AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾರಾಯಣ ಆಚಾರರ ಮನೆಯಲ್ಲಿ ಚಿನ್ನ ಸಿಕ್ಕಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸೋಮಣ್ಣ

ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ವಾಸ್ತವ್ಯ ಹೂಡಿ ನೆರೆ ಪರಿಹಾರ ಕೆಲಸಗಳನ್ನು ನೋಡಿಕೊಳ್ಳುತ್ತಿರುವ ಸಚಿವ ವಿ ಸೋಮಣ್ಣ ಇಂದು ಟಿವಿ9ನೊಂದಿಗೆ ಮಾತಾಡಿ ಜಿಲ್ಲೆಯಲ್ಲಿನ ಪರಿಸ್ಥಿತಿ ಹಾಗೂ ತಲಕಾವೇರಿಯಲ್ಲಿ ಬ್ರಹ್ಮಗಿರಿಬೆಟ್ಟ ಕುಸಿತದಿಂದಾದ ದುರಂತದ ಬಗ್ಗೆ ವಿವರಿಸಿದರು. ರವಿವಾರದಂದು ಆನಂದ ತೀರ್ಥ ಅವರ ಮೃತದೇಹ ಪತ್ತೆಯಾದ ನಂತರ ನಾರಾಯಣ ಆಚಾರ್ ಅವರ ಬಗ್ಗೆ ಒಂದಿಷ್ಟು ಕುರುಹು ಸಿಕ್ಕಿತ್ತು. ಆನಂದರ ದೇಹ ದೊರೆತ ಸುಮಾರು ಎರಡು ಕಿಲೊಮೀಟರುಗಳಷ್ಟು ದೂರ ನಾಗತೀರ್ಥ ಎಂಬಲ್ಲಿ ನಾರಾಯಣ ಆಚಾರರ ದೇಹ ಸಿಕ್ಕಿದೆ, ಎಂದು ಸೋಮಣ್ಣ ಹೇಳಿದರು. […]

ನಾರಾಯಣ ಆಚಾರರ ಮನೆಯಲ್ಲಿ ಚಿನ್ನ ಸಿಕ್ಕಿಲ್ಲ, ಸುಳ್ಳು ಸುದ್ದಿ ನಂಬಬೇಡಿ: ಸೋಮಣ್ಣ
ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Aug 11, 2020 | 7:00 PM

Share

ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ವಾಸ್ತವ್ಯ ಹೂಡಿ ನೆರೆ ಪರಿಹಾರ ಕೆಲಸಗಳನ್ನು ನೋಡಿಕೊಳ್ಳುತ್ತಿರುವ ಸಚಿವ ವಿ ಸೋಮಣ್ಣ ಇಂದು ಟಿವಿ9ನೊಂದಿಗೆ ಮಾತಾಡಿ ಜಿಲ್ಲೆಯಲ್ಲಿನ ಪರಿಸ್ಥಿತಿ ಹಾಗೂ ತಲಕಾವೇರಿಯಲ್ಲಿ ಬ್ರಹ್ಮಗಿರಿಬೆಟ್ಟ ಕುಸಿತದಿಂದಾದ ದುರಂತದ ಬಗ್ಗೆ ವಿವರಿಸಿದರು.

ರವಿವಾರದಂದು ಆನಂದ ತೀರ್ಥ ಅವರ ಮೃತದೇಹ ಪತ್ತೆಯಾದ ನಂತರ ನಾರಾಯಣ ಆಚಾರ್ ಅವರ ಬಗ್ಗೆ ಒಂದಿಷ್ಟು ಕುರುಹು ಸಿಕ್ಕಿತ್ತು. ಆನಂದರ ದೇಹ ದೊರೆತ ಸುಮಾರು ಎರಡು ಕಿಲೊಮೀಟರುಗಳಷ್ಟು ದೂರ ನಾಗತೀರ್ಥ ಎಂಬಲ್ಲಿ ನಾರಾಯಣ ಆಚಾರರ ದೇಹ ಸಿಕ್ಕಿದೆ, ಎಂದು ಸೋಮಣ್ಣ ಹೇಳಿದರು.

ಆಚಾರರ ದೇಹ ಹುಡುಕುವಲ್ಲಿ ಎನ್.ಡಿ.ಆರ್.ಎಫ್ ತಂಡ ಪಟ್ಟ ಶ್ರಮ ಶ್ಲಾಘನೀಯ ಎಂದು ಸೋಮಣ್ಣ ತಂಡವನ್ನು ಕೊಂಡಾಡಿದರು.

