AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲ್ಲುಗಳ ಕೋಟೆ ಮಧ್ಯೆ ನಿಂತನೀರು: ಯಾಮಾರಿ ನೀರಿಗಿಳಿದ್ರೆ ಪ್ರಾಣಕ್ಕೇ ಕುತ್ತು!

ಕೋಲಾರ: ಅದು ಸುಂದರ ಬೆಟ್ಟಗಳ ನಡುವೆ ಇರುವ ಸುಂದರ ನೀರಿನ ಕೆರೆ. ಸ್ವಿಮ್ಮಿಂಗ್ ಮಾಡಬಯಸುವ ಯುವಕರನ್ನು, ಪ್ರತ್ಯೇಕವಾಗಿ ಕಾಲ ಕಳೆಯುವ ಪ್ರೇಮಿಗಳನ್ನು ಆಕರ್ಷಿಸಬಲ್ಲ ಸ್ಥಳ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅದು ನಿಗೂಢವಾಗಿ ಪ್ರಾಣ ತೆಗೆಯುವ ಸ್ಪಾಟ್ ಕೂಡ ಹೌದು. ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬೆಟ್ಟದಲ್ಲಿರುವ ಕಲ್ಲುಗಳನ್ನು ರಸ್ತೆಕಾಮಗಾರಿಗಾಗಿ ಬಳಸಲಾಗಿದೆ. ಬಂಡೆ ಒಡೆದಿದ್ರಿಂದ ಆ ಜಾಗದಲ್ಲಿ ಬೃಹದಾಕಾರವಾದ ಕಂದಕ ಸೃಷ್ಟಿಯಾಗಿದೆ. ಅಲ್ಲಿ ನೀರಿನ ಸೆಲೆಯೊಡೆದು ಕೆರೆ ನಿರ್ಮಾಣವಾಗಿದೆ. ಇಲ್ಲಿರುವ ನೀರನ್ನ ಯಾರೇ ನೋಡಿದ್ರು ಒಂದು ಸಾರಿ ಆ ನೀರಿನಲ್ಲಿ […]

ಕಲ್ಲುಗಳ ಕೋಟೆ ಮಧ್ಯೆ ನಿಂತನೀರು: ಯಾಮಾರಿ ನೀರಿಗಿಳಿದ್ರೆ ಪ್ರಾಣಕ್ಕೇ ಕುತ್ತು!
ಸಾಧು ಶ್ರೀನಾಥ್​
|

Updated on:Feb 03, 2020 | 5:30 PM

Share

ಕೋಲಾರ: ಅದು ಸುಂದರ ಬೆಟ್ಟಗಳ ನಡುವೆ ಇರುವ ಸುಂದರ ನೀರಿನ ಕೆರೆ. ಸ್ವಿಮ್ಮಿಂಗ್ ಮಾಡಬಯಸುವ ಯುವಕರನ್ನು, ಪ್ರತ್ಯೇಕವಾಗಿ ಕಾಲ ಕಳೆಯುವ ಪ್ರೇಮಿಗಳನ್ನು ಆಕರ್ಷಿಸಬಲ್ಲ ಸ್ಥಳ. ಎಲ್ಲದ್ದಕ್ಕಿಂತ ಹೆಚ್ಚಾಗಿ ಅದು ನಿಗೂಢವಾಗಿ ಪ್ರಾಣ ತೆಗೆಯುವ ಸ್ಪಾಟ್ ಕೂಡ ಹೌದು.

ಕೋಲಾರ ತಾಲೂಕಿನ ಕೆಂದಟ್ಟಿ ಗ್ರಾಮದ ಬೆಟ್ಟದಲ್ಲಿರುವ ಕಲ್ಲುಗಳನ್ನು ರಸ್ತೆಕಾಮಗಾರಿಗಾಗಿ ಬಳಸಲಾಗಿದೆ. ಬಂಡೆ ಒಡೆದಿದ್ರಿಂದ ಆ ಜಾಗದಲ್ಲಿ ಬೃಹದಾಕಾರವಾದ ಕಂದಕ ಸೃಷ್ಟಿಯಾಗಿದೆ. ಅಲ್ಲಿ ನೀರಿನ ಸೆಲೆಯೊಡೆದು ಕೆರೆ ನಿರ್ಮಾಣವಾಗಿದೆ. ಇಲ್ಲಿರುವ ನೀರನ್ನ ಯಾರೇ ನೋಡಿದ್ರು ಒಂದು ಸಾರಿ ಆ ನೀರಿನಲ್ಲಿ ಇಳಿದು ಈಜಾಡಬೇಕು, ಆಟವಾಡಬೇಕು ಅನ್ಸುತ್ತೆ.

