ಬಿಯರ್ ಖರೀದಿಸಲು ಬಾರ್​ಗೆ ಬಂದವರ ನಡುವೆ ಜಗಳ; ಮಧ್ಯೆ ಬಂದ ಕ್ಯಾಶಿಯರ್​ನನ್ನೇ ಕೊಂದು ಎಸ್ಕೇಪ್ ಆದವರು ಅರೆಸ್ಟ್ ಆದ್ರು!

ಡ್ರ್ಯಾಗರ್ನಿಂದ ಹೊಟ್ಟೆಗೆ ಇರಿಯುತ್ತಿದ್ದಂತೆ ಮೋಹನ್ರ ಕರುಳು ಹೊರಗೆ ಬಂದಿತ್ತು. ಕೂಡಲೇ ಆಸ್ಪತ್ರೆಗೆ ಹೋಗಲು ಯತ್ನಿಸಿದ್ದು ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು, ತುಮಕೂರಿನ ನೇರಳೇಕಟ್ಟೆಯ ಮೋಹನ್ ಊರು ಬಿಟ್ಟು ಇಲ್ಲಿಗೆ ಬಂದಿದ್ರು

ಬಿಯರ್ ಖರೀದಿಸಲು ಬಾರ್​ಗೆ ಬಂದವರ ನಡುವೆ ಜಗಳ; ಮಧ್ಯೆ ಬಂದ ಕ್ಯಾಶಿಯರ್​ನನ್ನೇ ಕೊಂದು ಎಸ್ಕೇಪ್ ಆದವರು ಅರೆಸ್ಟ್ ಆದ್ರು!
ಆರೀಫ್, ನವಾಜ್, ಮೋಹನ್
Follow us
| Updated By: ಆಯೇಷಾ ಬಾನು

Updated on: Mar 17, 2022 | 4:50 PM

ಕೋಲಾರ: ಬಾರ್ನಲ್ಲಿ ಎಣ್ಣೆ ಖರೀದಿ ಮಾಡೋಕೆ ಬಂದಿದವರು ಬಾರ್ನಲ್ಲಿ ಕಿರಿಕ್ ಮಾಡಿ ನೋಡ ನೋಡ್ತಿದ್ದಂತೆ ಕ್ಯಾಶಿಯರ್ರನ್ನೇ ಡ್ರ್ಯಾಗರ್ ಇರಿದು ಕೊಲೆ ಮಾಡಿ ಎಸ್ಕೇಪ್ ಆದ ಘಟನೆ ಕೋಲಾರದಲ್ಲಿ ನಡೆದಿದೆ. ಕೇವಲ ಎರಡೇ ನಿಮಿಷದಲ್ಲಿ ಇಂತಹದೊಂದು ಘಟನೆ ನಡೆದಿದೆ. ಮೊದಲಿಗೆ ಇಬ್ಬರ ನಡುವೆ ಜಗಳ ನಡೆಯುತ್ತೆ ಇಬ್ಬರ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪುತ್ತೆ. ಬಳಿಕ ಇವರಿಬ್ಬರಿಗೂ ಬುದ್ಧಿ ಹೇಳಲು ಮುಂದಾದ ಕ್ಯಾಶಿಯರ್ರನ್ನೇ ಆರೋಪಿಗಳು ಕೊಂದು ಎಸ್ಕೇಪ್ ಆಗಿದ್ದವರು ಅರೆಸ್ಟ್ ಆಗಿದ್ದಾರೆ.

ಕೋಲಾರ ನಗರದ ಟೇಕಲ್ ಸರ್ಕಲ್ನಲ್ಲಿರು ಚಾಲುಕ್ಯ ಬಾರ್ ಬಳಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿನಲ್ಲಿ ಷಹಿದ್ ನಗರದ ನವಾಜ್ ಹಾಗೂ ಆರೀಫ್, ಬಿಯರ್ ಕೇಳ್ಕೊಂಡು ಬಾರ್ಗೆ ಬಂದಿದರು. ಈ ವೇಳೆ 10 ರೂಪಾಯಿ ಹಣ ಕಡಿಮೆ ಕೊಟ್ಟಿದ್ದು, ಅದಕ್ಕೆ ಪೂರ್ತಿ ಹಣವನ್ನ ಕ್ಯಾಶಿಯರ್ ಮೋಹನ್ ಕೇಳಿದ್ದಾರೆ. ಈ ವೇಳೆ ನವಾಜ್ ಹಾಗೂ ಆರೀಫ್ ನಡುವೆ ಜಗಳ ಶುರುವಾಗಿದೆ. ನಂತರ ಇಬ್ಬರ ಜಗಳ ನೋಡಲಾಗದೆ ಮೋಹನ್ ಬಿಯರ್ ಕೊಟ್ಟು ಹೊರಡಿ ಎಂದಿದ್ದಾರೆ. ಇದಾದ ಬಳಿಕವೂ ಇಬ್ಬರ ಜಗಳ ನಿಂತಿಲ್ಲ. ಈ ವೇಳೆ, ಜಗಳ ಬಿಡಿಸಲು ಮೋಹನ್ ಹೋಗಿದ್ದಾರೆ. ಆದ್ರೆ, ಇಬ್ಬರು ಕ್ರಿಮಿಗಳು ತಮ್ಮ ಬಳಿಯಿದ್ದ ಡ್ರ್ಯಾಗರ್ನಿಂದ ಇರಿದು ಪರಾರಿಯಾಗಿದ್ರು.

