AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲುಗಳ ಕೋಟೆ ಮಧ್ಯೆ ನಿಂತನೀರು: ಯಾಮಾರಿ ನೀರಿಗಿಳಿದ್ರೆ ಪ್ರಾಣಕ್ಕೇ ಕುತ್ತು!

ಕೋಲಾರ: ಅದು ಸುಂದರ ಬೆಟ್ಟಗಳ ನಡುವೆ ಇರುವ ಸುಂದರ ನೀರಿನ ಕೆರೆ. ಸ್ವಿಮ್ಮಿಂಗ್ ಮಾಡಬಯಸುವ ಯುವಕರನ್ನು, ಪ್ರತ್ಯೇಕವಾಗಿ ಕಾಲ ಕಳೆಯುವ ಪ್ರೇಮಿಗಳನ್ನು ಆಕರ್ಷಿಸಬಲ್ಲ ಸ್ಥಳ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅದು ನಿಗೂಢವಾಗಿ ಪ್ರಾಣ ತೆಗೆಯುವ ಸ್ಪಾಟ್ ಕೂಡ ಹೌದು. ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬೆಟ್ಟದಲ್ಲಿರುವ ಕಲ್ಲುಗಳನ್ನು ರಸ್ತೆಕಾಮಗಾರಿಗಾಗಿ ಬಳಸಲಾಗಿದೆ. ಬಂಡೆ ಒಡೆದಿದ್ರಿಂದ ಆ ಜಾಗದಲ್ಲಿ ಬೃಹದಾಕಾರವಾದ ಕಂದಕ ಸೃಷ್ಟಿಯಾಗಿದೆ. ಅಲ್ಲಿ ನೀರಿನ ಸೆಲೆಯೊಡೆದು ಕೆರೆ ನಿರ್ಮಾಣವಾಗಿದೆ. ಇಲ್ಲಿರುವ ನೀರನ್ನ ಯಾರೇ ನೋಡಿದ್ರು ಒಂದು ಸಾರಿ ಆ ನೀರಿನಲ್ಲಿ […]

ಕಲ್ಲುಗಳ ಕೋಟೆ ಮಧ್ಯೆ ನಿಂತನೀರು: ಯಾಮಾರಿ ನೀರಿಗಿಳಿದ್ರೆ ಪ್ರಾಣಕ್ಕೇ ಕುತ್ತು!
ಸಾಧು ಶ್ರೀನಾಥ್​
|

Updated on:Feb 03, 2020 | 5:30 PM

Share

ಕೋಲಾರ: ಅದು ಸುಂದರ ಬೆಟ್ಟಗಳ ನಡುವೆ ಇರುವ ಸುಂದರ ನೀರಿನ ಕೆರೆ. ಸ್ವಿಮ್ಮಿಂಗ್ ಮಾಡಬಯಸುವ ಯುವಕರನ್ನು, ಪ್ರತ್ಯೇಕವಾಗಿ ಕಾಲ ಕಳೆಯುವ ಪ್ರೇಮಿಗಳನ್ನು ಆಕರ್ಷಿಸಬಲ್ಲ ಸ್ಥಳ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅದು ನಿಗೂಢವಾಗಿ ಪ್ರಾಣ ತೆಗೆಯುವ ಸ್ಪಾಟ್ ಕೂಡ ಹೌದು.

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬೆಟ್ಟದಲ್ಲಿರುವ ಕಲ್ಲುಗಳನ್ನು ರಸ್ತೆಕಾಮಗಾರಿಗಾಗಿ ಬಳಸಲಾಗಿದೆ. ಬಂಡೆ ಒಡೆದಿದ್ರಿಂದ ಆ ಜಾಗದಲ್ಲಿ ಬೃಹದಾಕಾರವಾದ ಕಂದಕ ಸೃಷ್ಟಿಯಾಗಿದೆ. ಅಲ್ಲಿ ನೀರಿನ ಸೆಲೆಯೊಡೆದು ಕೆರೆ ನಿರ್ಮಾಣವಾಗಿದೆ. ಇಲ್ಲಿರುವ ನೀರನ್ನ ಯಾರೇ ನೋಡಿದ್ರು ಒಂದು ಸಾರಿ ಆ ನೀರಿನಲ್ಲಿ ಇಳಿದು ಈಜಾಡಬೇಕು, ಆಟವಾಡಬೇಕು ಅನ್ಸುತ್ತೆ.