ಮೋಜು ಮಸ್ತಿ ಹೆಸರಲ್ಲೇ ಪ್ರಾಣ ಕಳೆದುಕೊಳ್ಳುತ್ತಿರುವ ಯುವಕರು: ಆದ್ರೆ ಈ ಸುಂದರ ಪ್ರದೇಶ ಸಾವಿನ ಕೂಪ ಅನ್ನೋದು ಅಷ್ಟೇ ಸತ್ಯ. ಇಲ್ಲಿ ಈಜಾಡಲು ಬಂದ ಹತ್ತಾರು ಯುವಕರುಗಳು ನಿಗೂಢವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ಪ್ರದೇಶವನ್ನು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ನಿರ್ಭಂದಿತ ಪ್ರದೇಶವಾಗಿ ಮಾಡಿದೆ. ಹೀಗಿದ್ರು ಕದ್ದು ಮುಚ್ಚಿ ಇಲ್ಲಿಗೆ ಬರುವ ಯುವಕ ಯುವತಿಯರು ಮೋಜು ಮಸ್ತಿ ಹೆಸರಲ್ಲೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಇನ್ನು ವೀಕೆಂಡ್ ಬಂದ್ರೆ ಸಾಕು ಇಲ್ಲಿಗೆ ಯುವಕ, ಯುವತಿಯರು ಬಂದು ಸೇರ್ತಾರೆ. ಪೊಲೀಸ್ ಇಲಾಖೆಯ ನಿರ್ಭಂದವನ್ನು ಲೆಕ್ಕಿಸದೆ ಎಂಜಾಯ್ ಮಾಡಿಕೊಂಡು ಹೋಗ್ತಾರೆ. ಅಕ್ಕಪಕ್ಕದ ಜಮೀನುಗಳ ಮಾಲೀಕರು ಈ ಸ್ಥಳಕ್ಕೆ ಹೋಗದಂತೆ ತಿಳಿಸಿದ್ರು, ಅವರ ಮಾತಿಗೆ ಬೆಲೆ ಕೊಡದೆ ಇಲ್ಲಿ ಬಂದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇನ್ನು ಈ ನೀರಿನ ತಳದಲ್ಲಿ ಚೂಪಾದ ಕಲ್ಲು ಇದ್ದು, ಮೇಲಿಂದ ಡೈಹೊಡೆದಾಗ ಚುಚ್ಚಿ ಯುವಕರು ಸಾವನ್ನಪ್ಪುತ್ತಿದ್ದಾರೆ ಅನ್ನೋದು ಸ್ಥಳೀಯರ ಮಾತು.

ಒಟ್ಟಾರೆ ಸುಂದರ ಪ್ರಕೃತಿಯ ಮಧ್ಯೆ ಇರುವ ಸುಂದರ ನೀರಿನ ಹಳ್ಳ, ಎಷ್ಟು ಸುಂದರವೋ ಅಷ್ಟೇ ಮಾರಕ. ಇಲ್ಲಿಯ ತನ ಸುಮಾರು 20 ಕ್ಕೂ ಹೆಚ್ಚು ಜನ ಇಲ್ಲಿ ಪ್ರಾಣ ಕಳೆದುಕೊಂಡಿದ್ದು, ಇನ್ನಾದ್ರು ಪೊಲೀಸ್​ ಇಲಾಖೆ ಮತ್ತು ಜಿಲ್ಲಾಡಳಿತ ಈ ಸರಣಿ ಸಾವಿಗೆ ಬ್ರೇಕ್​ ಹಾಕಬೇಕಿದೆ.

Published On - 5:26 pm, Mon, 3 February 20

ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಬಿಗ್​ಬಾಸ್​ಗೆ ಸಂಕಷ್ಟ; ಶೋ ಹಾಗೂ ನಟ ಸುದೀಪ್ ವಿರುದ್ಧ ದೂರು ದಾಖಲು
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
ಯೂಟ್ಯೂಬ್​​ನಲ್ಲಿರೋ ಟಾಕ್ಸಿಕ್’ ಟೀಸರ್​​ನ ಆ ದೃಶ್ಯಕ್ಕೆ ಬೀಳುತ್ತಾ ಕತ್ತರಿ?
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು