AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡುಕರ ಜಗಳ ಕೊಲೆಯಲ್ಲಿ ಅಂತ್ಯ..! ಪ್ರಾಣ ಸ್ನೇಹಿತನನ್ನೇ ಕೊಂದ ಗೆಳೆಯ

ಕೋಲಾರ: ಕುಡಿದ ಅಮಲಿನಲ್ಲಿ ಪ್ರಾಣ ಸ್ನೇಹಿತನನ್ನೇ ಕೊಂದಿರುವ ಘಟನೆಯೊಂದು ಕೋಲಾರದ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಮುನಿಯಪ್ಪ ಎಂದು ಗುರುತಿಸಲಾಗಿದೆ. ಕೂಲಿ ಕೆಲಸದಿಂದ ಕುಡಿಯೋವರೆಗೂ ಜೊತೆಗೆ ಇರುತ್ತಿದ್ದ ಮುನಿಯಪ್ಪ ಹಾಗೂ ಅವನ ಗೆಳೆಯ ಕೃಷ್ಣಪ್ಪ ಬಹಳ ಒಳ್ಳೇ ದೋಸ್ತಿಗಳು. ಕುಡಿದ ಮತ್ತಿನಲ್ಲಿ ಒಮ್ಮೊಮ್ಮೆ ಕಿತ್ತಾಡಿದ್ರೂ ಮತ್ತೆ ಬಹಳ ಬೇಗ ಒಂದಾಗಿಬಿಡ್ತಿದ್ರು. ಕುಡುಕರ ಗಮ್ಮತ್ತೇ ಹಾಗೆ ಏನೋ. ಆದರೆ ಮಂಗಳವಾರದಂದು ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಅದೇಕೋ ತಣ್ಣಗಾಗುವ ಲಕ್ಷಣ ತೋರದೆ ಕೊನೆಗೆ ಮುನಿಯಪ್ಪನ […]

ಕುಡುಕರ ಜಗಳ ಕೊಲೆಯಲ್ಲಿ ಅಂತ್ಯ..! ಪ್ರಾಣ ಸ್ನೇಹಿತನನ್ನೇ ಕೊಂದ ಗೆಳೆಯ
ಆಯೇಷಾ ಬಾನು
ಆಯೇಷಾ ಬಾನು|

Updated on:Jun 10, 2020 | 2:34 PM

Share

ಕೋಲಾರ: ಕುಡಿದ ಅಮಲಿನಲ್ಲಿ ಪ್ರಾಣ ಸ್ನೇಹಿತನನ್ನೇ ಕೊಂದಿರುವ ಘಟನೆಯೊಂದು ಕೋಲಾರದ ನರಸಾಪುರ ಹೋಬಳಿಯ ಕುರ್ಕಿ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿ ಮುನಿಯಪ್ಪ ಎಂದು ಗುರುತಿಸಲಾಗಿದೆ. ಕೂಲಿ ಕೆಲಸದಿಂದ ಕುಡಿಯೋವರೆಗೂ ಜೊತೆಗೆ ಇರುತ್ತಿದ್ದ ಮುನಿಯಪ್ಪ ಹಾಗೂ ಅವನ ಗೆಳೆಯ ಕೃಷ್ಣಪ್ಪ ಬಹಳ ಒಳ್ಳೇ ದೋಸ್ತಿಗಳು. ಕುಡಿದ ಮತ್ತಿನಲ್ಲಿ ಒಮ್ಮೊಮ್ಮೆ ಕಿತ್ತಾಡಿದ್ರೂ ಮತ್ತೆ ಬಹಳ ಬೇಗ ಒಂದಾಗಿಬಿಡ್ತಿದ್ರು. ಕುಡುಕರ ಗಮ್ಮತ್ತೇ ಹಾಗೆ ಏನೋ.

ಆದರೆ ಮಂಗಳವಾರದಂದು ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಅದೇಕೋ ತಣ್ಣಗಾಗುವ ಲಕ್ಷಣ ತೋರದೆ ಕೊನೆಗೆ ಮುನಿಯಪ್ಪನ ಕೊಲೆಯಲ್ಲಿ ಅಂತ್ಯವಾಯ್ತು. ಅಷ್ಟಕ್ಕೂ ಜಗಳ ಶುರುವಾಗಿದ್ದು ಕೂಲಿ ಹಂಚಿಕೊಳ್ಳುವ ವಿಚಾರಕ್ಕೆ. ಅಂದು ಎಂದಿನಂತೆ ದಿನಗೂಲಿ ಮುಗಿಸಿಕೊಂಡ ನಂತರ ಪಕ್ಕದ ಮದ್ಯದಂಗಡಿಯಲ್ಲಿ ಕಂಠಪೂರ್ತಿ ಕುಡಿದಿದ್ದರು. ನಂತ್ರ ತಮ್ಮ ಫೇವರೇಟ್ ಅಡ್ಡ ಆಗಿದ್ದ ಹತ್ತಿರದ ದೇವಾಲಯಕ್ಕೆ ಹೋಗಿ ಉಳಿದ ಕೂಲಿ ಹಣವನ್ನ ಹಂಚಿಕೊಳ್ಳೋಕೆ ಮುಂದಾದ್ರು.

ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಜಗಳ ಶುರುವಾಯ್ತು. ಸಿಟ್ಟಿನಲ್ಲಿ ಕೃಷ್ಣಪ್ಪ ಅಲ್ಲೇ ಇದ್ದ ದೊಣ್ಣೆಯೊಂದನ್ನ ತೆಗೊಂಡು ಮುನಿಯಪ್ಪನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಮುನಿಯಪ್ಪನಿಗೆ ತೀವ್ರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ನೇಹಿತನ ಮೃತ ದೇಹ ಕಂಡ ಕೃಷ್ಣಪ್ಪ ಗಾಬರಿಯಾಗಿ ಅಲ್ಲಿಂದ ಕಾಲ್ಕಿತ್ತ. ಇತ್ತ ಇವರ ಜಗಳ ದಿನಾ ಇದ್ದಿದ್ದೇ ಅಂತಾ ಸ್ಥಳೀಯರು ಸಹ ಅಲ್ಲಿ ಸುಳಿಯಲಿಲ್ಲ. ಮರುದಿನ ಬೆಳಗ್ಗೆ ಬಂದಾಗ್ಲೇ ಅವರಿಗೆ ವಿಷಯ ತಿಳಿದಿದ್ದು. ಕೂಡಲೇ ಪೊಲೀಸರಿಗೆ ಕರೆಮಾಡಿದ ಹಳ್ಳಿಯವರು ಮುನಿಯಪ್ಪನ ಮನೆಯವರಿಗೂ ಸಹ ವಿಷಯ ತಿಳಿಸಿದರು.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ವೇಮಗಲ್ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಕೃಷ್ಣಪ್ಪನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇಬ್ಬರು ಎಣ್ಣೆಗೋ ಅಥವಾ ಬೀಡಿಗೋ ಕಿತ್ತಾಡಿಕೊಂಡು ಆ ಭರದಲ್ಲಿ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ಅದೇನೇ ಇರಲಿ. ಈ ಪ್ರಸಂಗ ನೋಡಿದರೆ ಖಂಡಿತ ನೆನಪಾಗೋದು ಒಂದೇ ಮಾತು; ಕುಡಿಯುವ ಮತ್ತೇ ಗಮ್ಮತ್ತು.  ಅಳತೆ ಮೀರಿದರೇ ಆಪತ್ತು.

Published On - 12:28 pm, Wed, 10 June 20

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು