‘ಲಕ್ಷ್ಮೀ’ ಬ್ಯಾಂಕ್​ ಮಹಾದೋಖಾ, ಹಿರಿಯ ಜೀವಗಳು ಕಂಗಾಲು!

ದಾವಣಗೆರೆ: ಲಕ್ಷ್ಮೀ ಕೋ ಆಪರೇಟಿವ್​​​ ಬ್ಯಾಂಕ್ ಹೆಸರಲ್ಲಿ ಕಾಂಚಾಣವನ್ನ ಇಟ್ಕೊಂಡಿರೋ ಈ ಬ್ಯಾಂಕ್​​​​ನಿಂದ ಹಿರಿಯ ಜೀವಗಳೆಲ್ಲ ಕಂಗಾಲಾಗಿವೆ. ಲಾಯರ್​ ರಸ್ತೆಯಲ್ಲಿರೋ ಈ ಬ್ಯಾಂಕ್​​ಗೆ ಹಣ ಕಟ್ಟಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಯಾಕಂದ್ರೆ, ಕಟ್ಟಿರೋ ಠೇವಣಿಗೆ ವರ್ಷದಿಂದ ಬಡ್ಡಿಕೊಟ್ಟಿಲ್ವಂತೆ. ಅಲ್ಲದೆ, ಬ್ಯಾಂಕ್​ ಹೆಸ್ರಲ್ಲಿ ಕೊಡ್ತಿರೋ ಚೆಕ್​​ ಬೌನ್ಸ್​​ ಆಗ್ತಿದೆ. ಹೀಗಾಗಿ, ಸುಮಾರು 20 ಕೋಟಿ ಹಣವನ್ನ ಠೇವಣಿ ದಾರರಿಗೆ ನೀಡಬೇಕಾಗಿದ್ದು, ಹಣ ವಾಪಸ್​ ನೀಡುವಂತೆ ಆಗ್ರಹಿಸಿ ಜನರೆಲ್ಲ ಪ್ರತಿಭಟನೆ ಕೂತಿದ್ದಾರೆ. ಬ್ಯಾಂಕ್​ನಲ್ಲಿ ಅವ್ಯವಹಾರ ಆರೋಪ:  ವೈದ್ಯ ಎಸ್​​.ಆರ್​.ಹೆಗಡೆ […]

‘ಲಕ್ಷ್ಮೀ’ ಬ್ಯಾಂಕ್​ ಮಹಾದೋಖಾ, ಹಿರಿಯ ಜೀವಗಳು ಕಂಗಾಲು!
ಸಾಧು ಶ್ರೀನಾಥ್​

Updated on: Nov 23, 2019 | 12:04 PM

ದಾವಣಗೆರೆ: ಲಕ್ಷ್ಮೀ ಕೋ ಆಪರೇಟಿವ್​​​ ಬ್ಯಾಂಕ್ ಹೆಸರಲ್ಲಿ ಕಾಂಚಾಣವನ್ನ ಇಟ್ಕೊಂಡಿರೋ ಈ ಬ್ಯಾಂಕ್​​​​ನಿಂದ ಹಿರಿಯ ಜೀವಗಳೆಲ್ಲ ಕಂಗಾಲಾಗಿವೆ. ಲಾಯರ್​ ರಸ್ತೆಯಲ್ಲಿರೋ ಈ ಬ್ಯಾಂಕ್​​ಗೆ ಹಣ ಕಟ್ಟಿ ಸಾವಿರಾರು ಜನರು ಬೀದಿಗೆ ಬಂದಿದ್ದಾರೆ. ಯಾಕಂದ್ರೆ, ಕಟ್ಟಿರೋ ಠೇವಣಿಗೆ ವರ್ಷದಿಂದ ಬಡ್ಡಿಕೊಟ್ಟಿಲ್ವಂತೆ. ಅಲ್ಲದೆ, ಬ್ಯಾಂಕ್​ ಹೆಸ್ರಲ್ಲಿ ಕೊಡ್ತಿರೋ ಚೆಕ್​​ ಬೌನ್ಸ್​​ ಆಗ್ತಿದೆ. ಹೀಗಾಗಿ, ಸುಮಾರು 20 ಕೋಟಿ ಹಣವನ್ನ ಠೇವಣಿ ದಾರರಿಗೆ ನೀಡಬೇಕಾಗಿದ್ದು, ಹಣ ವಾಪಸ್​ ನೀಡುವಂತೆ ಆಗ್ರಹಿಸಿ ಜನರೆಲ್ಲ ಪ್ರತಿಭಟನೆ ಕೂತಿದ್ದಾರೆ.

ಬ್ಯಾಂಕ್​ನಲ್ಲಿ ಅವ್ಯವಹಾರ ಆರೋಪ: 
ವೈದ್ಯ ಎಸ್​​.ಆರ್​.ಹೆಗಡೆ ಅವ್ರು, ಬ್ಯಾಂಕ್​​​ ಅಧ್ಯಕ್ಷರಾಗಿದ್ದಾಗ ಅವ್ಯವಹಾರ ನಡೆದಿರೋ ಆರೋಪವಿದೆ. ಬ್ಯಾಂಕ್​​​​​​ನ ನಷ್ಟದ ವಿಷ್ಯ ಗೊತ್ತಾಗೇ, ಅವ್ರ ನಂತರ ಅಧ್ಯಕ್ಷರಾದ ಮೋಹನ್​ ದೀಕ್ಷಿತ್​​ 20 ದಿನದ ಹಿಂದೆ ಅವ್ರು ರಾಜಿನಾಮೆ ಕೊಟ್ರು. ಇನ್ನು, 20 ಮಂದಿ ಪ್ರಭಾವಿಗಳು ಬ್ಯಾಂಕ್​​ನಿಂದ ಕೋಟ್ಯಂತರ ರೂ. ಸಾಲ ಪಡೆದಿದ್ದು, ಆ ಹಣವನ್ನ ರಿಯಲ್​ ಎಸ್ಟೇಟ್​​​ನಲ್ಲಿ ತೊಡಗಿಸಿದ್ದಾರೆ. ಆದ್ರೀಗ ಸೈಟ್​ಗಳ ದರ ಕುಸಿದಿದ್ದು, ಬಂಡವಾಳ ವಾಪಸ್​​ ಬರುತ್ತಿಲ್ಲ.

ಇದಕ್ಕೆಲ್ಲ ಕಾರಣವಾದ ವ್ಯವಸ್ಥಾಪಕ ಸತೀಶ್​ ಅವ್ರು ಬ್ಯಾಂಕ್​ಗೆ ಬರುತ್ತಿಲ್ಲ ಅನ್ನೋ ಆರೋಪ ಕೇಳಿಬಂದಿದ್ದು, ಸಹಕಾರ ಇಲಾಖೆ ತನಿಖೆಗೆ ಆದೇಶ ನೀಡಿದೆ. ಕೈಯಲ್ಲಿ ಇದ್ದ ಹಣವನ್ನ ಠೇವಣಿ ಕಟ್ಟಿದ ಜನರೆಲ್ಲ ಈಗ ಬರಿಗೈ ಆಗಿದ್ದಾರೆ. ಬೀದಿಯಲ್ಲಿ ನಿಂತಿರೋ ಈ ಹಿರಿಯ ಜೀವಗಳಿಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ.

Published On - 8:15 am, Sat, 23 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us