ಇವತ್ತೇ ನಾರಾಯಣ ಆಚಾರ್ಯರ ಅಂತ್ಯ ಸಂಸ್ಕಾರ ನಡೆಯಲಿದೆ, ಕಾಣೆಯಾಗಿರುವ ಇತರ ಮೂವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ನಾರಾಯಣ ಆಚಾರ್ ಅವರ ಮನೆಯಲ್ಲಿ ಅಪಾರ ಚಿನ್ನ ಇದೆ ಅನ್ನೋದು ಊಹಾಪೋಹ. ಹಳೆ ನಾಣ್ಯಗಳು ಸಿಕ್ಕಿರೋದು ನಿಜ. ಅವರು ಸಾಮಾನ್ಯ ಜೀವನ ಮಾಡುತ್ತಿದ್ದರು, ಅವರ ಕುಟುಂಬ ತಂಬಾ ದುಖಃದಲ್ಲಿದೆ, ಸುಳ್ಳು ಆರೋಪಗಳು ಅವರಿಗೆ ಇನ್ನಷ್ಟು ನೋವುಂಟು ಮಾಡುತ್ತವೆ. ದಯವಿಟ್ಟು ಇಲ್ಲ ಸಲ್ಲದ ಅಪವಾದಗಳಿಗೆ ಕಿವಿಗೊಡಬೇಡಿ,” ಎಂದು ಸಚಿವರು ಹೇಳಿದರು.

ಬುಧವಾರ ಮತ್ತು ಗುರುವಾರ ಬೆಂಗಳೂರಿನಲ್ಲಿ ಕೊವಿಡ್ ಸಭೆ ನಿಗದಿಯಾಗಿರುವುದರಿಂದ ತಾನು ರಾಜಧಾನಿಗೆ ಮರಳತ್ತಿರುವ ಬಗ್ಗೆ ಹೇಳಿದ ಸಚಿವರು, ಶುಕ್ರವಾರವಾರದಂದು ಕೊಡಗಿಗೆ ವಾಪಸ್ಸಾಗುವುದಾಗಿ ಹೇಳಿದರು. ಅವರ ಅನುಪಸ್ಥಿತಿಯಲ್ಲಿ ಶಾಸಕ ಬೋಪಯ್ಯ ನೆರೆ ಪರಿಹಾರ ಕೆಲಸಗಳನ್ನು ನೋಡಿಕೊಳ್ಳುತ್ತಾರೆಂದು ಸಹ ಸೋಮಣ್ಣ ಟಿವಿ9ಗೆ ತಿಳಿಸಿದರು

         

Follow Us
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ಹೂಗಳಿಗಾಗಿ ನೇರವಾಗಿ ರೈತರ ತೋಟಕ್ಕೆ ಲಗ್ಗೆ ಇಟ್ಟ ಜನರು
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ನಕಲಿ ಔಷಧ ಕಿಂಗ್​ಪಿನ್ ಪ್ರಶಾಂತ್ ಭಾರತದಲ್ಲೇ ಇರುವ ಬಗ್ಗೆ ಅನುಮಾನ!
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಮೈಸೂರಿನಲ್ಲಿ ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ 2026
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ಸರ್ಕಾರಿ ಆಸ್ಪತ್ರೆಯ ಪಾಳುಬಿದ್ದ ಕಟ್ಟಡದಲ್ಲಿ ಲಕ್ಷಾಂತರ ಮೌಲ್ಯದ ಔಷಧ ಪತ್ತೆ!
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಡಿಕೇರಿ-ಕೊಡಗು ಭಾಗದಲ್ಲಿ ಕಾಫಿ ಬೆಳೆಗಾರರಿಗೆ ಎದುರಾಯ್ತು ಹೊಸ ತಲೆನೋವು
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಮಂಗಳೂರಿನಲ್ಲಿ ಆಹಾರ ಪರೀಕ್ಷಾ ಲ್ಯಾಬ್‌ನ ಅಗತ್ಯ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ಹಾರೋಹಳ್ಳಿಯಲ್ಲಿ ಸ್ಥಳ ಪರಿಶೀಲನೆ
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ಹನೂರು ಪ್ರಕರಣ: ಗೃಹ ಪ್ರವೇಶದ ಸಂಭ್ರಮ ತುಂಬಿರಬೇಕಿದ್ದ ಮನೆಯಲ್ಲೀಗ ಸೂತಕ!
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು
ನಿಮ್ಮ ಕನಸಿನ ಮನೆ ಅಥವಾ ಆಸ್ತಿಯನ್ನು ಖರೀದಿಸುವ ಸುವರ್ಣಾವಕಾಶ ಈಗ ನಿಮ್ಮದು