AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿಥಿಲಗೊಂಡಿದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ಮೇಲ್ಛಾವಣಿ; ಭಕ್ತರಿಂದ ಆಕ್ರೋಶ

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಈ ಸುತ್ತುಪೌಳಿ ದುರಸ್ತಿಗೊಳಿಸಬೇಕೆಂದು ಕ್ಷೇತ್ರದ ಹಿಂದಿನ ಹಾಗೂ ಈಗ ಇರುವ ವ್ಯವಸ್ಥಾಪನಾ ಮಂಡಳಿ ಎರಡೆರಡು ಬಾರಿ ಕ್ರಿಯಾ ಯೋಜನೆಯನ್ನು ಕಳುಹಿಸಿದೆ. ಆದರೆ ಮುಜರಾಯಿ ಇಲಾಖೆ ಮಾತ್ರ ಇತ್ತ ಗಮನವನ್ನೇ ಹರಿಸಿಲ್ಲ ಎಂದು ಕುಕ್ಕೆ ಹಿತರಕ್ಷಣಾ ಸಮಿತಿ ಸದಸ್ಯ ಶ್ರೀನಾಥ್ ಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಶಿಥಿಲಗೊಂಡಿದೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿ ಮೇಲ್ಛಾವಣಿ; ಭಕ್ತರಿಂದ ಆಕ್ರೋಶ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ
TV9 Web
| Updated By: preethi shettigar|

Updated on: Jul 07, 2021 | 3:35 PM

Share

ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಅತೀ ಶ್ರೀಮಂತ ದೇವಾಲಯ. ಲಕ್ಷಾಂತರ ಭಕ್ತರು ಈ ಕ್ಷೇತ್ರವನ್ನು ನಂಬಿ ಬರುತ್ತಾರೆ. ಆದರೆ ಕಳೆದ 13ವರ್ಷಗಳಿಂದ ಈ ದೇವಾಲಯದ ಸುತ್ತುಪೌಳಿಯ ಮೇಲ್ಫಾವಣಿ ಸೋರುತ್ತಿದೆ. ಅಷ್ಟೇ ಅಲ್ಲ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುತ್ತುಪೌಳಿಯ ಮೇಲ್ಫಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಈ ದುರಾವಸ್ಥೆಗೆ ಕಾರಣವಾದ ವ್ಯವಸ್ಥೆಗಳ ಬಗ್ಗೆ ಸದ್ಯ ಭಕ್ತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಈ ಸುತ್ತುಪೌಳಿ ದುರಸ್ತಿಗೊಳಿಸಬೇಕೆಂದು ಕ್ಷೇತ್ರದ ಹಿಂದಿನ ಹಾಗೂ ಈಗ ಇರುವ ವ್ಯವಸ್ಥಾಪನಾ ಮಂಡಳಿ ಎರಡೆರಡು ಬಾರಿ ಕ್ರಿಯಾ ಯೋಜನೆಯನ್ನು ಕಳುಹಿಸಿದೆ. ಆದರೆ ಮುಜರಾಯಿ ಇಲಾಖೆ ಮಾತ್ರ ಇತ್ತ ಗಮನವನ್ನೇ ಹರಿಸಿಲ್ಲ ಎಂದು ಕುಕ್ಕೆ ಹಿತರಕ್ಷಣಾ ಸಮಿತಿ ಸದಸ್ಯ ಶ್ರೀನಾಥ್ ಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಅತ್ಯಂತ ಹೆಚ್ಚಿನ ಆದಾಯದ ದೇವಸ್ಥಾನಗಳಲ್ಲಿ ಮೊದಲ ಸ್ಥಾನವನ್ನು ನಿರಂತರ ಕಾಯ್ದುಕೊಂಡಿರುವ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ 2018-19ರ ವರ್ಷದಲ್ಲಿ 92 ಕೋಟಿ, 2019-20 ರಲ್ಲಿ 98 ಕೋಟಿ ಹಾಗೂ 2020-21 ರಲ್ಲಿ ಕೊರೊನಾ ಸಂದರ್ಭದಲ್ಲಿಯೂ 68 ಕೋಟಿ ಆದಾಯ ಗಳಿಸಿದೆ. ಆದರೆ ಇಷ್ಟಿದ್ದರು ಇಲ್ಲಿನ ಸುತ್ತುಪೌಳಿಯ ದುರಸ್ಥಿ ಮಾತ್ರ ಇನ್ನು ಸಾಧ್ಯವಾಗಿಲ್ಲ. ದೇವಸ್ಥಾನದ ಪಕ್ಕದಲ್ಲೇ ಖಾಸಗಿ ಮಠವಿರುವುದರಿಂದ ದೇವಾಲಯ ಹಾಗೂ ಮಠದವರ ಸಮನ್ವಯತೆ ಇದಕ್ಕೆ ಬೇಕಾಗಿದೆ. ಹಾಗಾಗಿ ತಡವಾಗಿದೆ ಎಂಬುದು ಇಲ್ಲಿನ ಅಧಿಕಾರಿಗಳ ವಾದ.

ಇನ್ನು ಈ ದೇವಾಲಯದ ಅಭಿವೃದ್ಧಿ ಕೆಲಸಗಳಿಗಾಗಿ ಸರ್ಕಾರ ವಿಶೇಷ ಅನುದಾನವನ್ನು ನೀಡುವ ಅನಿವಾರ್ಯತೆಯೇನೂ ಇಲ್ಲ. ಕ್ಷೇತ್ರಕ್ಕೆ ಬರುವ ಆದಾಯವನ್ನೇ ಬಳಿಸಿಕೊಂಡು ಕ್ಷೇತ್ರವನ್ನು ಅತ್ಯುನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸಾಧ್ಯವಿದೆ. ಆದರೆ ಅಧಿಕಾರವಿರುವವರ ಅನಾಸಕ್ತಿ ಇದೀಗ ಈ ಕ್ಷೇತ್ರ ಅವ್ಯವಸ್ಥೆಯ ಸ್ಥಿತಿಗೆ ತಲುಪುವಂತೆ ಮಾಡಿದೆ ಎನ್ನುವುದು ಭಕ್ತರ ಆರೋಪ. ಒಟ್ಟಿನಲ್ಲಿ ಇನ್ನಾದರೂ ದುರಸ್ಥಿ ಮಾಡುವ ಮನಸ್ಸನ್ನು ಅಧಿಕಾರಿಗಳು ಮಾಡಲಿ ಎಂಬುದು ನಮ್ಮ ಆಶಯ.

ಇದನ್ನೂ ಓದಿ:

ಕೊರೊನಾ ಸಂಕಷ್ಟ ಪರಿಹಾರಕ್ಕಾಗಿ ಪ್ರಧಾನಿ ಮೋದಿ ಕುಕ್ಕೆ ಸುಬ್ರಹ್ಮಣ್ಯನ ಮೊರೆ ಹೋಗಲಿ: ಈ ಬಗ್ಗೆ ಪ್ರಕಾಶ್ ಅಮ್ಮಣ್ಣಾಯ ಹೇಳೋದೇನು?

ರಾಮಚಂದ್ರಾಪುರ ಮಠದಿಂದ ಕೈ ಜಾರಿದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನ; ದೇಗುಲವನ್ನು ಮುಜರಾಯಿ ಇಲಾಖೆಗೆ ಹಿಂದಿರುಗಿಸಲು ಸುಪ್ರೀಂ ಆದೇಶ