ಡ್ರ್ಯಾಗರ್ನಿಂದ ಹೊಟ್ಟೆಗೆ ಇರಿಯುತ್ತಿದ್ದಂತೆ ಮೋಹನ್ರ ಕರುಳು ಹೊರಗೆ ಬಂದಿತ್ತು. ಕೂಡಲೇ ಆಸ್ಪತ್ರೆಗೆ ಹೋಗಲು ಯತ್ನಿಸಿದ್ದು ಅಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇನ್ನು, ತುಮಕೂರಿನ ನೇರಳೇಕಟ್ಟೆಯ ಮೋಹನ್ ಊರು ಬಿಟ್ಟು ಇಲ್ಲಿಗೆ ಬಂದಿದ್ರು. ಆದ್ರೆ, ಜೀವನ ಮಾಡಲು ಬಂದಿದ್ದವನನ್ನ ಪಾಪಿಗಳು ಕೊಂದಿದ್ದಾರೆ. ಆರೋಪಿಗಳಾದ ನವಾಜ್ ಹಾಗೂ ಆರೀಫ್ ಮೇಲೆ ಈಗಾಗಲೇ ಅನೇಕ ಕೇಸ್ಗಳಿವೆ. ಗಾಂಜಾ ಹೊಡೆದು, ಸಲ್ಯೂಶನ್ ಎಳೆದು ಮತ್ತೇರಿಸಿಕೊಂಡು ಸಿಕ್ಕ ಸಿಕ್ಕವ್ರ ಜತೆ ಜಗಳ ಮಾಡ್ತಿದ್ರಂತೆ. ಆದ್ರೆ, ಮೊನ್ನೆ ರಾತ್ರಿ ಬಿಯರ್ ವಿಷ್ಯಕ್ಕೆ ಗಲಾಟೆ ಮಾಡಿ ಒಬ್ಬನ ಜೀವ ತೆಗೆದು ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ, ಕೆಲವೇ ಕ್ಷಣಗಳಲ್ಲಿ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ಒಟ್ನಲ್ಲಿ, ಕುಡಿತದ ಚಟಕ್ಕೆ ಬಿದ್ದಿದ್ದ ಇಬ್ಬರು ಮಾಡಿದ ಕೃತ್ಯಕ್ಕೆ, ಕ್ಯಾಶಿಯರ್ ಮೋಹನ್ ಉಸಿರು ಚೆಲ್ಲಿದ್ದಾನೆ. ಮೋಹನ್ ಕಳೆದುಕೊಂಡು ಪತ್ನಿ ಹಾಗೂ ಇಬ್ಬರು ಮಕ್ಕಳು ಬಿಕ್ಕುತ್ತಿದ್ದು, ಬದುಕು ಹೇಗೆ ಎಂದು ಗೋಳಾಡ್ತಿದ್ದಾರೆ.

ವರದಿ: ರಾಜೇಂದ್ರಸಿಂಹ, ಟಿವಿ9 ಕೋಲಾರ

ಇದನ್ನೂ ಓದಿ: Covid-19 ಹಾಂಗ್ ಕಾಂಗ್​​ನಲ್ಲಿ ಒಂದೇ ದಿನ 21,650 ಹೊಸ ಕೊವಿಡ್ ಪ್ರಕರಣ ಪತ್ತೆ

ಜಿಮ್​ಗೆ ಹೋಗದೆಯೂ ದೇಹದ ತೂಕ ಇಳಿಸಿಕೊಳ್ಳಬಹುದು: ಇಲ್ಲಿವೆ ನೋಡಿ ಸಿಂಪಲ್​ ಸೂತ್ರಗಳು

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