AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kaveri Nisargadhama: ಕೊಡಗು ಪ್ರವಾಸೋದ್ಯಮಕ್ಕೆ ಹೊಸ ಗರಿ, ಪ್ರವಾಸಿಗರ ಆಕರ್ಷಿಸುತ್ತಿದೆ ಪಕ್ಷಿಗಳ ಪಾರ್ಕ್

ಲಾಕ್ಡೌನ್ ವೇಳೆ ಇಲ್ಲಿ ಪಕ್ಷಿಕೇಂದ್ರದ ಕಾಮಗಾರಿ ನಡೆದಿದ್ದು ಇದೀಗ ಪಕ್ಷಿಗಳನ್ನು ತಂದು ಬಿಡಲಾಗಿದೆ. ಈ ಪಕ್ಷಿಗಳು ಸ್ವಭಾವತ ಮನುಷ್ಯರೊಂದಿಗೆ ಆತ್ಮೀಯವಾಗಿರುವುದು ಪ್ರವಾಸಿಗರ ಖುಷಿಗೆ ಕಾರಣವಾಗಿದೆ.

Kaveri Nisargadhama: ಕೊಡಗು ಪ್ರವಾಸೋದ್ಯಮಕ್ಕೆ ಹೊಸ ಗರಿ, ಪ್ರವಾಸಿಗರ ಆಕರ್ಷಿಸುತ್ತಿದೆ ಪಕ್ಷಿಗಳ ಪಾರ್ಕ್
ಪ್ರವಾಸಿಗರ ಆಕರ್ಷಿಸುತ್ತಿದೆ ಪಕ್ಷಿಗಳ ಪಾರ್ಕ್
TV9 Web
| Edited By: |

Updated on:Oct 13, 2021 | 10:14 PM

Share

ಕೊಡಗು: ಕೊಡಗು ಜಿಲ್ಲೆಗೆ ಪ್ರವಾಸ ಹೋಗುವವರಿಗೆ ಇದು ಖುಷಿಯ ಸುದ್ದಿ. ಏಕೆಂದರೆ ಕುಶಾಲನಗರ ತಾಲೂಕಿನ ವಿಶ್ವ ಪ್ರಸಿದ್ಧ ನಿಸರ್ಗಧಾಮಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ನಿಸರ್ಗಧಾಮದೊಳಗೆ ದಕ್ಷಿಣ ಆಫ್ರಿಕಾದ ಗಿಳಿಗಳ ಕಲರವ ಕೇಳಿಸುತ್ತಿವೆ. ಇಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ ಪಕ್ಷಿ ಕೇಂದ್ರ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಲಾಕ್ಡೌನ್ ವೇಳೆ ಇಲ್ಲಿ ಪಕ್ಷಿಕೇಂದ್ರದ ಕಾಮಗಾರಿ ನಡೆದಿದ್ದು ಇದೀಗ ಪಕ್ಷಿಗಳನ್ನು ತಂದು ಬಿಡಲಾಗಿದೆ. ಈ ಪಕ್ಷಿಗಳು ಸ್ವಭಾವತ ಮನುಷ್ಯರೊಂದಿಗೆ ಆತ್ಮೀಯವಾಗಿರುವುದು ಪ್ರವಾಸಿಗರ ಖುಷಿಗೆ ಕಾರಣವಾಗಿದೆ. ಪ್ರವಾಸಿಗರ ಕೈಯಿಗೆ ಕಾಳುಗಳನ್ನು ಹಾಕಿದರೆ ಸಾಕು ಈ ಪಕ್ಷಿಗಳು ಹಾರಿ ಬಂದು ಕೈಯಲ್ಲಿ ಕುಳಿತು ಯಾವುದೇ ಅಳುಕಿಲ್ಲದೆ ಆಹಾರ ಸೇವಿಸುತ್ತವೆ. ಕಾಡು ಪಕ್ಷಿಗಳು ಹೀಗೆ ಕೈ, ತಲೆ, ಹೆಗಲ ಮೇಲೆ ಕುಳಿತುಕೊಳ್ಳುವುದು ಅಂದರೆ ಪ್ರವಾಸಿಗರಿಗೆ ವಿಶೇಷ ಮುದ ನೀಡುತ್ತಿವೆ.

ಸದ್ಯ ಆಫ್ರಿಕಾದ ಮಕಾವ್ ತಳಿಯ ಮೂರು ಬಗೆಯ ಗಿಳಿಗಳು ಇಲ್ಲಿವೆ. ಅರಣ್ಯ ಇಲಾಖೆ ಖಾಸಗಿ ಸಹಯೋಗದಲ್ಲಿ ಈ ಪಕ್ಷಿ ಕೇಂದ್ರ ಸ್ಥಾಪನೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರವನ್ನು ಮತ್ತಷ್ಟು ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ದಸರಾ ರಜೆಯಲ್ಲಿ ಕೊಡಗಿಗೆ ಪ್ರವಾಸ ಆಗಮಿಸುತ್ತಿರುವವರಿಗೆ ಈ ಕೇಂದ್ರ ವಿಶೇಷ ಅನುಭವ ನೀಡುತ್ತಿದ್ದು ಎಲ್ಲರೂ ಖುಷಿಪಡುತ್ತಿದ್ದಾರೆ.

kaveri nisargadhama

ಕಾವೇರಿ ನಿಸರ್ಗಧಾಮ

kaveri nisargadhama

ಕಾವೇರಿ ನಿಸರ್ಗಧಾಮ

kaveri nisargadhama

ಕಾವೇರಿ ನಿಸರ್ಗಧಾಮ

ವರದಿ: ಗೋಪಾಲ್ ಸೋಮಯ್ಯ ಐಮಂಡ

ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್ ಕ್ಯಾಪ್ಟನ್​ಗೆ ಐಪಿಎಲ್‌ ಆಡುವ ಬಯಕೆ! ಮಧ್ಯದಲ್ಲಿ ಕೈಕೊಡುವ ಆಂಗ್ಲರ ಮೇಲೆ ಫ್ರಾಂಚೈಸಿಗಳ ನಿಲುವೆನು?

Published On - 10:13 pm, Wed, 13 October 21

ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಆಂಟಿ ಕರೆದಳೆಂದು ಹೋದ ಯುವಕ ಆಸ್ಪತ್ರೆ ಪಾಲು, ಆಗಿದ್ದೇನು?
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್