ಮೋಜು ಮಸ್ತಿ ಹೆಸರಲ್ಲೇ ಪ್ರಾಣ ಕಳೆದುಕೊಳ್ಳುತ್ತಿರುವ ಯುವಕರು: ಆದ್ರೆ ಈ ಸುಂದರ ಪ್ರದೇಶ ಸಾವಿನ ಕೂಪ ಅನ್ನೋದು ಅಷ್ಟೇ ಸತ್ಯ. ಇಲ್ಲಿ ಈಜಾಡಲು ಬಂದ ಹತ್ತಾರು ಯುವಕರುಗಳು ನಿಗೂಢವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಪ್ರದೇಶವನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಿರ್ಭಂದಿತ ಪ್ರದೇಶವಾಗಿ ಮಾಡಿದೆ. ಹೀಗಿದ್ರು ಕದ್ದು ಮುಚ್ಚಿ ಇಲ್ಲಿಗೆ ಬರುವ ಯುವಕ ಯುವತಿಯರು ಮೋಜು ಮಸ್ತಿ ಹೆಸರಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಇನ್ನು ವೀಕೆಂಡ್ ಬಂದ್ರೆ ಸಾಕು ಇಲ್ಲಿಗೆ ಯುವಕ, ಯುವತಿಯರು ಬಂದು ಸೇರ್ತಾರೆ. ಪೊಲೀಸ್ ಇಲಾಖೆಯ ನಿರ್ಭಂದವನ್ನು ಲೆಕ್ಕಿಸದೆ ಎಂಜಾಯ್ ಮಾಡಿಕೊಂಡು ಹೋಗ್ತಾರೆ. ಅಕ್ಕಪಕ್ಕದ ಜಮೀನುಗಳ ಮಾಲೀಕರು ಈ ಸ್ಥಳಕ್ಕೆ ಹೋಗದಂತೆ ತಿಳಿಸಿದ್ರು, ಅವರ ಮಾತಿಗೆ ಬೆಲೆ ಕೊಡದೆ ಇಲ್ಲಿ ಬಂದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಈ ನೀರಿನ ತಳದಲ್ಲಿ ಚೂಪಾದ ಕಲ್ಲು ಇದ್ದು, ಮೇಲಿಂದ ಡೈಹೊಡೆದಾಗ ಚುಚ್ಚಿ ಯುವಕರು ಸಾವನ್ನಪ್ಪುತ್ತಿದ್ದಾರೆ ಅನ್ನೋದು ಸ್ಥಳೀಯರ ಮಾತು.

ಒಟ್ಟಾರೆ ಸುಂದರ ಪ್ರಕೃತಿಯ ಮಧ್ಯೆ ಇರುವ ಸುಂದರ ನೀರಿನ ಹಳ್ಳ, ಎಷ್ಟು ಸುಂದರವೋ ಅಷ್ಟೇ ಮಾರಕ. ಇಲ್ಲಿಯ ತನ ಸುಮಾರು 20 ಕ್ಕೂ ಹೆಚ್ಚು ಜನ ಇಲ್ಲಿ ಪ್ರಾಣ ಕಳೆದುಕೊಂಡಿದ್ದು, ಇನ್ನಾದ್ರು ಪೊಲೀಸ್​ ಇಲಾಖೆ ಮತ್ತು ಜಿಲ್ಲಾಡಳಿತ ಈ ಸರಣಿ ಸಾವಿಗೆ ಬ್ರೇಕ್​ ಹಾಕಬೇಕಿದೆ.

Published On - 5:26 pm, Mon, 3 February 20

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