರಿ: ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಅರಳಿನಿಂತಿರೋ ಹೂವುಗಳು. ಜೇನಿನ ಝೇಂಕಾರದೊಂದಿಗೆ ಘಮ್ಮೆನ್ನುತ್ತಿರುವ ಹೂವಿನ ಘಮಲು. ಎಲ್ಲೆಡೆ ಕಂಪು ಹರಿಸಿದ ಶ್ವೇತವರ್ಣದ ಕಾಫಿ ಹೂವುಗಳ ರಂಗು. ಪ್ರವಾಸಿಗರ ಹಾಟ್‌ಸ್ಪಾಟ್.. ಕಾಫಿಯ ತವರು.. ದಕ್ಷಿಣದ ಕಾಶ್ಮೀರ ಅಂತೆಲ್ಲಾ ಕರೆಸಿಕೊಳ್ಳುವ ಕಾಫಿ ನಾಡು ಕೂಡಗಿನಲ್ಲಿ ಈಗ ಕಾಫಿ ಹೂವಿನ ಘಮಲು ಹರಡಿದೆ.

ನವೆಂಬರ್‌ನಿಂದ ಈವರೆಗೆ ಕಾಫಿ ಹಣ್ಣುಗಳನ್ನು ಮೈದುಂಬಿಕೊಂಡು ಕಂಗೊಳಿಸುತ್ತಿದ್ದ ಕಾಫಿ ತೋಟಗಳು, ಈಗ ಶ್ವೇತ ವರ್ಣದ ಸುಂದರಿಯರನ್ನು ಬಿಗಿದಪ್ಪಿಕೊಂಡು ಕಂಪು ಬೀರುತ್ತಿವೆ. ಈಗ ಕಾಫಿ ಗಿಡಗಳು ಹೂ ಬಿಡುವ ಸಮಯವಾಗಿದ್ದು, ರೊಬೆಸ್ಟಾ ಕಾಫಿ ತೋಟಗಳಲ್ಲಿ ಹೂಗಳು ನಳನಳಿಸುತ್ತಿವೆ. ಗಿಡಗಳಲ್ಲಿ ಅರಳಿ ನಿಂತಿರೋ ಬಿಳಿ ಬಣ್ಣದ ಹೂಗಳು ಎಲ್ಲರ ಗಮನಸೆಳೆಯುತ್ತಿವೆ.

ಕಾಫಿ ಹಣ್ಣನ್ನು ಕೂಯ್ಲು ಮಾಡಿದ ನಂತರ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಸುರಿಯೋ ಮಳೆ ಮತ್ತು ತುಂತುರು ನೀರಾವರಿ ವೇಳೆ ಕಾಫಿ ತೋಟಗಳ ಬಣ್ಣವೇ ಬದಲಾಗಿ ಬಿಡುತ್ತೆ. ಹಸಿರ ರಾಶಿಯ ಮೇಲೆ ಮೊಸರು ಚೆಲ್ಲಿದಂತೆ ಬಾಸವಾಗುವ ಈ ಸುಂದರ ದೃಶ್ಯವನ್ನು ನೋಡೋದೇ ಖುಷಿ. ರಸ್ತೆಗಳ ಬದಿಯಲ್ಲೆಲ್ಲಾ ಅರಳಿನಿಂತಿರೋ ಹೂಗಳು ನೋಡುಗರ ಕಣ್ಣಿಗೆ ಹಬ್ಬವನ್ನಷ್ಟೇ ಅಲ್ಲ, ಸುಮಧುರ ಸುವಾಸನೆ ಬೀರುತ್ತಾ ತಮ್ಮ ಇರುವಿಕೆಯನ್ನು ಸಾರುತ್ತಿವೆ. ಅಷ್ಟೇ ಅಲ್ಲ ರೈತರಲ್ಲಿ ಸಂತಸ ಮೂಡಿಸಿದೆ.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